ಶ್ರೀ ಸದ್ಗುರು ಕಬೀರಾನಂದ ಹಾಗೂ ಕಬೀರೇಶ್ವರ ಮಹಾಸ್ವಾಮಿಗಳ 69ನೇ ಮತ್ತು 59ನೇ ಪುಣ್ಯಾರಾಧನಾ ಸಮಾರಂಭ ನ.13

ಚಿತ್ರದುರ್ಗ ನ. 12

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಗರದ ಕಬೀರಾನಂದ ನಗರದಲ್ಲಿನ ಶ್ರೀ ಗುರು ಕಬೀರಾನಂದಾಶ್ರಮದಲ್ಲಿ ನ. 13 ರ ಗುರುವಾರ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 69ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿ ಗಳವರ 59ನೇ ಪುಣ್ಯಾರಾಧನಾ ಸಮಾರಂಭವೂ ಸಂಜೆ 7 ಗಂಟೆಗೆ ಕಬೀರಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಶ್ರೀ ಗುರು ಕಬೀರಾನಂದಾಶ್ರಮದ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.


ಕಳೆದ ನ. 7 ರ ಕಾರ್ತಿಕ ಬಹುಳ ತದಿಗೆಯಿಂದ ನ 13ರ ಕಾರ್ತೀಕ ಬಹುಲ ನವಮಿಯವರೆಗೂ ಪ್ರತಿ ದಿನ ಸಂಜೆ 7 ರಿಂದ 9ರವರೆಗೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆಯುತ್ತಿದೆ. ನ. 13ರ ಗುರುವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಕರ್ತೃ ಗದ್ದುಗೆಗ ರುದ್ರಾಭೀಷೇಕ ನಡೆಯಲಿದ್ದು ಸಂಜೆ ಮಹಾಮಂಗಳರಾತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.


ಸಂಜೆ 7 ಗಂಟೆಯಿಂದ ಪುಣ್ಯಾರಾಧನೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಸಾನಿಧ್ಯವನ್ನು ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾ ಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯೂರಿನ ಶ್ರೀ ಆನಂದಾಶ್ರಮದ ಶಂಕರಾನಂದ ಮಹಾ ಸ್ವಾಮಿಗಳು ವಹಿಸಲಿದ್ದಾರೆ. ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳು ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ ಬಗ್ಗೆ ಶರಣ ಸಾಹಿತಿಗಳಾದ ಪ್ರೋ.ಹೆಚ್.ಲಿಂಗಪ್ಪನವರು ಉಪನ್ಯಾಸವನ್ನು ನೀಡಲಿದ್ದಾರೆ.


ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ರಮೇಶ್, ಕೆಡಿಪಿ ಸದಸ್ಯರಾದ ಕೆ.ಸಿ. ನಾಗರಾಜ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಸಿದ್ದವ್ವನಹಳ್ಳಿ ಪರಮೇಶ್ವರಪ್ಪ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಮಾಜಿ ಸದಸ್ಯರಾದ ಓಂಕಾರ್, ಮೇದೇಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ನಗರಸಭೆಯ ಸದಸ್ಯರಾದ ವೆಂಕಟೇಶ್, ಜಿ.ಪಂ. ನಿವೃತ್ತ ವ್ಯವಸ್ಥಾಪಕರಾದ ನಾಗರಾಜ್ ಸಗಂ, ಮಾತೃಶ್ರೀ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶೀ ವಿ.ಎಲ್ ಪ್ರಶಾಂತ್ ಭಾಗವಹಿಸಲಿದ್ದಾರೆ.

Views: 18

Leave a Reply

Your email address will not be published. Required fields are marked *