ನಿತ್ಯ ಪಂಚಾಗ, ಅಕ್ಟೋಬರ್ 26: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢಾ, ಯೋಗ : ಸೌಭಾಗ್ಯ, ಕರಣ : ಬವ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:41 – 09:08 ಗುಳಿಕ ಕಾಲ 13:31 – 14:58, ಯಮಗಂಡ ಕಾಲ 10:36 – 12:03
ಮೇಷ ರಾಶಿ: ನಿಮ್ಮ ದಿನ ಏರಿಳಿತದಿಂದ ಇದ್ದು ಅದನ್ನು ಕೊಂಡೊಯ್ಯುವುದು ಕಷ್ಟವಾಗಲಿದೆ. ನಿಮ್ಮ ವಸ್ತುವಿನ ಕಳ್ಳತನವಾಗಲಿದೆ. ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ. ಮನಃಕ್ಲೇಶವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗುವುದು. ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡುವುದಿಲ್ಲ. ಸೇವಾಮನೋಭಾವದ ಕಾರ್ಯಕ್ಕೆ ತೃಪ್ತಿ ಕಂಡುಕೊಳ್ಳಿ. ಇದರಿಂದ ಸ್ವಲ್ಪ ನಷ್ಟವೇನೂ ಆಗದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಅಶುಭವಾರ್ತೆಯು ಬರಬಹುದು. ಆದಾಯದ ಅನುಕೂಲತೆಯನ್ನು ನೋಡಿ ಅನಂತರ ವ್ಯವಹಾರವನ್ನು ಮುಂದುವರಿಸಿ. ಹಳೆಯ ಸಂಗಾತಿಯ ನೆನಪು ಇಂದು ಮತ್ತೆ ಮತ್ತೆ ನೆನಪಾಗುವುದು. ಮನೆಯಲ್ಲಿ ಧಾರ್ಮಿಕ ಸಮಾರಂಭವನ್ನು ಯೋಜಿಸುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ. ಇನ್ನೊಬ್ಬರ ವಸ್ತುವನ್ನು ಕೇಳಿ ಪಡೆಯಿರಿ. ಬಂಧುಗಳ ಕಡೆಯಿಂದ ವಿವಾಹ ಸಂಬಂಧವು ಬರಬಹುದು.
ವೃಷಭ ರಾಶಿ: ಕೆಲಸವಾಗಬೇಕಾದರೆ ಸಕಾರಾತ್ಮಕ ಅಂಶಗಳನ್ನು ಹೇಳಿಯೇ ಮುಂದುವರಿಯುವುದು ಉತ್ತಮ. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಭಾವ ಬರಬಹುದು. ಇಂದು ದುರಭ್ಯಾಸದಿಂದ ಸಿಗುವ ಉನ್ನತ ಸ್ಥಾನವು ತಪ್ಪಬಹುದು. ಸುಲಭವಾಗಿ ಸಿಗುವ ಸಂಪತ್ತು ನಿಮಗೆ ಧಕ್ಕದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದು. ನಿಮ್ಮ ನೆಚ್ಚಿನ ವ್ಯಕ್ತಿಗಳನ್ನು ಆಕಸ್ಮಾತ್ತಾಗಿ ಭೇಟಿಯಾಗುವಿರಿ. ಭೂ ವ್ಯವಹಾರಕ್ಕೆ ರಾಜಕೀಯದ ನಂಟು ಬರುವುದು. ಕುಟುಂಬದ ಜೊತೆ ಪ್ರಯಾಣವನ್ನೂ ಮಾಡುವ ಆಲೋಚನೆಯು ಇರಲಿದೆ. ನಿಮಗೆ ಕೊಟ್ಟ ಕೆಲಸವನ್ನು ಬಿಟ್ಟು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ವಿಘ್ನಸಂತೋಷಿಗಳಿಗೆ ನಿಮ್ಮಿಂದ ಸಂತೋಷ ಸಿಗುವುದು. ನಿಮ್ಮವರ ಸ್ವೇಚ್ಛಾಚಾರದ ನಡವಳಿಕೆಯು ನಿಮಗೆ ಇಷ್ಟವಾಗದು. ಅದನ್ನು ಬೇರೆ ಮಾತಿನ ಮೂಲಕ ತಿಳಿಸುವಿರಿ. ಹಣವನ್ನು ಕೊಟ್ಟು ವಸ್ತುವನ್ನೂ ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ಸಂಗಾತಿಯ ದೌರ್ಬಲ್ಯಗಳನ್ನು ಎತ್ತಿ ಆಡುವಿರಿ. ಇರುವ ಸ್ಥಳವನ್ನು ಬಿಟ್ಟು ಬೇರೆಡೆಗೆ ಹೋಗಲು ಇಷ್ಟವಾಗದು. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ.
