Crime News: ನಿಧಿ ಆಸೆಗೆ ಹೋಯ್ತು ವ್ಯಕ್ತಿ ಜೀವ!

ನಿಧಿ ಆಸೆಗಾಗಿ ಚಿತ್ರದುರ್ಗ ಜಿಲ್ಲೆಯ ಪರುಶುರಾಂಪುರ JJ ಕಾಲೋನಿ, ಚೌಳೂರು ರಸ್ತೆಯಲ್ಲಿ ವ್ಯಕ್ತಿಯ ನರಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ. ಜೆಜೆ ಕಾಲೋನಿ ನಿವಾಸಿಯಾಗಿರುವ ಜೆಹೆಚ್‌ ಪ್ರಭಾಕರ್‌ ಎಂಬಾತನನ್ನು ನಡುರಸ್ತೆಯಲ್ಲೇ ಕೊಚ್ಚಿ ಬಲಿ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಚಿತ್ರದುರ್ಗ: ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಇದೀಗ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಜ್ಯೋತಿಷಿ ಹೇಳಿದ ಮಾತನ್ನು ನಂಬಿ ನಿಧಿ ಆಸೆಗೆ ವ್ಯಕ್ತಿಯ ನರಬಲಿ ಕೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದಯ ಸದ್ಯ ಭಾರೀ ಕುತೂಹಲ ಹುಟ್ಟಿಸಿದೆ.

ನಿಧಿ ಆಸೆಗಾಗಿ ಚಿತ್ರದುರ್ಗ ಜಿಲ್ಲೆಯ ಪರುಶುರಾಂಪುರ JJ ಕಾಲೋನಿ, ಚೌಳೂರು ರಸ್ತೆಯಲ್ಲಿ ವ್ಯಕ್ತಿಯ ನರಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ. ಜೆಜೆ ಕಾಲೋನಿ ನಿವಾಸಿಯಾಗಿರುವ ಜೆಹೆಚ್‌ ಪ್ರಭಾಕರ್‌ ಎಂಬಾತನನ್ನು ನಡುರಸ್ತೆಯಲ್ಲೇ ಕೊಚ್ಚಿ ಬಲಿ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ನರಬಲಿ ಕೊಟ್ಟರೆ ನಿಧಿ ಸಿಗುತ್ತೆ ಅಂತ ಜ್ಯೋತಿಷಿ ಹೇಳಿದ್ದರು ಎನ್ನಲಾಗಿದ್ದು, ಈ ಕಾರಣದಿಂದ ಈ ದುರಂತ ನಡೆದಿದೆ ಎನ್ನಲಾಗಿದೆ.

Source: https://kannada.news18.com/news/state/chitradurga-treasure-hunt-crime-news-kannada-pjl-1993269.html

Leave a Reply

Your email address will not be published. Required fields are marked *