ಸೇಬು ಬಾಳೆಹಣ್ಣು, ಕಡಲೆಬೀಜಗಳನ್ನು ತಿಂದ ಕೂಡಲೇ ನೀರು ಕುಡಿಯಬಾರದು!

ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಿದ, ಕೂಡಲೇ ನೀರು ಕುಡಿಯಬಾರದು ಎಂದು ತಜ್ಞರು ಹೇಳುತ್ತಾರೆ! ಹಾಗಾದ್ರೆ ಅಂತಹ ಆಹಾರಗಳು ಯಾವುದು ಎನ್ನುವುದನ್ನು ನೋಡೋಣ…

ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ನೀರು ಕುಡಿದರೆ, ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಸಿಗುತ್ತದೆ ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಮನುಷ್ಯನ ದೇಹದ ಮುಕ್ಕಾಲು ಅಂಶ ಬರೀ ನೀರಿನಿಂದ ತುಂಬಿ ಕೊಂಡಿರುವುದರಿಂದ ಯಾವುದೇ ಕಾರಣಕ್ಕೂ, ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾಗದಂತೆ ನೋಡಿಕೊಳ್ಳ ಬೇಕು.

ಹೀಗಾಗಿ ಒಬ್ಬ ವ್ಯಕ್ತಿ ದಿನಕ್ಕೆ ಏನಿಲ್ಲಾಂದರೂ ಕೂಡ ದಿನಕ್ಕೆ ಎರಡು ಮುಕ್ಕಾಲು ಲೀಟರ್ ನಿಂದ ಮೂರು ಮುಕ್ಕಾಲು ಲೀಟರ್ ನೀರು ಕುಡಿಯಲೇ ಬೇಕು ಎಂದು ಆರೋಗ್ಯ ತಜ್ಞರು ಕೂಡ ಸಲಹೆ ನೀಡುತ್ತಾರೆ.ಅದರೆ ಕೆಲವೊಂದು ಆಹಾರಗಳನ್ನು ಸೇವನೆ ಮಾಡಿದ ಬಳಿಕ, ತಪ್ಪಿಯೂ ಕೂಡ ನೀರು ಕುಡಿಯಬಾರದಂತೆ! ಯಾಕೆ ಹೀಗೆ? ಹಾಗಾದ್ರೆ ಅಂತಹ ಆಹಾರಗಳು ಯಾವುದು? ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ ಮುಂದೆ ಓದಿ..

ಬಾಳೆಹಣ್ಣು

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ಎಲ್ಲಾ ಕಾಲದಲ್ಲೂ, ಸ್ವಲ್ಪ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಹಣ್ಣು ಎಂದರೆ ಅದು ಬಾಳೆಹಣ್ಣು.ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟೀನ್, ಪೊಟ್ಯಾಶಿಯಮ್, ನಾರಿನಾಂಶ, ಕಬ್ಬಿಣಾಂಶ ಸೇರಿದಂತೆ, ತನ್ನಲ್ಲಿ ವಿವಿಧ ಬಗೆಯ ಆರೋಗ್ಯಕರ ಗುಣಗಳನ್ನು ಒಳಗೊಂಡಿ ರುವ ಈ ಹಣ್ಣನ್ನು ರಾತ್ರಿ ಊಟದ ಬಳಿಕ ಸೇವನೆ ಮಾಡುವುದ ರಿಂದ, ಹಲವಾರು ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
  • ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿ ರುವ, ಈ ಹಣ್ಣನ್ನು ತಿಂದ ಕೂಡಲೇ ತಪ್ಪಿಯೂ ಕೂಡ ನೀರು ಕುಡಿಯಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
  • ಯಾಕೆಂದ್ರೆ ವೇಳೆ, ಬಾಳೆಹಣ್ಣು ತಿಂದು ನೀರು ಕುಡಿದರೆ, ಅದರಿಂ ದಾಗಿ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ರೀತಿಯಾಗು ವುದನ್ನು ತಪ್ಪಿಸಲು, ಬಾಳೆಹಣ್ಣು ತಿನ್ನುವ 15-20 ನಿಮಿಷ ಮೊದಲು ನೀರು ಕುಡಿಯಿರಿ.​

ನೆಲಗಡಲೆ ಅಥವಾ ಕಡಲೆಬೀಜಗಳು

ನೆಲಗಡಲೆ ಅಥವಾ ಕಡಲೆಬೀಜಗಳು
  • ಸರಿಸುಮಾರು ಬಾದಾಮಿ ಬೀಜಗಳಲ್ಲಿ ಸಿಗುವಷ್ಟೇ, ಪೋಷ ಕಾಂಶಗಳನ್ನು ಒಳಗೊಂಡ ಇನ್ನೊಂದು ನೈಸರ್ಗಿಕ ಆಹಾರ ಪದಾರ್ಥ ಎಂದರೆ ಅದು ನೆಲಗಡಲೆ ಅಥವಾ ಕಡಲೆಬೀಜಗಳು.
  • ಚಳಿಗಾಲದಲ್ಲಿ ಮಿತವಾಗಿ ಕಡಲೆಬೀಜಗಳನ್ನು ಸೇವನೆ ಮಾಡು ವುದರಿಂದ, ಹಲವಾರು ರೀತಿಯಲ್ಲಿ ಆರೋಗ್ಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು.ಆದರೆ ನೆಲಗಡಲೆ ತಿಂದ ಬಳಿಕ, ತಪ್ಪಿಯೂ ಕೂಡ ನೀರು ಕುಡಿಯಲೇಬಾರದು ಎಂದು ಆರೋಗ್ಯ ತಜ್ಞರು ಹೇಳುವರು.
  • ಯಾಕೆಂದ್ರೆ ಈ ಬೀಜಗಳಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ ಎಣ್ಣೆಯಂಶವು ನೀರಿನೊಂದಿಗೆ ಸೇರಿಕೊಂಡ ವೇಳೆ,ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರಮು ಖವಾಗಿ ಗಂಟಲಿನಲ್ಲಿ ಕಿರಿಕಿರಿ,ಕೆಮ್ಮಿನ ಸಮಸ್ಯೆ ಉಂಟಾ ಗುವ ಸಾಧ್ಯತೆ ಇರುತ್ತದೆ.

ಸಿಟ್ರಸ್ ಹಣ್ಣುಗಳು

  • ಸಿಟ್ರಸ್ ಹಣ್ಣುಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ಅಧಿಕ ಪ್ರಮಾ ಣದಲ್ಲಿ ವಿಟಮಿನ್ ಸಿ, ಹೃದಯದ ಆರೋಗ್ಯಕ್ಕೆ ಬೇಕಾಗಿ ರುವ ಪ್ರಮುಖ ಖನಿಜ ಪೊಟ್ಯಾಶಿಯಮ್ ಹಾಗೂ ತನ್ನಲ್ಲಿ ಅಗಾಧ ಪ್ರಮಾಣ ದಲ್ಲಿ ನೀರಿನಾಂಶಗಳನ್ನು ಒಳಗೊಂ ಡಿರುವ ಜೊತೆಗೆ, ತನ್ನಲ್ಲಿ ಉತ್ತಮ ಪ್ರಮಾಣದ ಸಿಟ್ರಸ್ ಆಮ್ಲ ವನ್ನು ಕೂಡ ಒಳಗೊಂಡಿರುತ್ತದೆ.
  • ಹೀಗಾಗಿ ಇಂತಹ ಹಣ್ಣುಗಳನ್ನು ತಿಂದ ಬಳಿಕ, ಹೊಟ್ಟೆಯಲ್ಲಿ ಸಿಟ್ರಸ್ ಆಮ್ಲದ ಪ್ರಮಾಣವು ಹೆಚ್ಚಾಗಿ ಬಿಡುಗಡೆಗೊಳುತ್ತದೆ ಹಾಗೂ ಪಿಎಚ್ ಮಟ್ಟವು ಕೂಡ ಏರಿಕೆ ಆಗುವುದು.ಇಂತಹ ಸಂದರ್ಭದಲ್ಲಿ, ಈ ಹಣ್ಣುಗ ಳನ್ನು ಸೇವನೆ ಮಾಡಿದ ಕೂಡಲೇ ನೀರು ಕುಡಿದರೆ ಅದರಿಂದ ಅಜೀರ್ಣ, ಮಲಬದ್ಧತೆ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ.​

ಬಿಸಿಹಾಲು ಕುಡಿದರೆ ನೀರು ಕುಡಿಯಲೇಬಾರದು

ಬಿಸಿಹಾಲು ಕುಡಿದರೆ ನೀರು ಕುಡಿಯಲೇಬಾರದು
  • ಹಾಲಿನಷ್ಟು ಆರೋಗ್ಯಕರವಾದ ಪಾನೀಯ ಇನ್ನೊಂದು ಇಲ್ಲ ಎಂದು ಹೇಳಬಹುದು.ಹಸುವಿನ ಹಾಲು ಆಮೃತಕ್ಕೆ ಸಮಾನ ಎಂದು ನಮ್ಮ ಹಿರಿಯರು ಹೇಳುತ್ತಿರುವುದು ಇದೇ ಕಾರಣಕ್ಕೆ.
  • ನಮ್ಮ ದೇಹಕ್ಕೆ ಬೇಕಾದ ಬಹುತೇಕ ಪೌಷ್ಟಿಕ ಸತ್ವಗಳು, ಒಂದು ಲೋಟ ಹಾಲು ಕುಡಿಯುವುದರಿಂದ ಸಿಗುತ್ತವೆ. ಹೀಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಲನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.
  • ಆದರೆ ನಿಮಗೆ ಗೊತ್ತಿರಲಿ, ತಪ್ಪಿಯೂ ಕೂಡ ಹಾಲು ಕುಡಿದ ಕೂಡಲೇ ನೀರು ಮಾತ್ರ ಕುಡಿಯಲು ಹೋಗಬೇಡಿ! ಯಾಕೆಂದ್ರೆ ಹೀಗೆ ಮಾಡುವುದ ರಿಂದ ಹೊಟ್ಟೆಯಲ್ಲಿ ಸೆಳೆತ, ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ​

ಸ್ವೀಟ್ಸ್ ತಿಂದ ಕೂಡಲೇ ನೀರು ಕುಡಿಯಬಾರದು!

ಸ್ವೀಟ್ಸ್ ತಿಂದ ಕೂಡಲೇ ನೀರು ಕುಡಿಯಬಾರದು!

ಆಹಾರ ತಜ್ಞರು ಹೇಳುವ ಪ್ರಕಾರ ಸಿಹಿ ಪದಾರ್ಥಗಳನ್ನು, ಅದರಲ್ಲೂ ಪ್ರಮುಖವಾಗಿ ಅಂಗಡಿಗಳಲ್ಲಿ ಸಿಗುವ ಕೃತಕ ಸಕ್ಕರೆಯಾಂಶ ಇರುವ, ಸಿಹಿ ಪದಾರ್ಥಗಳನ್ನು ಸೇವಿಸಿ ಕೂಡಲೇ ಕೂಡಲೇ ನೀರು ಕುಡಿಯಬಾರದು ಎಂದು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ, ದೇಹದಲ್ಲಿ ಸಕ್ಕರೆಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆಯಂತೆ!

ಸೇಬು ಹಣ್ಣು ತಿಂದ ಕೂಡಲೇ ನೀರು ಕುಡಿಯಬೇಡಿ

ಸೇಬು ಹಣ್ಣು ತಿಂದ ಕೂಡಲೇ ನೀರು ಕುಡಿಯಬೇಡಿ
  • ಸೇಬು ಹಣ್ಣಿನಲ್ಲಿ ಕಂಡು ಬರುವ ನೈಸರ್ಗಿಕ ಸಕ್ಕರೆಯಾಂಶದ ಜೊತೆಗೆ ಫ್ರಕ್ಟೋಸ್ ಅಂಶವು ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಹೀಗಾಗಿ ಈ ಹಣ್ಣು ತಿಂದ ಕೂಡಲೇ, ನೀರು ಕುಡಿದರೆ, ಹೊಟ್ಟೆ ಯಲ್ಲಿನ ಆಮ್ಲೀಯತೆ ಕಡಿಮೆಯಾಗಿ ಈಸ್ಟ್ ಬೆಳವಣಿಗೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಇದ್ದಕ್ಕಿದ್ದಂತೆ, ಹೊಟ್ಟೆಗೆ ಸಂ ಬಂಧಪಟ್ಟ ಸಮಸ್ಯೆಗಳಾದ ಅಜೀರ್ಣತೆ, ಮಲಬದ್ಧತೆ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ.

Source : https://vijaykarnataka.com/lifestyle/health/reasons-why-you-must-avoid-drinking-water-after-eating-these-foods/articleshow/105856746.cms?story=6

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *