ಬಿ.ಕಾಂ ಪರೀಕ್ಷೆಯಲ್ಲಿ ಸ್ಕೀಮ್ ಆಫ್ ವ್ಯಾಲ್ಯುವೇಷನ್ ಪತ್ರಿಕೆ ವಿತರಣೆ ನಡೆದಿರುವ ನಿರ್ಲಕ್ಷಕ್ಕೆ ಕಾರಣರಾದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ಜಿಲ್ಲಾಡಳಿತ ಮೂಲಕ ದಾವಣಗೆರೆ ವಿವಿಯ ರಾಜ್ಯ ಪರೀಕ್ಷಾಂಗ ಅಧಿಕಾರಿಗಳನ್ನು ಒತ್ತಾಯಿಸಿದೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 07 : ಬಿ.ಕಾಂ ಪರೀಕ್ಷೆಯಲ್ಲಿ ಸ್ಕೀಮ್ ಆಫ್ ವ್ಯಾಲ್ಯುವೇಷನ್ ಪತ್ರಿಕೆ ವಿತರಣೆ ನಡೆದಿರುವ ನಿರ್ಲಕ್ಷಕ್ಕೆ ಕಾರಣರಾದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ಜಿಲ್ಲಾಡಳಿತ ಮೂಲಕ ದಾವಣಗೆರೆ ವಿವಿಯ ರಾಜ್ಯ ಪರೀಕ್ಷಾಂಗ ಅಧಿಕಾರಿಗಳನ್ನು ಒತ್ತಾಯಿಸಿದೆ.
ಅಂತಿಮ ವರ್ಷದ ವಾಣಿಜ್ಯ ವಿಭಾಗದ ಕಾಮರ್ಸ್ ಪತ್ರಿಕೆಗೆ ಮಂಗಳವಾರ ದಾವಣಗೆರೆ ವಿಶ್ವವಿದ್ಯಾಲಯದ ನಡೆಯಬೇಕಿದ್ದ ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಬದಲಿಗೆ ಸ್ಕೀಮ್ ಆಫ್ ವ್ಯಾಲ್ಯುವೇಷನ್ ಪತ್ರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಆದ ಕಾರಣ ಬೋರ್ಡ್ ಆಫ್ ಎಕ್ಸಾಮಿನೇಷನ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ ಹಾಗಾಗಿ ತಾವುಗಳು ಈ ನಿರ್ಲಕ್ಷತೆಗೆ ಕಾರಣದ ಅಧಿಕಾರಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಗೋಪಿ, ಸಾಮಾಜಿಕ ಜಾಲತಾಣ ಚಿತ್ರಸ್ವಾಮಿ, ಕಾರ್ಯಕರ್ತರಾದ ಸಂಜಯ್, ಸುದೀಪ್, ರೇವಂತ, ಆಕಾಶ್, ಚಂದ್ರಶೇಖರ್, ತಿಪ್ಪೇಶ್,ರಂಗನಾಥ್, ಮತ್ತು ಇತರರು ಭಾಗವಹಿಸಿದ್ದರು.