‘RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು’ ವಿಪಕ್ಷ ನಾಯಕ ಬೇಕಾಗಿದ್ದಾರೆ- ಕಾಂಗ್ರೆಸ್

Karnataka Politics: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ತಿಂಗಳು ಸಮೀಪಿಸುತ್ತಿದ್ದರೂ, ಇನ್ನು ಬಿಜೆಪಿ ವತಿಯಿಂದ ವಿಪಕ್ಷ ನಾಯಕ ಆಯ್ಕೆಆಗಿಲ್ಲ. ಈ ನಿಟ್ಟಿನಲ್ಲಿ ವಿಪಕ್ಷ ನಾಯಕರಾಗಿ ಬೇಕೆಂದು ಪ್ರಕಟಣೆ ಹೊರಡಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ತಿಂಗಳು ಸಮೀಪಿಸುತ್ತಿದ್ದರೂ, ಇನ್ನು ಬಿಜೆಪಿ ವತಿಯಿಂದ ವಿಪಕ್ಷ ನಾಯಕ ಆಯ್ಕೆಆಗಿಲ್ಲ. 

ಕಾಂಗ್ರೆಸ್‌ ಅಧಿಕಾರ ಬಂದ ಬಳಿಕ ಜುಲೈ 3 ರಂದು ಮೊದಲ ಅಧಿವೇಶನ ಜರುಗಲಿದೆ. ಈ ಹಿನ್ನಲೆ ಕಾಂಗ್ರೆಸ್‌ ವತಿಯಿಂದ ಬಿಜೆಪಿ ವಿಪಕ್ಷ ನಾಯಕನ ಆಯ್ಕೆಗಾಗಿ RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು,ಸಂವಿಧಾನವನ್ನು ತಿಳಿದವರು ಪ್ರಜಾಪ್ರಭುತ್ವವನ್ನು ಅರಿತವರು,ಸಿಡಿಗೆ ತಡೆಯಜ್ಞೆ ತರದವರು ಭ್ರಷ್ಟಾಚಾರಿಯಲ್ಲದವರು, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು ಸುಳ್ಳಿನ ಕಂತೆ ಹೊರದವರು, ಘನತೆಯ ವ್ಯಕ್ತಿತ್ವದವರು ತೂಕದ ಮಾತಿನವರು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಹಾಗೇ ಮೇಲೆ  ನೀಡಿರುವ ಅರ್ಹತೆ ಹೊಂದಿದವರು ವಿಪಕ್ಷ ನಾಯಕರಾಗಿ ಬೇಕೆಂದು ಪ್ರಕಟಣೆ ಹೊರಡಿಸಿದೆ.

ಸದ್ಯ ಈ ಪೋಷ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗಿದೆ.  ಇನ್ನು ವಿಪಕ್ಷನಾಯಕರ ಆಯ್ಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಆರ್. ಅಶೋಕ
ವಿಪಕ್ಷನಾಯಕರ ಆಯ್ಕೆಯಲ್ಲಿ , ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡಲು ಭಾನುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದು, ಈ ಸಭೆಯಲ್ಲಿ  ಆಯ್ಕೆಯಾದವರುರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ

Source : https://zeenews.india.com/kannada/karnataka/bengaluru/we-need-a-non-rss-dignified-personality-as-leader-of-opposition-says-congress-142953

Leave a Reply

Your email address will not be published. Required fields are marked *