ಚಿತ್ರದುರ್ಗ : ನಗರದ CNC PU COLLGE ನಲ್ಲಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ವನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ.ಬಿ.ನಾಗರಾಜ್ ರವರು ಮಾತಾನಾಡುತ್ತಾ ವಿದ್ಯಾರ್ಥಿಗಳ ಗುರಿ ಸಾಧನೆಯೆಡೆ ಇರಬೇಕು,ಈ ಸಾಧನೆಯ ಗುರಿ ಮುಟ್ಟಲು ನಿರಂತರ ಪರಿಶ್ರಮ ಅಗತ್ಯ ಅಲ್ಲದೆ ನಿಮ್ಮಗಳ ಸಾಧನೆ ನಿಜಕ್ಕೂ ಅಭಿನಂದನಾರ್ಹ ಎಂದು ಕಾಲೇಜಿನ ಟಾಪರ್ಸ್ ಬಗ್ಗೆ ಶ್ಲಾಘನೆ ಮಾಡಿದರು.
ಕಾಲೇಜಿನ ಡೀನ್ ಡಾ.ಗೋಪಾಲ್ ರವರು ಮಾತಾನಾಡಿ ಕದಿಯಾಲಗದ ಸ್ವತ್ತು ಎಂದರೆ ವಿದ್ಯೆ, ವಿದ್ಯೆಸಾಧಕನ ಸ್ವತ್ತೆ ವಿನಃ ಸೋಮರಿಯ ಸ್ವತ್ತಲ್ಲ ಎಂದು ವಿದ್ಯೆಯ ಮಹತ್ವ, ಗುರಿ ಸಾಧಿಸಲು ಮನಸ್ಸು ಮಾಡುವುದು ತುಂಬಾ ಮುಖ್ಯ ಎಂದು ಹೇಳಿದರು.
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ 3 ನೇ ಟಾಪರ್ ಮತ್ತು ಕಾಲೇಜಿಗೆ ಮೊದಲ ಟಾಪರ್ ಆದ ಹುಸೇನ್ ಗಾರಿ ದಾಫೀಯ ರವರು ಮಾತಾನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾಲೇಜಿ ನ ಎರಡನೇ ಟಾಪರ್ ಎನ್. ಹೇಮಶ್ರೀ ಮತ್ತು ಮೂರನೇ ಟಾಪರ್ ಕೆ. ಐಶ್ವರ್ಯ ಅವರನ್ನು ಗೌರವಿಸಲಾಯಿತು.
ವಾಣಿಜ್ಯ ವಿಭಾಗದಲ್ಲಿ ಮೊದಲ ಟಾಪರ್ ವಿ. ಚಿನ್ಮಯಿ ಎರಡನೇ ಟಾಪರ್ ಮಿಸ್ಬಾ ತಬಸ್ಸುಮ್ ಮೂರನೇ ಟಾಪರ್ ಪ್ರತಿಭರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1