ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಮಹಾ ಮಾನವತವಾದಿ ಜಗಜ್ಯೋತಿ ಬಸವೇಶ್ವರ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರರ ಜಯಂತಿಯನ್ನು ಇಲ್ಲಿನ ಶ್ರೀ
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಇದೇ ತಿಂಗಳ ಏಪ್ರಿಲ್ ೨೮, ೨೯ ಹಾಗೂ ೩೦ ರಂದು
ಅರ್ಥಪೂರ್ಣವಾಗಿ ಅಷ್ಟೇ ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆದಿದೆ.

ಅದರಂತೆ ಜಯಂತಿಗೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು. ೨೮ರಂದು ಬೆಳಗ್ಗೆ ಶ್ರೀಮಠದ ಆವರಣದಲ್ಲಿ
ಮಕ್ಕಳಿಗೆ ಹಾಗೂ ದೊಡ್ಡವರಿಗೆ ವಚನ ಕಂಠಪಾಠ ಸ್ಪರ್ಧೆ ಮಹಿಳೆಯರಿಗಾಗಿ ಸಾಂಪ್ರದಾಯಿಕ ರಂಗೋಲಿ ಜತೆಗೆ ಬಸವಾದಿ
ಶಿವಶರಣರ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಾಗೆಯೇ ವಯಸ್ಕರು ಹಾಗೂ
ಮಕ್ಕಳಿಗಾಗಿ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
೨೯ ರಂದು ಶ್ರೀಮಠದ ಆವರಣದಲ್ಲಿ ಪಿಯುಸಿ ಹಾಗೂ ಪದವೀಧರರಿಗೆ “ಸಾಂಸ್ಕೃತಿಕ ನಾಯಕ ಬಸವಣ್ಣ” ವಿಷಯದ ಮೇಲೆ
ಭಾಷಣ ಸ್ಪರ್ಧೆ, ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಪ್ರಬಂಧ ಸ್ಪರ್ಧೆಯನ್ನು “ಸರ್ವ ಶರಣರ ದೃಷ್ಟಿಯಲ್ಲಿ ಬಸವಣ್ಣ” ವಿಷಯ
ಕುರಿತಾಗಿ ಏರ್ಪಡಿಸಲಾಗಿದೆ.
೨೮ರ ಸೋಮವಾರ ಸಂಜೆ ೬ ಗಂಟೆಗೆ ಅನುಭವ ಮಂಟಪದಲ್ಲಿ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದು. ಸಾನಿಧ್ಯವನ್ನು
ಮೈಸೂರಿನ ಕುಂದೂರು ಮಠದ ಡಾ.ಶರಶ್ಚಚಂದ್ರ ಸ್ವಾಮಿಗಳು ವಹಿಸಲಿದ್ದು, ಬಸವ ಬೆರಗು(ಶರಣರ ದೃಷ್ಟಿಯಲ್ಲಿ
ಬಸವಣ್ಣನವರು) ವಿಷಯ ಕುರಿತು ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಚಿತ್ರದುರ್ಗದ ಶಾಸಕರಾದ ಕೆ. ಸಿ ವೀರೇಂದ್ರ ಪಪ್ಪಿ
ವಹಿಸಲಿದ್ದು, ಶರಣ ಸಂಸ್ಕೃತಿ ನಿಜಾಚರಣೆಗಳು ವಿಷಯ ಕುರಿತಾಗಿ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರು
ಅವರು ಚಿಂತನ ನುಡಿಯನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಸಂಸದರಾದ ಗೋವಿಂದ ಎಂ. ಕಾರಜೋಳ, ಅಪರ ಜಿಲ್ಲಾಧಿಕಾರಿಗಳಾದ ಬಿ. ಟಿ.
ಕುಮಾರಸ್ವಾಮಿ ಅವರುಗಳು ಭಾಗವಹಿಸಲಿದ್ದಾರೆ. ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಚನ ನೃತ್ಯ
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾನಯಾಗಿ ಸಂಗೀತ ಬಳಗದ ಅಧ್ಯಕ್ಷ ತೋಟಪ್ಪ ಉತ್ತಂಗಿ ಅವರಿಂದ ವಚನ
ಸಂಗೀತ ನಡೆಯಲಿದೆ.
೨೯ರ ಸಂಜೆ ಮಂಗಳವಾರ ಸಂಜೆ ೬ ಗಂಟೆಗೆ ಬಸವಣ್ಣನವರ ಆರ್ಥಿಕ ಚಿಂತನೆಗಳು ವಿಷಯ ಕುರಿತು ಚಿಂತನ ಗೋಷ್ಠಿ
ನಡೆಯಲಿದೆ. ಅಂದಿನ ಸಮಾರಂಭದ ಸಾನಿಧ್ಯವನ್ನು ಇಳಕಲ್ ವಿಜಯ ಮಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ
ಮಹಾಸ್ವಾಮಿಗಳು ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ
ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ. ಸಿ. ಕಳಸದ (ಐಎಎಸ್) ನಿವೃತ್ತ ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಟಿ. ವೆಂಕಟೇಶ್ ವಹಿಸಲಿದ್ದು ,ಡಾ.ಬಿರಾಜಶೇಖರಪ್ಪ ಅವರ ಸಂಪಾದಕತ್ವದಲ್ಲಿ
ಶ್ರೀಮಠದ ವತಿಯಿಂದ ಸತ್ಯಶುದ್ಧ ಕಾಯಕ ಎಂಬ ತ್ರೈಮಾಸಿಕ ಪತ್ರಿಕೆ ಬಿಡುಗಡೆಯಾಗಲಿದೆ. ಅಂದಿನ ಸಮಾರಂಭದಲ್ಲಿ ಆರ್ಥಿಕ
ಚಿಂತಕರಾದ ಹೊಸಪೇಟೆಯ ಟಿ. ಆರ್. ಚಂದ್ರಶೇಖರ್ ಅವರು ವಿಷಯ ಮಂಡಿಸಲಿದ್ದಾರೆ. ವೀರಶೈವ ಸಮಾಜದ ಅಧ್ಯಕ್ಷರಾದ
ಎಚ್.ಎನ್. ತಿಪ್ಪೇಸ್ವಾಮಿ ಹಾಗೂ ಚಿತ್ರದುರ್ಗ ಜಿಲ್ಲಾ ಕೆಡಿಪಿ ಸದಸ್ಯರಾದ ಕೆ .ಸಿ .ನಾಗರಾಜ್ ಅವರು ವಹಿಸಲಿದ್ದಾರೆ.
ಅಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾದ ಡಾ. ಪಂಡಿತ್ ಮುದ್ದು ಮೋಹನ್ (ಐಎಎಸ್) ನಿವೃತ್ತ ಇವರು ವಚನ
ಗಾಯನ ನಡೆಸಿಕೊಡಲಿದ್ದಾರೆ.ನಂತರ ಎಸ್ ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಅನುಭವ ಮಂಟಪ ನೃತ್ಯ
ರೂಪಕ ನಡೆಸಿಕೊಡಲಿದ್ದಾರೆ ಹಾಗೆಯೇ ಎಸ್ ಜೆ ಎಂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಭಾವಿ ಮತದಾರರಿಗೆ
ಅರಿವು ವಿಷಯ ಕುರಿತು ರೂಪಕ ಅಭಿನಯಿಸಲಿದ್ದಾರೆ.
೩೦ರ ಬೆಳಗ್ಗೆ ೧೦ ಗಂಟೆಗೆ ಬಸವಣ್ಣನವರ ಜಯಂತೋತ್ಸವವು ಚಿತ್ರದುರ್ಗ ಸಮೀಪದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ
ಹಮ್ಮಿಕೊಳ್ಳಲಾಗಿದೆ. ಅಂದಿನ ಸಮಾರಂಭದ ಸಾನಿಧ್ಯವನ್ನು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ
ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರು ವಹಿಸಲಿದ್ದು. ಮುಖ್ಯ
ಅತಿಥಿಗಳಾಗಿ ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಪಿ.ಎಸ್ ಶಂಕರ್ ಹಾಗೂ ಚಂದ್ರಶೇಖರ್ ಎಸ್.ಎನ್. ಅವರುಗಳು
ಭಾಗವಹಿಸಲಿದ್ದಾರೆ. ಅಂದು ರಾಯಚೂರು ಶ್ರೀಬಸವ ಸೇವಾ ಪ್ರತಿಷ್ಠಾನದ ಶರಣ ಬಸವರಾಜ ಸ್ವಾಮಿ ಅವರಿಗೆ ಸನ್ಮಾನ ಗೌರವ
ನಡೆಯಲಿದೆ.
ಸಂಜೆ ೪ ಗಂಟೆಗೆ ವಿಶ್ವಗುರು ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯು ಶ್ರೀ
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ವೀರಶೈವ ಸಮಾಜ ಹಾಗೂ ನಗರದ ಎಲ್ಲಾ ಸರ್ವ ಸಮಾಜಗಳ ಸಹಯೋಗದಲ್ಲಿ
ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯು ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡು ಗಾಂಧಿ ವೃತ್ತ, ಆನೆ
ಬಾಗಿಲು, ದೊಡ್ಡಪೇಟೆ, ರಂಗಯ್ಯನಬಾಗಿಲು ,ಬಸವ ಮಂಟಪ ರಸ್ತೆ, ಅಂಬೇಡ್ಕರ್ ವೃತ್ತ, ಬಿ.ಡಿ .ರಸ್ತೆಯ ಮೂಲಕ ಶ್ರೀ
ದೇವಸ್ಥಾನ ತಲುಪಲಿದೆ.
ಈ ಸಮಾರಂಭಕ್ಕೆ ಶ್ರೀ ಬೃಹನ್ಮಠದ ಖಾಸಮಠ, ಶಾಖಾಮಠಗಳ ಹಾಗೂ ವಿವಿಧ ಸಮಾಜದ ಪೂಜ್ಯರುಗಳು ಆಗಮಿಸಲಿದ್ದು
,ಸಮಾರಂಭವು ನಗರದ ವಿವಿಧ ಸರ್ವ ಸಮಾಜಗಳ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ ಎಂದು ಶ್ರೀಮಠದ
ಪ್ರಕಟಣೆ ತಿಳಿಸಿದೆ.