ಕೆ ಎಸ್ ಪುಟ್ಟಣ್ಣಯ್ಯ ಬಣ (ರೈತ ಸಂಘ)ದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಧನಂಜಯ ಹಂಪಯ್ಯನ ಮಾಳಿಗೆ  ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 07 : ಕೆ ಎಸ್ ಪುಟ್ಟಣ್ಣಯ್ಯ ಬಣದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಧನಂಜಯ ಹಂಪಯ್ಯನ ಮಾಳಿಗೆ ರವರನ್ನು ಆಯ್ಕೆ ಮಾಡಲಾಗಿದೆ.

ಇಂದು ನಗರದ  ರೈತ ಭವನದಲ್ಲಿ ಕೆ ಎಸ್ ಪುಟ್ಟಣ್ಣಯ್ಯ ಬಣದ ರಾಜ್ಯ ಅದ್ಯಕ್ಷರು ಹಾಗೂ ರಾಜ್ಯದ ಅನೇಕ ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಕಾರ್ಯಕರ್ತರ ಸಮ್ಮುಖದಲ್ಲಿ ನೂತನ ಜಿಲ್ಲಾ ಸಮಿತಿಗೆ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಾಧ್ಯಕ್ಷರಾಗಿ ಹೊರಕೇರಪ್ಪ ಗೌರವಾಧ್ಯಕ್ಷರಾಗಿ ಮಲ್ಲಾಪುರ ತಿಪ್ಪೇಸ್ವಾಮಿ ಜಿಲ್ಲಾ ಅಧ್ಯಕ್ಷರಾಗಿ ಧನಂಜಯ ಹಂಪಯ್ಯನ ಮಾಳಿಗೆ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಣ್ಣ ಖಜಾಂಚಿಯಾಗಿ ಲಕ್ಷ್ಮೀಕಾಂತ ಉಪಾಧ್ಯಕ್ಷರಾಗಿ ರಾಮಚಂದ್ರಪ್ಪ, ಮಲ್ಲಿಕಾರ್ಜುನ, ಗೌಸ್‍ಪೀರ್, ಕಾರ್ಯದರ್ಶಿಯಾಗಿ ಬಸವರಾಜಪ್ಪ,  ಎಸ್ ಮಂಜುನಾಥ್ ರಾಜಣ್ಣ ನೇಮಕವಾಗಿದ್ದಾರೆ.

Leave a Reply

Your email address will not be published. Required fields are marked *