ಮಿಥುನ ರಾಶಿ: ಹಿಂಸಾತ್ಮಕ ಕೃತ್ಯಗಳು ನಿಮಗೆ ಬೀಭತ್ಸತೆಯನ್ನು ಉಂಟುಮಾಡಬಹುದು. ನಿಮ್ಮ ಬಳಿ ಮಾತನಾಡಲು ಇಷ್ಟಪಡದೇ ಇರಬಹುದು. ನಿಮ್ಮ ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ಎಷ್ಟೇ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಿಂದ ಕೂಡಿರಬಹುದು. ಸಾಮಾಜಿಕ ಕಾರ್ಯಗಳತ್ತ ಮನಸ್ಸು ಮಾಡುವಿರಿ. ಉದ್ಯಮದ ವಿಸ್ತಾರಕ್ಕೆ ಪಾಲುದಾರರಿಂದ ಸಹಕಾರ ಸಿಗದು. ವಿದ್ಯಾದಾನ ಮಾಡಲು ಅವಕಾಶ ತೆರೆಯಲಿದೆ. ಸಹೋದ್ಯೋಗಿಗಳು ಕಿರಿಕಿರಿಯನ್ನು ನೀಡಬಹುದು. ಮಕ್ಕಳ ಭವಿಷ್ಯಕ್ಕೆ ನೀವು ಸ್ವಲ್ಪ ಹಣವನ್ನು ಹೊಂದಿಸುವಿರಿ. ದೂರದಲ್ಲಿದ್ದ ಮಕ್ಕಳನ್ನು ಬಹಳ ದಿನಗಳ ಅನಂತರದ ಭೇಟಿ ಮಾಡುವಿರಿ. ನಿಮಗೆ ಇಷ್ಟವಾದ ಸ್ಥಳವು ಸಿಗದೇ ಇರುವ ಕಾರಣ ಸ್ಥಿರಾಸ್ತಿಯ ಖರೀದಿಯನ್ನು ಮುಂದೂಡುವುದು ಉತ್ತಮ. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಅನಾಸಕ್ತಿಗೆ ಕಳ್ಳದಾರಿಯನ್ನು ಹುಡುಕುವಿರಿ. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು.
ಕರ್ಕಾಟಕ ರಾಶಿ: ಸಮಸ್ಯೆಗಳನ್ನು ಮುಂದೂಡತ್ತಲೇ ಇರುವ ಬದಲು ಪರಿಹಾರಕ್ಕೆ ಒಮ್ಮೆ ಯೋಚಿಸಿ. ಇಂದು ನೀವು ಶತ್ರುಗಳನ್ನು ತಂತ್ರದಿಂದ ಸೋಲಿಸಬಹುದು. ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸುವಿರಿ. ಗೆಲುವಿಗೆ ಬಹಳ ಪ್ರಯತ್ನಪಡುವಿರಿ. ವ್ಯಕ್ತಿಗಳನ್ನು ನೋಡಿ ನಿಮ್ಮ ಮಾತು ಇರಲಿ. ನಿಮ್ಮ ಸಾಧನೆಗೆ ಗೌರವವು ಸಿಗಬಹುದು. ನಿಮ್ಮ ಸ್ಥಾನದ ಬಗ್ಗೆ ನಿಮಗೆ ಭಯವಿರುವುದು. ಹಳೆಯ ಪ್ರೇಯಸಿಯಿಂದ ಪೀಡಿತರಾಗಬಹುದು. ದ್ವೇಷವನ್ನು ಸಾಧಿಸುವುದು ನಿಮ್ಮ ಅವಗುಣಗಳಲ್ಲಿ ಒಂದಾಗಿದ್ದು ಅದನ್ನು ಬಿಡಬೇಕಾಗಬಹುದು. ಹಳೆಯ ಮೈತ್ರಿಯು ಕಾರಣಾಂತರಗಳಿಂದ ಪುನಃ ಆರಂಭವಾಗಲಿದೆ. ಧಾರ್ಮಿಕ ಆಚರಣೆಗಳಲ್ಲಿ ಸ್ವತಃ ತೊಡಗುವಿರಿ. ನೀವು ಅನುಸರಿಸುವ ಕ್ರಮದಲ್ಲಿ ವ್ಯತ್ಯಾಸ ಇರಬಹುದು. ವಿವಾಹಕ್ಕೆ ಬರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಕ್ಷುಲ್ಲಕ ಕಾರಣವನ್ನು ಬಿಟ್ಟು ಖುಷಿಯಿಂದ ಮಾತನಾಡಿ.
ಸಿಂಹ ರಾಶಿ: ಕಛೇರಿಯಿಂದ ಮನೆಗೆ ವಿಳಂಬವಾಗಿ ಬರುವಿರಿ. ಮಹಿಳೆಯರಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಕರೆಬರುವುದು. ಎಲ್ಲರಿಂದ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಕ್ಕರೂ ನಿಮಗೆ ಕಾರ್ಯದಲ್ಲಿ ಸಮಾಧಾನ ಸಿಗದು. ಬಂದ ಹಣವು ಸಾಲವನ್ನು ತೀರಿಸಲಿಕ್ಕೇ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಪರೀಕ್ಷೆಯ ಫಲಿತಾಂಶದಿಂದ ನಿಮಗೆ ಸಂತೋಷವಾಗಲಿದೆ. ವ್ಯರ್ಥ ಎಂದುಕೊಂಡ ವಿದ್ಯೆಯು ಇಂದು ಪ್ರಯೋಜನಕ್ಕೆ ಬರಲಿದೆ. ಮನೆಗೆ ಬೇಕಾದ ವಸ್ತುವನ್ನು ಯಾರಿಗೂ ಹೇಳದೇ ತರುವಿರಿ. ಆಡಳಿತ ವರ್ಗದಿಂದ ನಿಮಗೆ ಇಷ್ಟವಾಗದ ಮಾತನ್ನು ಕೇಳಬೇಕಾಗುವುದು. ಮಾತೇ ಎಲ್ಲದಕ್ಕೂ ಪರಿಹಾರವಾಗಲಾರದು, ಮೌನದಿಂದಲೂ ಉತ್ತರಿಸುವಿರಿ. ನಿಮ್ಮ ಕೆಲವು ಕಾರ್ಯಗಳು ನಿಷ್ಪ್ರಯೋಜಕ ಎಂದು ಅನ್ನಿಸುವುದು. ಪೂರ್ವಾಗ್ರಹ ಬುದ್ಧಿಯಿಂದ ಸರಿ ತಪ್ಪುಗಳನ್ನು ನಿರ್ಣಯಿಸುವುದು ಸಾಧ್ಯವಾಗದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು.
ಕನ್ಯಾ ರಾಶಿ: ಪ್ರವಾಸ ಮನಸ್ಸಿದ್ದರೂ ಆರ್ಥಿಕ ಸ್ಥಿತಿ ಒಪ್ಪಿಗೆ ಕೊಡದು. ನೀವು ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆ ಬಿಟ್ಟು ಬೇರೆಯವರ ಮಾತನ್ನೂ ಕೇಳಿ. ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಸಮಾಧಾನಚಿತ್ತವು ನಿಮಗೆ ಅನೇಕ ಸುಂದರ ಸಮಯವನ್ನು ಅನುಭವಿಸುವಿರಿ. ಮಕ್ಕಳಿಗೆ ಏನನ್ನೂ ಕೊಡಬಾರದು ಎಂಬ ನಿಶ್ಚಯ ಮಾಡುವಿರಿ. ಭೂಮಿಯ ವ್ಯವಹಾರದಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಮನೆಯ ವಾತಾವರಣವು ನಿಮಗೆ ಹಿತವೆನಿಸುವುದು. ಧಾರ್ಮಿಕ ಆಚರಣೆಗಳಲ್ಲಿ ಪ್ರಯತ್ನಪೂರ್ವಕವಾಗಿ ಮನಸ್ಸನ್ನು ಒಗ್ಗಿಸಬೇಕು. ಮಾನಸಿಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಅನ್ಯ ಮಾರ್ಗವನ್ನು ಆಶ್ರಯಿಸಿವಿರಿ. ಸ್ವಾಭಿಮಾನವು ನಿಮ್ಮ ಪ್ರತಿಷ್ಠೆಯಾಗಲಿದೆ. ತಪ್ಪಿಗೆ ಪಶ್ಚಾತ್ತಾಪಪಡುವಿರಿ. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಬೇಡವೆನ್ನುವುದನ್ನು ಬಲದಿಂದಲೇ ಮಾಡುವಿರಿ. ನಿಮ್ಮ ಮಾತು ಇನ್ನೊಬ್ಬರ ಕೋಪವನ್ನು ಕರಗಿಸೀತು. ನಿಮ್ಮ ಬಗ್ಗೆ ಬರುವ ಆರೋಪವನ್ನು ಸುಳ್ಳು ಮಾಡಿ ತೋರಿಸಲು ಮುಂದಾಗುವಿರಿ.
