ಚಿತ್ರದುರ್ಗ ಸೆ. 23
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಬಿಜೆಪಿಯ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಬಿಜೆಪಿಯ ಚಿತ್ರದುರ್ಗ ಗ್ರಾಮಾಂತರ ಮಂಡಲದ ವಿವಿಧ ಮೋರ್ಚಾಗಳಿಗೆ ಪದಾಧಿ ಕಾರಿಗಳನ್ನು ನೇಮಕ ಮಾಡಿ ಅಧ್ಯಕ್ಷರಾದ ಕೆ.ನಾಗರಾಜ್ ಆದೇಶವನ್ನು ಹೊರಡಿಸಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಮಂಡಲದ ಎಸ್.ಸಿ.ಮೊರ್ಚಾದ ಅಧ್ಯಕ್ಷರಾಗಿ ಕುಮಾರ್ ಆರ್.ಮಾರಗಟ್ಟ, ಪ್ರಧಾನ ಕಾರ್ಯದರ್ಶಿಗಳಾಗಿ ನಾಗರಾಜ್ ಚನ್ನಯ್ಯನಹಟ್ಟಿ, ಹರೀಶ್ ಬೊಮ್ಮನೇಹಳ್ಳಿ, ರೈತ ಮೋರ್ಚಾದ ಅಧ್ಯಕ್ಷರಾಗಿ ಮೇದೇಹಳ್ಳಿ ಉಜ್ಜಿನಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ನಿಂಗಪ್ಪ ಈಚನನಾಗೇನಹಳ್ಳಿ, ರಂಗಸ್ವಾಮಿ ಕಳ್ಳಿಹಟ್ಟಿ, ಯುವ ಮೋರ್ಚಾದ ಅಧ್ಯಕ್ಷರಾಗಿ ದೇವಪುರದಹಟ್ಟಿಯ ಸಿದ್ದೇಶ್ ಎಲ್, ಪ್ರಧಾನ ಕಾರ್ಯದರ್ಶಿಗಳಾಗಿ ವಿದ್ಯಾನಗರದ ವಿಜಯ್ ಎ, ಸಿಂಗಾಪುರ ಕಾವಲಹಟ್ಟಿಯ ಸಿದೇಶ್ ನಾಯ್ಕ್, ಓಬಿಸಿ ಮೊರ್ಚಾದ ಅಧ್ಯಕ್ಷರಾಗಿ ಹುಣಸೇಕಟ್ಟೆ ಗೊಲ್ಲರಹಟ್ಟಿಯ ಎಸ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಬೊಮ್ಮೇನಹಳ್ಳಿಯ ಎನ್.ಜಿ.ಧನಂಜಯ, ಕೆಳಗಲಹಟ್ಟಿಯ ಸಿದ್ದೇಶ್ಕುಂಬಾರ್, ಎಸ್.ಸಿ.ಮೋರ್ಚದ ಅಧ್ಯಕ್ಷರಾಗಿ ಪ್ರಸಾದ್ ಬಾಬು ಪಿ. ಪ್ರಧಾನ ಕಾರ್ಯದರ್ಶಿ ಮಾರುತಿ ಕೆನ್ನಡಲು, ಬೋಮ್ಮನಹಳ್ಳಿ ರಾಜೇಶ್ ಮಾಸ್ಟರ್ ರವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷರಾದ ನಾಗರಾಜ್ ತಿಳಿಸಿದ್ದಾರೆ.