ಮುಖ್ಯಮಂತ್ರಿ ನಾಳಿನ ಸಿಗಂದೂರು ಬ್ರೀಡ್ಜ್ ಉದ್ಘಾಟನೆಗೆ ಹಾಜರಾಗಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ, ಜುಲೈ 13:
ಸಿಗಂದೂರು ಬ್ರೀಡ್ಜ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

“ಸಿದ್ದರಾಮಯ್ಯರಿಗೆ ಲೇಟಾಗಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಅವರ ಇಂಡಿ ಕ್ಷೇತ್ರದಲ್ಲಿ ಕಾರ್ಯಕ್ರಮ ನಿಗದಿಯಾಗಿರುವುದರಿಂದ ಅವರು ಸಿಗಂದೂರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಅವರ ಪರವಾಗಿ ನಾನು (ಸತೀಶ್ ಜಾರಕಿಹೊಳಿ) ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು.


“ಸಿಎಂ ಅವರನ್ನು ಕರೆಯಲಾಗಿದೆ, ಬಿಡಲಾಗಿದೆ ಅನ್ನೋದು ಬೇರೆ ಪ್ರಶ್ನೆ”: ಸಚಿವರು

“ಸಿಎಂ ಅವರನ್ನು ಕರೆದಿದ್ದಾರೆ ಎಂದು ಕೇಳಿದ್ದೇನೆ, ಆದರೆ ಅವರು ಹೋಗುತ್ತಿಲ್ಲ ಎಂಬುದು ನಿಶ್ಚಿತ. ನಮ್ಮ ರಾಜ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಬರುತ್ತಿದ್ದಾರೆ. ಅವರಿಗೆ ಗೌರವ ನೀಡಲು ನಾವು ರಾಜ್ಯದ ಪರವಾಗಿ ಪಾಲ್ಗೊಳ್ಳುತ್ತೇವೆ. ಇದು ಖಾಸಗಿ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಕಾರ್ಯಕ್ರಮ. ಅಂತೆಯೇ ರಾಜ್ಯ ಸರ್ಕಾರ ಸಹಯೋಗ ನೀಡಬೇಕಾಗುತ್ತದೆ” ಎಂದು ಸಚಿವರು ಹೇಳಿದರು.


ಸಿಗಂದೂರು ಕಾರ್ಯಕ್ರಮ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ:

“ಶಿವಮೊಗ್ಗದ ಕಾರ್ಯಕ್ರಮ ನಾಲ್ಕೈದು ದಿನಗಳ ಹಿಂದೆಯೇ ಫಿಕ್ಸ್ ಆಗಿದೆ. ಕೇಂದ್ರದ ಯೋಜನೆ ಆರಂಭಿಸುವ ವೇಳೆ ರಾಜ್ಯ ಸರ್ಕಾರದ ಗಮನಕ್ಕೆ ಮೊದಲೇ ಹೇಳಬೇಕು ಎಂದು ನಾವು ತಿಳಿಸಿದ್ದೇವೆ. ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಹಾಜರಾಗಲು ಅನುಕೂಲವಾಗಬೇಕು” ಎಂದು ಹೇಳಿದರು.


ಬಿಎಸ್‌ವೈ ಪುತ್ರ ವಿರುದ್ಧ ಸಚಿವ ಮಧು ಬಂಗಾರಪ್ಪ ನೀಡಿದ ಹೇಳಿಕೆ ಕುರಿತು:

“ಬಿಎಸ್ ವೈ ಪುತ್ರರಿಂದ ಏಕಚಕ್ರಾಧಿಪತ್ಯ” ಎಂದು ಸಚಿವ ಮಧು ಬಂಗಾರಪ್ಪ ನೀಡಿದ ಹೇಳಿಕೆ ಕುರಿತಂತೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡುತ್ತಾ,
“ನಾನು ಕಾರ್ಯಕ್ರಮಕ್ಕೆ ಹೋದ ಮೇಲೆ ಎಲ್ಲವನ್ನೂ ಗೊತ್ತಾಗುತ್ತದೆ. ಈಗೇನು ಹೇಳಲಾರದು” ಎಂದರು.


ವಿಜಯಾನಂದ ಕಾಶಪ್ಪನವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ:

“55 ಕಾಂಗ್ರೆಸ್ ಶಾಸಕರ ಟಾರ್ಗೆಟ್” ಎಂಬ ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ,
“ನನಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಅವರು ಮಾಹಿತಿ ನೀಡಿದರೆ ಒಳ್ಳೆಯದು” ಎಂದು ಹೇಳಿದರು.


ಜಿಲ್ಲಾಡಳಿತ ಭವನ ಕಾಮಗಾರಿ ಬಗ್ಗೆ ಸ್ಪಷ್ಟನೆ:

ಚಿತ್ರದುರ್ಗ ಕಣಿವೆಯ ಬಳಿ ನಿರ್ಮಾಣವಾಗುತ್ತಿರುವ ಜಿಲ್ಲಾಡಳಿತ ಭವನವನ್ನು ವೀಕ್ಷಿಸಿ, ಸಚಿವರು ಪ್ರತಿಕ್ರಿಯೆ ನೀಡುತ್ತಾ,
“ಈ ಹಿಂದಿನ ಅವಧಿಯಲ್ಲಿ ಕಾಮಗಾರಿ ಆರಂಭವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಹುಶಃ ಜನವರಿ 1ರಂದು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ₹50 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈಗ ಬದಲಾವಣೆ ಸಾಧ್ಯವಿಲ್ಲ. ಸರ್ಕಾರ ಈಗ ಮರುಸಂರಚನೆಯ ಕೆಲಸ ಮಾಡುತ್ತದೆ. ನೀರು, ರಸ್ತೆ, ಸಿಟಿ ಬಸ್ ಸೇವೆ ಸೇರಿದಂತೆ ಮೂಲ ಸೌಕರ್ಯಗಳ ಒದಗಿಸುವ ಕೆಲಸ ನಡೆಯಲಿದೆ” ಎಂದು ತಿಳಿಸಿದರು.

“ಜಿಲ್ಲಾಧಿಕಾರಿಗಳ ಕಚೇರಿ ಅವೈಜ್ಞಾನಿಕವಾಗಿದೆ ಎಂಬ ಜಿಲ್ಲಾ ಶಾಸಕರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡುತ್ತಾ, ಈಗ ಏನು ಮಾಡಲಿಕ್ಕೆ ಸಾಧ್ಯವಿಲ್ಲ. ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ” ಎಂದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು:

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು:

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ)

ಜಿಲ್ಲಾಧಿಕಾರಿ ವೆಂಕಟೇಶ್

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್

ಸಂಪತ್ ಕುಮಾರ್
ಇತ್ಯಾದಿ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *