ಚಿತ್ರದುರ್ಗ ಸೆ. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಈ ಬಗ್ಗೆ ಆಯೋಗ ಈ ಕೂಡಲೇ ಸ್ಪಷ್ಟನೆ ಕೊಡಬೇಕು. ಆಧಿಕೃತ ಪ್ರಕಟಣೆಯಲ್ಲಿ ಪರಿಶಿಷ್ಟ ಜಾತಿಗಳ ಕ್ರೈಸ್ತ ಟ್ಯಾಗ್ ತೆಗೆಯಬೇಕು ಎಂದು ರಾಜ್ಯ ಸರ್ಕಾರವನ್ನು ಚಿತ್ರದುರ್ಗ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಜಿ.ಎಚ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಕಳೆದ ಆಗಸ್ಟ್ 23 ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ 4 ಪುಟಗಳ ಜಾಹಿರಾತನ್ನು ಪತ್ರಿಕೆಗಳಿಗೆ ಕೊಟ್ಟು ಸಮೀಕ್ಷೆಗೆ ಸಿದ್ಧಪಡಿಸಿರುವ 1400 ಜಾತಿಗಳ ಪಟ್ಟಿ ಘೋಷಿಸಿತು . ಆ ಪಟ್ಟಿಯಲ್ಲಿ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು . ಈ 48 ಜಾತಿಗಳಲ್ಲಿ 15 Sಅ ಜಾತಿಗಳು 1 Sಖಿ ( ವಾಲ್ಮೀಕಿ ಕ್ರಿಶ್ಚಿಯನ್ ) ಜಾತಿಗಳಿದ್ದವು . ರಾಜ್ಯದಾದ್ಯಂತ ತೀವ್ರ ಸ್ವರೂಪ ಹೋರಾಟ ನೆಡೆದ ನಂತರ ನಿನ್ನೆ ಆಯೋಗದ ಅಧ್ಯಕ್ಷರು 33 ಹಿಂದು ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ ಂಠಿಠಿ ನಲ್ಲಿ ‘ ಊiಜe ‘ ಮಾಡಿರುವುದಾಗಿ ಹೇಳಿದ್ದಾರೆ . ಹೀಗೆ ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ ಂಠಿಠಿ ನಲ್ಲಿ ಕಿತ್ತು ಹಾಕಿದ ಅಧಿಕೃತ ಪ್ರಕಟಣೆಯನ್ನು ಈಗಲೇ
ಅಯೋಗ ಕೊಡಬೇಕು ಎಂಬುದು ನಮ್ಮ ಆಗ್ರಹವಾಗಿದ್ದು, ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು , ಉಳಿದ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ , ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ . ಇವತ್ತಿನಿಂದ ಸಮೀಕ್ಷೆ ಆರಂಭವಾಗಬೇಕಿದೆ . ಆದರೆ ಪರಿಶಿಷ್ಟ ಜಾತಿಗಳಲ್ಲಿ ಗೊಂದಲಗಳೂ ಹಾಗೆ ಉಳಿದಿವೆ ಅಂದರೆ ಈ ಜಾತಿ ಸಮೀಕ್ಷೆಗೆ ಗೌರವ ಎಲ್ಲಿಂದ ಬರುತ್ತದೆ ? ದಲಿತರ ನಡುವೆ ಕ್ರೈಸ್ತ ಜಾತಿಗಳನ್ನು ಸೇರಿಸುಕೊಂಡು ಜಾತಿಸಮೀಕ್ಷೆ ಮಾಡುವುದು ಸಂವಿಧಾನ ವಿರೋಧಿಯಾದದ್ದು . ಸಂವಿಧಾನದ 341ನೇ ವಿಧಿಯ ಅನ್ವಯ ಇಲ್ಲದ ಜಾತಿಪಟ್ಟಿ ಹಿಡಿದು
ಸಮೀಕ್ಷೆ ಮಾಡಲು ನಾವು ಬಿಡುವುದಿಲ್ಲ . ಕ್ರಮಬದ್ಧತೆಯೇ ಇಲ್ಲದ ಈ ಜಾತಿ ಸಮೀಕ್ಷೆಯ ಗೊಂದಲದ ಹಿಂದೆ ಕೊಳಕು ರಾಜಕಾರಣದ ಹುನ್ನಾರ ಇದೆ ಎಂದು ದೂರಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೆ ನ್ಯಾ ನಾಗಮೋಹನ್ ದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ . ಅದಕ್ಕೆ ದಲಿತರ ಮೀಸಲು ನಿಧಿಯಿಂದ 150 ಕೋಟಿ ರೂ ವ್ಯಯಿಸಲಾಗಿದೆ . ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯ ಏನಿದೆ ? ಎರಡು ತಿಂಗಳಲ್ಲಿ ದಲಿತರ ಸಾಮಾಜಿಕ , ಶೈಕ್ಷಣಿಕ ಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿರುತ್ತದೆ ? ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರೈಸ್ತರ ಸೇರ್ಪಡೆಯಿಂದ ಸಮೀಕ್ಷೆ ನಗೆಪಾಟಲಿಗೆ ಗುರಿಯಾಗಿದೆ . ಸರ್ಕಾರ ಇಡೀ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ . ಹೈಕಮಾಂಡ್ ಅನ್ನು ಓಲೈಸಲು ಸಾಮಾಜಿಕ ನ್ಯಾಯದ ಹಿತವನ್ನು ಬಲಿಕೊಡಲಾಗಿದೆ ಎಂದು ಆರೋಪಿಸಿದರು.
ಒಳಮೀಸಲಾತಿಯ ವರ್ಗೀಕರಣದ ವಿಷಯ ಇನ್ನೂ ಬಗೆಹರಿದಿಲ್ಲ . ಸರ್ಕಾರ 59 ಅಲೆಮಾರಿ ಜಾತಿಗಳನ್ನು ಬೀದಿ ಪಾಲು ಮಾಡಿದೆ .ಂ ಏ , ಂಆ , ಂಂ ಜಾತಿಗಳ ಸಮಸ್ಯೆಯೂ ಬಗೆಹರಿದಿಲ್ಲ . ಹೀಗಿರುವಾಗ ಈ ಸಮೀಕ್ಷೆಯಲ್ಲಿ ಆದಿ ದ್ರಾವಿಡ ಕ್ರೈಸ್ತ , ಆದಿ ಕರ್ನಾಟಕ ಕ್ರೈಸ್ತ , ಆದಿ ಆಂಧ್ರ ಕ್ರೈಸ್ತ , ಮಾದಿಗ ಕ್ರೈಸ್ತ , ಹೊಲೆಯ ಕ್ರೈಸ್ತ , ಪರೆಯ ಕ್ರೈಸ್ತ , ಬಂಜಾರ ಕ್ರೈಸ್ತ , ವಡ್ಡ ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಸಮೀಕ್ಷೆ ನೆಡಸಿದರೆ ಫಲಿತಾಂಶ ಏನಾದೀತು? ಸರ್ಕಾರದ ಉದ್ದೇಶವಾದರೂ ಏನು ? ಎರಡು ತಿಂಗಳ ಹಿಂದೆ ಇಲ್ಲದ ಜಾತಿಗಳು ಈಗ ಹೇಗೆ ಬಂದವು ? ಎಸ್ಸಿ ಪಟ್ಟಿಯಲ್ಲಿ ಕ್ರೈಸ್ತ ಜಾತಿಗಳು ನುಸುಳಿವೆ ಎಂದರೆ ಈ ಬೇಜವಾಬ್ದಾರಿಗೆ ಯಾರು ಹೊಣೆ? ಅನಧಿಕೃತವಾಗಿದ್ದ ಕುರುಬ ಕ್ರೈಸ್ತ , ಒಕ್ಕಲಿಗ ಕ್ರೈಸ್ತ , ಲಿಂಗಾಯತ ಕ್ರೈಸ್ತ ಇತ್ಯಾದಿ ಪ್ರಬಲ ಜಾತಿಗಳನ್ನು ಪಟ್ಟಿಯಿಂದ ತೆಗೆದ
ಸರ್ಕಾರ ಹೊಲೆಯ ಕ್ರೈಸ್ತ , ಮಾದಿಗ ಕ್ರೈಸ್ತ , ಬಂಜಾರ ಕ್ರೈಸ್ತ ಜಾತಿಗಳನ್ನು ಉಳಿಸಿರುವುದರ ಹಿಂದೆ ಷಡ್ಯಂತ್ರವಿದೆ . ಇಡೀ ಒಳಮೀಸಲಾತಿಯ ಹಂಚಿಕೆಯನ್ನು ದಿಕ್ಕು ತಪ್ಪಿಸಲು ಸರ್ಕಾರ ಹೊರಟಿದೆ .ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು . ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದೇವೆ . ಆಯೋಗ ಈ ಕೂಡಲೇ ಸ್ಪಷ್ಟನೆ ಕೊಡಬೇಕು. ಆಧಿಕೃತ ಪ್ರಕಟಣೆಯಲ್ಲಿ ಪರಿಶಿಷ್ಟ ಜಾತಿಗಳ ಕ್ರೈಸ್ತ ಟ್ಯಾಗ್ ತೆಗೆಯಬೇಕು ಎಂದು ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Views: 16