![](https://samagrasuddi.co.in/wp-content/uploads/2024/08/image-48.png)
![](https://samagrasuddi.co.in/wp-content/uploads/2024/08/image-45-225x300.png)
ಚಿತ್ರದುರ್ಗ : ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6ಮ ತ್ತು7ನೇ ತರಗತಿಯ ವಿದ್ಯಾರ್ಥಿಗಳಿಗೆ ಆಡು ಮಲ್ಲೇಶ್ವರ ಅರಣ್ಯದಲ್ಲಿರುವ ವಿವಿಧ ಜಾತಿಯ ಔಷಧೀಯ ಸಸ್ಯ, ವಿಶೇಷ ಜಾತಿಯ ಮರ ಮತ್ತು ಪರಿಸರದಲ್ಲಿ ಮರ ಗಿಡಗಳ ಮಹತ್ವವನ್ನು ಪರಿಚಯಿಸಲು ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
![](https://samagrasuddi.co.in/wp-content/uploads/2024/08/image-46-300x225.png)
ವಿದ್ಯಾರ್ಥಿಗಳಿಗೆ ಯಾವ ಯಾವ ಸಸ್ಯ ಯಾವ ಯಾವ ರೋಗಗಳಿಗೆ ಔಷಧ ವಾಗಿ ಬಳಸಲಾಗುತ್ತದೆ, ಮರಗಳ ಗಾತ್ರ, ಎಲೆಯ ಮಹತ್ವ ಗಿಡಗಳಿಂದ ಔಷಧಿ ತಯಾರಿಸುವ ವಿಧಾನ ಮುಂತಾದ ಅಮೂಲ್ಯ ಮಾಹಿತಿಯನ್ನು ನೀಡಲಾಯಿತು.
![](https://samagrasuddi.co.in/wp-content/uploads/2024/08/image-47-300x225.png)
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್ ಮತ್ತು ಶಿಕ್ಷಕರಾದ ಚಂದ್ರಶೇಖರ್, ಮಮಜಾನ್, ಸುನಿತ, ಮುಂತಾದವರು ಹಾಜರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.