ತುಲಾ ರಾಶಿ: ಶೂನ್ಯ ಪ್ರಯತ್ನದಿಂದ ಲಭಿಸಿದ್ದೇ ನಿಜವಾದ ಲಾಭ. ಸ್ನೇಹಿತರಿಂದ ಸಾಲಕ್ಕೆ ಬೇಡಿಕೆ ಬರಬಹುದು. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಿರಿ. ಸಂಗಾತಿಯ ಮಾತಿಗೆ ಮರುಳಾಗುವ ಸಾಧ್ಯತೆ ಹೆಚ್ಚು. ಮಾನಸಿಕ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳಿ. ಗೌರವವನ್ನು ಪಕ್ಕಕ್ಕಿರಿಸಿ ಕೆಲಸ ಮಾಡಿದರೆ ಸಫಲತೆ ಸಾಧ್ಯ. ಸಣ್ಣ ವಿಚಾರವೂ ದೊಡ್ಡದಾಗಬಹುದು. ಕ್ರೀಡೆಯಲ್ಲಿ ನೀವು ಭಾಗವಹಿಸುವಿರಿ. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ನಿಮ್ಮಸಾಮಾಜಿಕ ಕೆಲಸದಿಂದ ಸಾಧಿಸಿ ಪ್ರಶಂಸೆಯನ್ನು ಗಳಿಸುವಿರಿ. ಮಕ್ಕಳ ವಿವಾಹ ಚಿಂತೆ ಹೆಚ್ಚಾಗುವುದು. ನಿಮ್ಮ ಮನಸ್ಸಿಗೆ ಬಂದಿದ್ದನ್ನು ಮಾತ್ರ ಮಾಡುವಿರಿ. ಯಾರ ಮಾತನ್ನೂ ಕೇಳುವ ಸ್ಥಿತಿ ಇಂದು ಇರುವುದಿಲ್ಲ. ಉಪಕಾರದ ಸ್ಮರಣೆ ನಿಮಗೆ ಯಶಸ್ಸನ್ನು ಕೊಟ್ಟೀತು. ಯಾರದೋ ಕಾರಣದಿಂದ ನಿಮ್ಮ ಇಂದಿನ ಗುರಿಯೇ ಬದಲಾಗಬಹುದು. ಉಪಾಯದಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ: ಅಧ್ಯಾತ್ಮದ ಕಡೆ ನಿಮ್ಮ ಮನಸ್ಸು ಹರಿಯಲಿದೆ. ಮಕ್ಕಳಿಂದ ನಿಮಗೆ ಶುಭ ವಾರ್ತೆ ಇರುವುದು. ಇಂದು ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಕೃಷಿಯಲ್ಲಿ ನೀವು ಬಹಳ ಆಯ್ಕೆ ಸ್ವಭಾವವುಳ್ಳವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಸದಾ ಯಾವುದೋ ಆಲೋಚನೆಯಲ್ಲಿ ಇರುವಿರಿ. ಹುಂಬುತನದಿಂದ ಮುನ್ನುಗ್ಗುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕಾದೀತು. ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಹೆದರಿಸಬಹುದು. ಅಶುಭವಾರ್ತಯು ಬರಬಹುದು. ನಿಮ್ಮ ಮಾತನ್ನು ಸತ್ಯವಾಗಿಸುವ ಭರದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ. ಹಿರಿಯರಿಗೆ ಕೊಡುವ ಗೌರವದಲ್ಲಿ ಚ್ಯುತಿ ಬರದೇ ಇರಲಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ವಿರೋಧಿಸದೇ ಒಳ್ಳೆಯ ರೀತಿಯಲ್ಲಿ ಮಾತನಾಡಿ. ರೋಗಕ್ಕೆ ಬೇಕಾದ ಔಷಧವನ್ನು ಮಾಡಿಕೊಳ್ಳಿ.
ಧನು ರಾಶಿ: ಉದ್ಯೋಗಿಗಳಿಗೆ ಮಾನಸಿಕ ಕಿರಿಕಿರಿ. ಮೇಲಿಂದ ಮೇಲೆ ಒತ್ತಡಗಳಿಂದ ಕಾರ್ಯವನ್ನು ಮಾಡಲಾಗದು. ಸ್ವಂತ ಉದ್ಯಮವು ಹೆಚ್ಚು ಸಮಯವನ್ನು ಕೇಳುವುದು. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗೆ ನೀವು ಮಾನಸಿಕವಾಗಿ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ನಿಮಗೆ ಧೈರ್ಯವು ಕಡಿಮೆ ಇರುವುದು. ಏನಾದರೂ ಒಂದು ಅಸಂಬದ್ಧವನ್ನು ಮಾಡುವರು ಎಂಬ ಹಣೆಪಟ್ಟಿ ಬೀಳಬಹುದು. ಮೋಸಗಾರಿಕೆಯಿಂದ ಆಟವನ್ನು ಗೆಲ್ಲುವಿರಿ. ಶತ್ರುಗಳ ಚಲನವಲನದ ಮೇಲೆ ನಿಮ್ಮ ದೃಷ್ಟಿಯು ಇರಲಿದೆ. ನಿರೀಕ್ಷೆಗಿಂತ ಬಂದ ಹೆಚ್ಚು ಹಣವನ್ನು ಕೂಡಿಡುವಿರಿ. ಗೊಂದಲ ವಿಚಾರವನ್ನು ಬಿಟ್ಟು ಬಿಡುವುದು ಒಳ್ಳೆಯದು. ಅರ್ಥಿಕ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿಯು ಇರುವುದು. ಕೆಲಸದ ಬದಲಾವಣೆಯನ್ನು ಮಾಡಿಕೊಳ್ಳಿ. ಮನಸ್ಸು ಬೇಸರದಿಂದ ಯಥಾಸ್ಥಿತಿಗೆ ಮರಳಲಿದೆ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಮ್ಮ ವಸ್ತುಗಳನ್ನು ಮರುಬಳಕೆ ಮಾಡಲು ಯೋಚಿಸಿ.
ಮಕರ ರಾಶಿ: ಸುವ್ಯವಸ್ಥಿತಿ ಹಣಕಾಸಿನಿಂದ ಭವಿಷ್ಯ ಜೀವನ ಭಯ ದೂರಾಗುವುದು. ನಿಮ್ಮ ಕೆಲಸವನ್ಮು ಯಾರಾದರೂ ಆಡಿಕೊಳ್ಳಬಹುದು. ನೀವು ಅಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ವಿದ್ಯಾರ್ಥಿಗಳು ಅನಗತ್ಯ ವ್ಯವಹಾರಗಳತ್ತ ಗಮನ ಹರಿಸುತ್ತಿದ್ದು ಪೋಷಕರು ಇದರ ಬಗ್ಗೆ ವಿಚಾರಿಸುವ ಅಗತ್ಯವೂ ಬರಬಹುದು. ಕೆಟ್ಟ ಆಹಾರವನ್ನು ಬಿಡುವುದು ಸೂಕ್ತ. ಕೆಲವರ ಮಾತುಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಆರ್ಥಿಕಸ್ಥಿತಿಯು ಏರದೇ ಇಳಿಯದೇ ಒಂದೇ ರೀತಿಯಲ್ಲಿ ಇರಲಿದೆ. ಪ್ರಾಮಾಣಿಕ ಪ್ರಯತ್ನವು ನಿಮ್ಮ ಕಾರ್ಯಸಾಧನೆಯ ಗುಟ್ಟಾಗಲಿದೆ. ನಿಮ್ಮನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಬಹುದು. ಮರೆವಿನಿಂದ ಅಧಿಕ ಓಡಾಟ ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನೀವು ಸೊಪ್ಪು ಹಾಕದೇ ಇರುವುದು ಅದು ಅಲ್ಲಿಯೇ ಶಾಂತವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಮನೆಯ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ: ಹೆಚ್ಚಿನ ಹೂಡಿಕೆಗೆ ಮಾರ್ಗದರ್ಶನ ಸಿಗುವುದು. ಮಾರಾಟಗಾರರಿಗೆ ವಸ್ತುಗಳ ಲಭ್ಯತೆ ಕಷ್ಟವಾಗುವುದು. ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಸಂಕೀರ್ಣವಾದ ಕೆಲಸವನ್ನು ಸುಲಭ ಮಾಡಿಕೊಳ್ಳುವ ಕಲೆಯಿಂದ ಪ್ರಶಂಸೆಯು ಸಿಗಲಿದೆ. ಹಿರಿಯರ ಜೊತೆ ಮಾತಿನ ಚಕಮಕಿ ಆಗಬಹುದು. ಸ್ನೇಹಿತರ ಜೊತೆ ಬೇರೆ ಪ್ರದೇಶಗಳಿಗೆ ಹೋಗುವಿರಿ. ಇಂದು ನಿಮ್ಮ ವಿದ್ಯೆಯ ಪರೀಕ್ಷೆಯೂ ಆಗುವುದು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಅದನ್ನು ಪರಿಹರಿಸಿಕೊಳ್ಳುವಿರಿ. ಉದ್ಯೋಗ ಸಮಸ್ಯೆಯನ್ನು ಮೇಲಿನವರ ಬಳಿ ಹಂಚಿಕೊಳ್ಳುವಿರಿ. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ. ಧಾರ್ಮಿಕ ಆಚರಣೆಯಿಂದ ಮನಸ್ಸಿಗೆ ಸಮಾಧಾನ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.
ಮೀನ ರಾಶಿ: ಗೃಹ ನಿರ್ಮಾಣಕ್ಕೆ ತೊಡಕುಂಟಾಗಲಿದೆ. ಮನೆಯಲ್ಲಿ ಮಿತ್ರರ ಬಂಧುಗಳ ಸಮಾಗಮವಾಗಲಿದೆ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ನಿಮ್ಮ ಅಭಿಮಾನಕ್ಕೆ ಘಾಸಿಯಾಗುವ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲ ಮಾತುಗಳೂ ಇಂದು ನಿಮಗೆ ನಕಾರಾತ್ಮಕವಾಗಿಯೇ ಕೇಳಿಸುವುದು. ಅತಿಥಿ ಸತ್ಕಾರಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಇಂದು ಮಕ್ಕಳ ವಿವಾಹದ ಚಿಂತೆ ಕಾಡಬಹುದು. ಕೃಷಿಗೆ ಭೂಸಮೀಕ್ಷೆ ಬೇಕಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಯನ್ನು ಎದುರಿಸುವ ಭಯ. ಸಂಗಾತಿಯ ಪ್ರೀತಿಯು ಇಂದು ಲಭಿಸುವುದು. ಕಳೆದ ದುಃಖದ ಸಮಯವನ್ನು ನೆನಪಿಸಿಕೊಳ್ಳುವಿರಿ. ಅರ್ಥಿಕ ವಿಚಾರದಲ್ಲಿ ಸಹೋದರರ ನಡುವೆ ಕಲಹವಾಗಬಹುದು. ವಂಚನೆಯಿಂದ ನೀವು ತಪ್ಪಿಸಿಕೊಳ್ಳುವಿರಿ. ನೆಮ್ಮದಿಗೆ ಅವಕಾಶಗಳನ್ನು ಹುಡುಕುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ. ನಿಮ್ಮ ಗುಟ್ಟನ್ನು ನೀವು ಏನೇ ಮಾಡಿದರೂ ಬಿಡಲಾರಿರಿ.
Views: 55