ಚಿತ್ರದುರ್ಗ| ಮದಕರಿ ನಾಯಕರ ಪ್ರತಿಮೆ ಮುಂದೆ ಕೇಕ್ ಕತ್ತರಿಸುವುದರ ಮೂಲಕ ಕಿಚ್ಚ ಸುದೀಪ್‌ರವರ 51 ನೇಹುಟ್ಟುಹಬ್ಬದ ಆಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 2: ಕಿಚ್ಚ ಸುದೀಪ್‌ರವರ 51 ನೇಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಸೋಮವಾರ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ಹಾಗೂ ಮದಕರಿ ಬಳಗದವತಿಯಿಂದ ನಗರದ ಮಜೆಸ್ಟಿಕ್ ವೃತ್ತದಲ್ಲಿನ ಮದಕರಿ ನಾಯಕರ ಪ್ರತಿಮೆ ಮುಂದೆ ಕೇಕ್ ಕತ್ತರಿಸುವುದರ ಮೂಲಕ ಆಚರಣೆ ಮಾಡಲಾಯಿತು.

ಇದಕ್ಕೂ ಮುನ್ನಾ ನಗರದ ಗ್ರಾಮ ದೇವತೆಯಾದ ಉಚ್ಚಂಗಿ ಯಲ್ಲಮ್ಮ ದೇವಾಲಯದಲ್ಲಿ ಕಿಚ್ಚ ಸುದೀಪ್ ರವರ ಹುಟ್ಟು ಹಬ್ಬದ ಅಂಗವಾಗಿ ಅಮ್ಮನವರಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು. ತದ ನಂತರ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮದಕರಿ ಬಳಗದ ಗೋಪಾಲಸ್ವಾಮಿ ನಾಯಕ್, ಕಿಚ್ಚ ಸುದೀಪ್ ಬಳಗದ ರತ್ನಮ, ಶಾರದಮ್ಮ, ಹೇಮಲತಾ,ಗಂಗಮ್ಮ, ಕೃಷ್ಣಮೂರ್ತಿ, ಮನೋಹರ, ಪವನ್, ಅಜೇಯ ಮದಕರಿ, ಕೌಶೀಕ್, ನಾಗು, ಅರುಣ್ ಕುಮಾರ್, ರಾಜು, ಕುಮಾರ್, ಮಂಜು, ಗಗನ್, ದುಶ್ಯಂತ್, ಮಲ್ಲಿಕಾರ್ಜನ್, ಸಿದ್ದು, ವೀರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *