ಜಿಲ್ಲಾ ಕ್ಷಯ ರೋಗ ವಿಭಾಗದ ಅಧಿಕಾರಿ ಡಾ.ಮಂಜುನಾಥ್ ನಿಧನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಧೀರ್ಘ ಕಾಲದಿಂದ ಅನಾರೋಗ್ಯಕ್ಕಿಡಾಗಿದ್ದ ಡಾ.ಮಂಜುನಾಥ್ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಐಯುಡಿಪಿ ಬಡಾವಣೆಯ 9 ನೇ ಕ್ರಾಸ್‍ನಲ್ಲಿರುವ ಮನೆಯಿಂದ ಚಿಕಿತ್ಸೆಗೆಂದು ಹೊರಗೆ ಕರೆ ತಂದಾಗ ಉಸಿರಾಟದ  ಸಮಸ್ಯೆ ಕಂಡು ಬಂದಿದೆ. ಅವರನ್ನು ಮತ್ತೆ ಮನೆಯೊಳಗೆ ಕರೆದುಕೊಂಡು ಬಂದಿದ್ದು, ಮನೆಯಲ್ಲಿಯೇ ಡಾ. ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ನಾಳೆ ಅವರ ಅಂತ್ಯಕ್ರಿಯೆಯು ಅವರ ಸ್ವಗ್ರಾಮವಾದ ಹೊಸದುರ್ಗ ತಾಲೂಕಿನ ಹಾಲೇನಹಳ್ಳಿಯಲ್ಲಿ ನಡೆಯಲಿದೆ.

ಮೃತರು ಪತ್ನಿ ಓರ್ವ ಪುತ್ರ ಮತ್ತು ಪುತ್ರಿ ಹಾಗು ಅಪಾರ ಬಂಧು ಮಿತ್ರರರನ್ನು  ಆಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *