ಭಾರತ ದೇಶ ಇಂದು ಆಹಾರದಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ: ಅದಕ್ಕೆ ಬಾಬು ಜಗಜೀವನರಾಂರವರ ದೂರದೃಷ್ಟಿ ಕಾರಣವಾಗಿದೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 06 ಭಾರತ ದೇಶ ಇಂದು ಆಹಾರದಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದರೆ ಅದಕ್ಕೆ ಬಾಬು ಜಗಜೀವನರಾಂರವರ ದೂರದೃಷ್ಟಿ ಕಾರಣವಾಗಿದೆ ಎಂದು ಚಿತ್ರದುರ್ಗ ನಗರಾಭೀವೃದ್ದಿ ಪ್ರಾಧಿಕಾರ ಹಾಗೂ ಚಿತ್ರದುರ್ಗ ಜಿಲ್ಲಾ
ಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು.


ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂರವರ 39 ನೇ ಪುಣ್ಯ ಸ್ಮರಣೆಯ
ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನಸಲ್ಲಿ ಮಾತನಾಡಿದ ಅವರು, ಭಾರತ ದೇಶ ಬಿಟ್ರಿಷರಿಂದ ಸ್ವಾತಂತ್ರ್ಯವನ್ನು
ಪಡೆದಾಗ 40 ಕೋಟಿ ಜನರಿದ್ದರು ಅವರ ಹಸಿವನ್ನು ನೀಗಿಸಲುವುದು ಸರ್ಕಾರದ ಕೆಲಸವಾಗಿತ್ತು ಈ ಸಮಯದಲ್ಲಿ ಅಮೇರಿಕಾದಿಂದ
ಕೆಂಪು ಜೋಳವನ್ನು ತರಿಸಿ ಜನರಿಗೆ ನೀಡಲಾಗಿತ್ತು ಇದನ್ನು ಕಮಡ ಅಂದಿನ ಕೃಷಿ ಸಚಿವರಾದ ಬಾಬು ಜಗಜೀವನರಾಂ ರವರು
ನಮ್ಮ ದೇಶದಲ್ಲಿಯೇ ಆಹಾರವನ್ನು ಉತ್ಪಾದನೆಯನ್ನು ಮಾಡುವ ಬಗ್ಗೆ ಆಲೋಚನೆಯನ್ನು ನಡೆಸಿ ಕೃಷಿಯಲ್ಲಿ
ಹಸಿರುಕ್ರಾಂತಿಯನ್ನು ನಡೆಸಿ ನಮ್ಮ ದೇಶದಲ್ಲಿಯೇ ಆಹಾರವನ್ನು ಉತ್ಪಾದನೆಯನ್ನು ಮಾಡುವಂತೆ ಮಾಡಿ ರೈತರಿಗೆ
ಪ್ರೋತ್ಸಾಹವನ್ನು ನೀಡಿದ್ದರ ಫಲವಾಗಿ ಜನತೆ ದಿನ ನಿತ್ಯ ಆಹಾರವನ್ನು ಸೇವನೆ ಮಾಡುತ್ತೆ ಆಗಿದೆ ಎಂದರು.


ಬಾಬು ಜಗಜೀವನರಾಂರವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಇಂದಿನ ಯುವ
ಪೀಳಿಗೆಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ, ದೇಶ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಸಮಯದಲ್ಲಿ ಇವರು
ಮಾಡಿದ ಕಾರ್ಯ ಅನ್ಯನವಾಗಿದೆ ದೇಶವನ್ನು ಬ್ರಟಿಷರಿಂದ ಮುಕ್ತಗೊಳಿಸಲು ಹಾಗೂ ನಂತರ ದೇಶದ ಆಹಾರ ಸಮಸ್ಯೆಯಿಂದ
ದೂರವಾಗಲು ನೆರವಾಗಿದ್ದಾರೆ. ದೇಶದ ಉಪ ಪ್ರಧಾನ ಮಂತ್ರಿಗಳಾಗಿದ್ದ ಇವರು ಪ್ರಧಾನ ಮಂತ್ರಿಯಾಗುವ ಎಲ್ಲಾ ರೀತಿಯ
ಅರ್ಹತೆಯನ್ನು ಹೊಂದಿದ್ದರು ಸಹಾ ರಾಜಕೀಯ ಹಾಗೂ ಕುಟುಂಬದ ಕಾರಣದಿಂದ ಪ್ರಧಾನಿ ಸ್ಥಾನದಿಂದ ವಂಚಿತರಾದದರು.


ದೇಶದಲ್ಲಿ ಅಂದು ಇದ್ದ ಆಹಾರ ಸಮಸ್ಯೆಯನ್ನು ನಿವಾರಣೆ ಮಾಡಲು ನೀರಾವರಿ ಯೋಜನೆಯಗಳನ್ನು ಜಾರಿ ಮಾಡಿ ಆಹಾರದಲ್ಲಿ
ಹಸಿರು ಕ್ರಾಂತಿಯನ್ನು ಮಾಡಿದರು. ಇಂದು ನಮ್ಮ ದೇಶದ 140 ಕೋಟಿ ಜನರಿಗೆ ಅನ್ನವನ್ನು ನೀಡುತ್ತಾ ಬೇರೆ ದೇಶಗಳಿಗೆ ರಫ್ತು
ಮಾಡಲಾಗುತ್ತಿದೆ ಎಂದರೆ ಅದಕ್ಕೆ ಬಾಬು ಜಗ ಜೀವನರಾಂರವರು ಕಾರಣರಾಗಿದ್ದಾರೆ ಎಂದು ತಾಜ್‍ಪೀರ್ ತಿಳಿಸಿದರು.
ಕಾಂಗ್ರೆಸ್‍ನ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಜಯ್ಯಣ್ಣ ಮಾತನಾಡಿ, ಬಾಬು ಜಗಜೀವನರಾಂ ರವರು ತಮ್ಮ
ಜೀವಿತಾವಧಿಯಲ್ಲಿ ಕಷ್ಠಗಳನ್ನು ಅನುಭವಿಸಿ ಬೇರೆಯವರು ಕಷ್ಠಗಳನ್ನು ಅನುಭವಿಸಬಾರದೆಂದು ಯೋಜನೆಗಳನ್ನು ರೂಪಿಸಿ ಜಾರಿ
ಮಾಡಿದರು. ಅವರು ವಹಿಸಿಕೊಂಡು ಎಲ್ಲಾ ಸಚಿವ ಸ್ಥಾನಗಳಿಗೂ ಸಹಾ ನ್ಯಾಯವನ್ನು ನೀಡುವುದರ ಮೂಲಕ ಜನರಿಗೆ
ಯೋಜನೆಯನ್ನು ಜಾರಿ ಮಾಡಿದರು. ಬಾಬು ರವರ ನಮ್ಮ ಕಾಂಗ್ರೆಸ್ ನವರು ಎನ್ನುವುದು ಹೆಮ್ಮೆಯಾಗಿದೆ. ಅವರು ಚುನಾವಣೆಯ
ಸಮಯದಲ್ಲಿ ಚಿತ್ರದುರ್ಗಕ್ಕೆ ಸಹಾ ಬೇಟಿಯನ್ನು ನೀಡಿದ್ದರು.

ಸಮಾಜಕ್ಕೆ ಉತ್ತಮವಾದ ಕಾರ್ಯವನ್ನು ಮಾಡಿದವರನ್ನು ನೆನಪಿಸಿಕೊಳ್ಳುವುದರ ನಮ್ಮ ಕರ್ತವ್ಯವಾಗಿದೆ. ಎಂದ ಅವರು ನಮ್ಮ ಕಾಂಗ್ರೆಸ್ ವಿವಿಧ ಘಟಕಗಳಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಆದರೆ ಅವರು ಇಂತಹ ಕಾರ್ಯಕ್ರಮಗಳಿಗೆ ಬಾರದೆ ಮನೆಯಲ್ಲಿ ಇರುತ್ತಾರೆ ಇಂತಹರನ್ನು ಬದಲಾವಣೆ ಮಾಡಲು ಅವಕಾಶವನ್ನು ನೀಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಕಾರ್ಯಾಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ವಿವಿಧ ಘಟಕಗಳ
ಪದಾಧಿಕಾರಿಗಳಾದ ಲೋಕೇಶ್, ಪೈಲ್ವಾನ್ ತಿಪ್ಪೇಸ್ವಾಮಿ, ಮುದಸಿರ್, ಪ್ರಕಾಶ ರಾಮನಾಯ್ಕ್, ಭೂತೇಶ್, ಆಶ್ವಿನಿ, ಸುದರ್ಶನ್,
ಭರತ್, ಮಹಮ್ಮದ್, ಖುದ್ದುಸ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *