ದರ್ಜಿ ಕಾಲೋನಿ ಶ್ರೀ ದುರ್ಗಾದೇವಿಯ ದೇವಸ್ಥಾನದ ವತಿಯಿಂದ 68ನೇ ವರ್ಷದ ಹೊರಬೀಡು ಜಾತ್ರಾ ಮಹೋತ್ಸವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 24 : ಚಿತ್ರದುರ್ಗ ನಗರದ ಐಯ್ಯಣ್ಣಪೇಟೆಯಲ್ಲಿನ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದರ್ಜಿ ಕಾಲೋನಿ ಶ್ರೀ ದುರ್ಗಾದೇವಿಯ ದೇವಸ್ಥಾನದ ವತಿಯಿಂದ 68ನೇ ವರ್ಷದ ಹೊರಬೀಡು ಜಾತ್ರಾ ಮಹೋತ್ಸವವನ್ನು ಜ. 23 ರಿಂದ 28 ರವರೆಗೆ ಹಮ್ಮಿಕೊಳ್ಳಲಾಗಿದೆ.

ಜ. 23ರ ಗುರುವಾರ ಶ್ರೀ ದುರ್ಗಾದೇವಿಗೆ ಗಂಗಾ ಪೂಜೆಯನ್ನು ನಡೆಸಲಾಯಿತು. ಜ. 24 ರಂದು ಕಂಕಣ ಧಾರಣೆ ಮಾಡಿದ ನಂತರ
ಭಕ್ತರ ಮನೆಗೆ ಭೇಟಿಯನ್ನು ನೀಡಿ ಭಂಢಾರವನ್ನು ಹಂಚಲಾಯಿತು, ತದ ನಂತರ ಭಾವಸಾರ ಕ್ಷತ್ರಿಯ ಕಲ್ಯಾಣ ಮಂಟಪದಿಂದ
ಪ್ರಾರಂಭವಾದ ಅಮ್ಮನವರ ಮೆರವಣಿಗೆ ಚಿಕ್ಕಪೇಟೆ, ಆನೆಬಾಗಿಲು ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಬಿ.ಡಿ.ರಸ್ತೆ ವಾಸವಿಮಹಲ್
ರಸ್ತೆ, ಪ್ರಸನ್ನ ಟಾಕೀಸ್ ರಸ್ತೆ, ಗೋಪಾಲಪು ರಸ್ತೆಯ ಮೂಲಕ ದರ್ಜಿ ಕಾಲೋನಿಯಲ್ಲಿನ ದುರ್ಗಾದೇವಿ ದೇವಸ್ಥಾನವನ್ನು ತಲುಪಿತು.
ಜ. 26 ರಂದು ದೇವಸ್ಥಾನದ ಆವರಣದಲ್ಲಿ ಅಮ್ಮನವರಿಗೆ ಸಂಜೆ ಉಯ್ಯಾಲೆ ಉತ್ಸವ ನಡೆಯಲಿದ್ದು, ಜ. 28 ರಂದು ಚಂದ್ರವಳ್ಳಿಗೆ
ಹೊರಬೀಡು ಕಾರ್ಯಕ್ರಮ ನಡೆಯಲಿದ್ದು ಈ ಸಮಯದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.

ಇಂದು ನಗರದ ಭಾವಸಾರ ಕಲ್ಯಾಣ ಮಂಟಪದಲ್ಲಿ ದುರ್ಗಾದೇವಿಯನ್ನು ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು
ಮಾಡುವುದರ ಮೂಲಕ ಬೆಳ್ಳಿಯ ಮುಖಪದ್ಮವನ್ನು ಇರಿಸಿ, ತಲೆಯ ಮೇಲೆ ನಾಗರ ಹಾವಿನ ಹಡೆಯನ್ನು ನಿರ್ಮಾಣ ಮಾಡಿ, ಬೆಳ್ಳಿ
ಕೈಗಳಿಂದ ಭಕ್ತಾರನ್ನು ಆರ್ಶೀವಾದ ಮಾಡುವ ರಿತೀಯಲ್ಲಿ ಅಲಂಕಾರವನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಭಾವಸಾರ ಕ್ಷತೀಯ ಸಮಾಜದ ಅಧ್ಯಕ್ಷರಾದ ಆರ್.ಕೆ.ಶ್ಯಾಂ,ಪ್ರಧಾನ ಕಾರ್ಯದರ್ಶಿ ಕೆ.ಇಬಿ ನಾಗರಾಜ್,
ಕಾರ್ಯದರ್ಶಿ ಖಂಜಾಚಿ ರಾಜೇಶ್ ಬೇದ್ರೇ, ಶ್ರೀನಾಥ್, ಶ್ರೀಧರ್, ಪರಶುರಾಮ್, ಮಮತ, ನಾಗರಾಜ್, ನಾಗರಾಜ್ ಬೇದ್ರೇ,
ಸೇರಿದಂತೆ ಭಾವಸಾರ ಯುವಕ ಹಾಗೂ ಮಹಿಳಾ ಮಂಡಳಿ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *