
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 17 : ಇದೇ ಜನವರಿ 18 ಮತ್ತು 19 ರಂದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠದ ಆವರಣದಲ್ಲಿನ ಅನುಭವಮಂಟಪದಲ್ಲಿ ನಡೆಯಲಿರುವ 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿತ್ರದುರ್ಗ ನಗರದ ಜಿಲ್ಲಾ
ಲಿಂಗಾಯತ ಶಿವಶಿಂಪಿ ಸಮಾಜದವರು ತಮ್ಮ ಸಮಾಜದ ಭಾಂಧವರಿಂದ ಸಮ್ಮೇಳನದ ಅಂಗವಾಗಿ ಸಂಗ್ರಹ ಮಾಡಲಾದ
25000 ರೂ. ವಂತಿಕೆಯನ್ನು ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಖಜಾಂಚಿಯವರಾದ
ಎಸ್.ಷಣ್ಮುಖಪ್ಪ (ಕೆಇಬಿ) ಇವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಜಯದೇವಮೂರ್ತಿ, ಮುಖಂಡರಾದ ಡಿ.ವಿ.ಮುರುಗೇಶ್,
ಬಕ್ಕೇಶ್, ಮುರುಗೇಶ್, ಸುರೇಶ್ಪಟ್ಟಣ್, ಶ್ರೇಯಸ್ಸು, ಗುರುಬಸವರಾಜು ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ಮುರುಗೇಶ್, ಅನ್ನಪೂರ್ಣಮ್ಮ, ಶ್ರೀಮತಿ ಗೀತಾ ಉಪಸ್ಥಿತರಿದ್ದರು.