Horoscope Today 04 July : ಇಂದು ಈ ರಾಶಿಯವರಿಗೆ ಅಪ್ರಾಮಾಣಿಕತೆಯ ಕಳಂಕ ಬರಲಿದೆ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ವಾರ : ಶುಕ್ರ, ತಿಥಿ : ನವಮೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಧ್ರುವ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:00 – 12:37, ಯಮಘಂಡ ಕಾಲ 15:51 – 17:28, ಗುಳಿಕ ಕಾಲ 07:46 – 09:23

ಮೇಷ ರಾಶಿ: :ಅಧಿಕಾರವು ವ್ಯವಸ್ಥೆ ಮುನ್ನಡೆಸಲು ಮಾತ್ರ. ಅದು ಎಲ್ಲ ಕಡೆಗೂ ಪ್ರಯೋಗವಾಗಬಾರದು. ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಭೂಮಿಯ ವ್ಯವಹಾರವನ್ನು ಒಬ್ಬರೇ ಮಾಡಬೇಡಿ. ಸ್ಥಳದ ಕುರಿತೂ ಮಾಹಿತಿಯನ್ನು ಸಂಗ್ರಹಿಸಿ. ನಿಮ್ಮ ಶಿಫಾರಸ್ಸು ಕೆಲವರಿಗೆ ಒಪ್ಪಿಗೆಯಾಗದು. ಮನೋರಂಜನೆಯ ಕಾರ್ಯದಲ್ಲಿ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು. ಜನಪ್ರಿಯತೆಯಿಂದ ಹೊರಬರಲು ಕಷ್ಟವಾಗುವುದು. ಇನ್ನೊಬ್ಬರ ವಿಮರ್ಶೆಯಲ್ಲಿ ಸಮಯ ಹೋಗುವುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಜಾಡ್ಯವಾದ ಮನಸ್ಸನ್ನು ಸರಿಮಾಡಿಕೊಳ್ಳಿ.

ವೃಷಭ ರಾಶಿ: :ಅಗ್ಗದ ಬೆಲೆ ಸಿಕ್ಕ ವಾಹನವನ್ನು ಖರೀದಿಸಿ, ದುರಸ್ತಿ ಮಾಡಿಸಿಕೊಳ್ಳುವ ಸ್ಥಿತಿ ಬರಲಿದೆ. ಇಂದು ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ಬಹಳ ವರ್ಷಗಳ ಅನಂತರ ಅಸದ ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಕಛೇರಿಯ ಕೆಲಸದಲ್ಲಿ ತೊಡಗಿಕೊಂಡು ವೈಯಕ್ತಿಕ ಕೆಲಸವು ಮರೆತುಹೋದೀತು. ಇನ್ನೊಬ್ಬರನ್ನು ಕಂಡು ಅಸೂಯೆಪಡುವಿರಿ. ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ. ಅಧಿಕಾರಿವರ್ಗದಿಂದ ನಿಮ್ಮ‌ ಮೇಲೆ ಒತ್ತಡ ಬರಬಹುದು. ಪರ್ಯಾಯ ವ್ಯವಸ್ಥೆ ಇಲ್ಲದೇ ದೀಢರನೆ ಕೆಲಸಕ್ಕೆ ಮುಂದಾಗುವಿರಿ. ನಿಮ್ಮ ಜನರು ಕಡೆಗಣಿಸುವ ಜನರೆದುರು ನೀವು ಎದ್ದು ನಿಲ್ಲಬೇಕು ಎನ್ನುವ ಹಠ ಇರಲಿದೆ. ಯಾವ ಕೆಲಸವು ಮುಕ್ತಾಯವಾಗದೇ ಅಸಮಾಧಾನವು ಇರಲಿದೆ. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಾಡುವಿರಿ. ಕೆಟ್ಟ ಘಳಿಗೆಗಳು ನಿಮ್ಮ ತೀರ್ಮಾನವನ್ನು ಬದಲುಮಾಡಬಹುದು. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ.

ಮಿಥುನ ರಾಶಿ: : ಮಾರಾಟಕ್ಕಾಗಿ ಮಾತುಕತೆಯಾದ ಆಸ್ತಿಯು ಮತ್ತೆ ನಿಮಗೇ ಉಳಿಯುವುದು. ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ‌ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಕಲಹವು ಸಣ್ಣದೇ ಆಗಿರಬಹುದು ಆ‌ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ಅಸೂಯೆಯಿಂದ ನಿಮ್ಮನ್ನು ಸಹೋದ್ಯೋಗಿಗಳು ಹಿಮ್ಮೆಟ್ಟಿಸಬಹುದು. ನಿಮ್ಮನ್ನೇ ನೀವು ವೈಭವೀಕರಿಸುವುದು ಚೆನ್ನಾಗಿ ಕಾಣಿಸದು. ಮಹಿಳೆಯರು ತಮ್ಮದೇ ಆದ ಉದ್ಯೋಗವನ್ನು ನಡೆಸಲು ಚಿಂತಿಸಬಹುದು. ಸಂಗಾತಿಯ ವೇಗವನ್ನು ನಿಯಂತ್ರಿಸುವಿರಿ. ದೂರದ ಸಂಬಂಧಿಗಳ ಮನೆಯಲ್ಲಿ ಇಂದು ವಾಸ‌ಮಾಡುವಿರಿ. ಬೆನ್ನು ನೋವು ಉಂಟಾಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು.

ಕರ್ಕಾಟಕ ರಾಶಿ: :ಆರ್ಥಿಕ ವ್ಯವಹಾರವನ್ನು ಕೈಬಿಟ್ಟರೂ ನಿಮ್ಮನ್ನೇ ಕೇಳಿಬರಬಹುದು. ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ನೀವು ಇಂದು ನಿಮ್ಮ ಸ್ಥಿತಿಯನ್ನು ನೋಡಿ ಪಶ್ಚಾತ್ತಾಪ ಪಡಬೇಕಿಲ್ಲ. ಮನಸ್ತಾಪದಿಂದ ಒಳ್ಳೆಯ ಸಮಯ ಹಾಳಾಗಬಹುದು. ಮನಸ್ಸಿಗೆ ಸಮಾಧಾನವಾದೀತು. ನಿಮಗೆ ಬೇಕಾದ ಸಹಾಯಕ್ಕಾಗಿ ಜನರನ್ನು ಹುಡುಕುವಿರಿ. ವಿವಾಹ ನಿಶ್ಚಯವಾಗಿದ್ದು ಕಾರಣಾಂತರಗಳಿಂದ ರದ್ದಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಯಾರಾದರೂ ಕುಮ್ಮಕ್ಕು ಕೊಡಬಹುದು. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ತಾಳ್ಮೆಯಿಂದ ಕಾರ್ಯವನ್ನು ಮುನ್ನಡೆಸಿ. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ತುರ್ತಾದ ಕೆಲಸವನ್ನು ನಿಧಾನ‌ ಮಾಡುವಿರಿ.

ಸಿಂಹ ರಾಶಿ: ನಿಮ್ಮ ಸಂಕಟ ನಿಮ್ಮನ್ನು ಒಂಟಿಯಾಗಿಸಲಿದೆ. ಆತುರದಲ್ಲಿ ಇಂದು ಅಸಂಬದ್ಧವಾಗುವ ಸಾಧ್ಯತೆ ಇದೆ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಎಲ್ಲ ಕೆಲಸಗಳನ್ನೂ ನೀವು ಒಬ್ಬರೇ ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡು ಕೆಲಸಗಳು ಅಪೂರ್ಣವಾಗಲಿದೆ. ವಸ್ತ್ರಗಳನ್ನು ಮಾರಾಟ ಮಾಡುವವರು ನೀವು ಆಗಿದ್ದರೆ ಅಲ್ಪ‌ ಲಾಭವನ್ನೂ ಪಡೆಯುವಿರಿ. ಮಾತು ಕೆಲವು ಬಾರಿ ಕಹಿಯಾದರೂ, ಮನಸ್ಸು ಕಹಿಯಾಗದೇ ಇರಲಿ. ಉದ್ಯೋಗದಲ್ಲಿ ನಿಮ್ಮ ಸಮೂಹದ ಜೊತೆ ಕಲಹ ಮಾಡಿಕೊಳ್ಳುವಿರಿ. ಯಾರಾದರೂ ಕೆಲಸ ಕೊಡಿಸುವ ಭರವಸೆ ಕೊಡಬಹುದು. ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದರೆ ಇಂದು ನಿಮಗೆ ಅದು ಸಾಕು ಎನಿಸಬಹುದು. ಒಂದೇ ರೀತೀಯ ಕೆಲಸದಿಂದ ಬೇಸರವಾಗಿ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಸುತ್ತಾಟ ನಡೆಸುವಿರಿ. ಎಲ್ಲರೆದುರೂ ನಿಮ್ಮ ಸಾಹಸಪ್ರದರ್ಶನ ಬೇಡ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು.

ಕನ್ಯಾ ರಾಶಿ: :ಬದಲಾವಣೆಯು ಯಾರೊಂದಿಗಾದರೂ ಸರಿಯಾದ ಕಾರಣಕ್ಕೆ ಆಗಿರಲಿ. ಇಂದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚರಚಾಗುವುದು. ಔದ್ಯೋಗಿಕ ವಿಚಾರದಲ್ಲಿ ನೀವು ಹೆಚ್ಚಿನ ಗಮನ ಅವಶ್ಯಕ. ನೀವು ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಂಡು ಅನುಕೂಲತೆಯನ್ನು ಇಟ್ಟುಕೊಳ್ಳುವಿರಿ.‌ ಧಾರ್ಮಿಕ ಕಾರ್ಯಗಳನ್ನು ಮಾಡಲು‌ ಮನಸ್ಸಾಗಲಿದೆ. ಅಪರಿಚಿತ ಕರೆಗೆ ನೀವು ಸ್ಪಂದಿಸಬೇಕಾಗಿಲ್ಲ. ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದು ನಿಮ್ಮ ಸ್ವಭಾವವಾಗಬಹುದು. ದ್ವಷದಿಂದ ಒಳ್ಳೆಯ ಸಂಬಂಧ ದೂರಾಗಲಿದೆ. ನಿಮ್ಮ ಇಷ್ಟದವರನ್ನು ನೀವು ಭೇಟಿಯಾಗಲಿದ್ದೀರಿ. ಅಶಿಸ್ತಿನ ವಿಚಾರಕ್ಕೆ ಕೋಪಗೊಳ್ಳುವಿರಿ. ಹೊಸ ಯೋಜನೆಯ ನಿಮಗೆ ಲಾಭದಾಯಕವಾಗಲಿದೆ. ವೈದ್ಯರನ್ನು ಭೇಟಿ ಮಾಡಿ ನಿಮಗೆ ಆಗುತ್ತಿರುವ ನಿಮ್ಮ ಮೇಲೆ ತಪ್ಪು ತಿಳಿವಳಿಕೆಯು ಬರಬಹುದು. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ಕಲಾವಿದರಿಗೆ ಮನ್ನಣೆ ಸಿಗಲಿದೆ. ನಿಮ್ಮ ಇಂದಿನ ಅಸಹಾಯಕತೆಯನ್ನು ಯಾರ ಎದುರೂ ಹೇಳಲಾರಿರಿ.

ತುಲಾ ರಾಶಿ: :ಅನ್ಯರ ಜೀವನದ ಜೊತೆ ಆಟವಾಡಲು ಹೋದರೆ, ನಿಮ್ಮ ಜೊತೆ ಮತ್ಯಾರೋ ಆಡಲು ಬರುವರು. ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನು ತೋರಿಸುವುದು. ಅಧಿಕ ಸುತ್ತಾಟದ ಸುಸ್ತು ನಿಮ್ಮಲ್ಲಿ ಇದ್ದರೂ ಅದನ್ನು ಲೆಕ್ಕಿಸಲಾರಿರಿ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ನಿಮಗೆ ಅನ್ನಿಸಿದ್ದನ್ನು ಮಾಡುವುದಾದರೂ ಹಿರಿಯರ ಒಪ್ಪಿಗೆ ಪಡೆಯಿರಿ. ಕೃಷಿಗೆ ಸಂಬಂಧಪಟ್ಟ ಚಟುವಟಿಯಲ್ಲಿ ಭಾಗವಹಿಸುವಿರಿ. ನಿಮ್ಮ ಸೋಲಿನ ಜೊತೆ ನೀವೇ ಇರಬೇಕಾಗುವುದು. ಭೂಮಿಯ ಖರೀದಿಯಲ್ಲಿ ನಿಮ್ಮ ಪಾಲೂ ಇರುವುದು. ನಿಮ್ಮವರ ಮೇಲೆ ಅನುಮಾನ ಬೇಡ. ನಂಬಿಕೆಯಿಂದಲೇ ಮಾತನಾಡಿ.‌ ಪತಿಯನ್ನು ಪ್ರೀತಿಯ ಮಾತುಗಳಿಂದ ಓಲೈಸಿಕೊಳ್ಳುವಿರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು.

ವೃಶ್ಚಿಕ ರಾಶಿ: :ಉತ್ಪಾದಕರಿಗೆ ಬೇಡಿಕೆ ಹೆಚ್ಚಾಗಲಿದೆ‌. ಮನೆಯ ಸಂತೋಷದ ವಾತಾವರಣವು ಪುಟ್ಟ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಕಂಡಿದ್ದನ್ನು ಕಂಡಂತೆ ಹೇಳುವವರಾದರೂ ತಾಳ್ಮೆ ಇಟ್ಟುಕೊಳ್ಳುವು ಒಳ್ಳೆಯದು. ಕಂಡಿದ್ದು ಮಾತ್ರ ಸತ್ಯವೆನ್ನಲು ಬಾರದು. ಉದ್ಯೋಗದ ನಿಮಿತ್ತ ದೂರ ಇದ್ದವರಿಗೆ ತೊಂದರೆಗಳು ಬರಬಹುದು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. ಹೂಡಿಕೆಯ ಬಗ್ಗೆ ಸ್ವತಂತ್ರ ಆಲೋಚನೆ ಇರಲಿ. ನಿಮ್ಮನ್ನು ಗುಂಪಿನಿಂದ ಹೊರಗಿಡುವ ಯೋಚನೆಯನ್ನು ಮಾಡಿಯಾರು. ನಿಮಗೆ ಸಿಕ್ಕಷ್ಟರಲ್ಲಿಯೇ ಸುಖವನ್ನು ಅನುಭವಿಸಿ. ದೂರ ಪ್ರಯಾಣಕ್ಕೆ ಹೋಗಿದ್ದರೆ ತೊಂದರೆಯಾಗಬಹುದು. ಅಪರಿಚರಿಂದ ಮೋಸ ಹೋಗುವ ಸಾಧ್ಯತೆ ಇದೆ. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ಅಗತ್ಯವಿಲ್ಲದ ವಸ್ತುಗಳನ್ನು ಮಾರಾಟ ಮಾಡಿ.

ಧನು ರಾಶಿ: :ನಿಂದನೆಯಿಂದ ನಿಮ್ಮ ಮನಸ್ಸು ಪರಿವರ್ತನೆಯ ಹಾದಿ ಹಿಡಿಯುವುದು. ನೀವು ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವನ್ನು ಕಲಿಯುವುದು ಯೋಗ್ಯ. ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಿಸಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ನಿಮಗೆ ಹಿನ್ನಡೆಯಾದಂತೆ ತೋರುವುದು. ಜವಾಬ್ದಾರಿಯನ್ನು ವಹಿಸಿ ನಿರಾಳತೆಯಲ್ಲಿ ಇರುವಿರಿ. ವಿದ್ಯಾರ್ಥಿಗಳು ಸಂತೋಷದಿಂದ ಈ ದಿನವನ್ನು ಕಳೆಯುವರು. ನಿಮಗೆ ಯಾರಾದರೂ ಕೆಟ್ಟವರು ಎಂದು ಅನಿಸಿದರೆ ಅವರ ಸಹವಾಸದಿಂದ ದೂರವಿರಿ.‌ ಇಲ್ಲವಾದರೆ ಅಪತ್ತು ತಂದುಕೊಳ್ಳಬಹುದು. ನಿಮ್ಮ ಕೆಲಸಗಳಲ್ಲಿ ನೀವು ನಿಷ್ಠೆಯಿಂದ ತೊಡಗಿಕೊಳ್ಳಿ. ಗೃಹನಿರ್ಮಾಣ ಖರ್ಚು ಅಧಿಕವಾಗುತ್ತ ಹೋಗಲಿದೆ. ಕಾನೂತ್ಮಕವಾದ ಹೋರಾಟದಲ್ಲಿ ಜಯವಿದೆ. ನಿಂತ ಕೆಲಸಗಳು ಪುನಃ ಆರಂಭ ಮಾಡಲು ಮನಸ್ಸು ಮಾಡುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ನೀರಿನ ವಿಚಾರದಲ್ಲಿ ಜಾಗರೂಕತೆ ಬೇಕು. ಯಾರನ್ನೂ ಒತ್ತಾಯದಿಂದ ಇರಿಕೊಳ್ಳುವುದು ಸರಿಯಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವು ನಡೆಯುವುದು. ಸಂಗಾತಿಯ ಬೆಂಬಲವು ನಿಮ್ಮ‌ ಕಾರ್ಯಗಳಿಗೆ ಸಿಗಲಿದೆ.

ಮಕರ ರಾಶಿ: :ನಿಮ್ಮೊಳಗೆ ಯಾರನ್ನೂ ಬಿಟ್ಟುಕೊಳ್ಳಲಾರಿರಿ. ನೀವು ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಗೆಳೆತನ ನಿಮಗೆ ಬಹಳ ಇಷ್ಟವಾಗುವುದು. ನಿಮ್ಮಿಂದ ಉಪಕಾರ ಪಡೆದವರು ಗೌರವಿಸುವರು. ನೀವು ಇಷ್ಟಪಡುವ ಜನರು ನಿಮಗೆ ಸಹಾಯ ಮಾಡುವರು. ಹೆತ್ತವರಿಂದ ನಿಮಗೆ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ನಿಮಗೆ ಕೋಪಗೊಳ್ಳಲು ಕಾರಣ ಸಿಗದು. ಸಾಲವನ್ನು ಮಾಡಲು ಹಿಂಜರಿದರೂ ಅನಿವಾರ್ಯವಾಗಿ ಮಾಡಬೇಕಾಗಬಹುದು. ಹಳೆ ಕೆಲಸವನ್ನು ನವೀಕರಣ ಮಾಡಿಕೊಳ್ಳುವಿರಿ. ಬೇಕಾದ ವಸ್ತುಗಳ ಖರೀದಿಯನ್ನು ನೀವಿಂದು ಮಾಡಲಿದ್ದೀರಿ. ಮಕ್ಕಳು ನಿಮ್ಮಿಂದ‌ ಪ್ರೀತಿಯನ್ನು ಬಯಸಿಯಾರು. ಅವರು ಕೇಳಿದ ವಸ್ತುಗಳನ್ನು ಇಲ್ಲ ಎನ್ನದೇ ಕೊಡಿಸಿ. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು. ಕೆಲವನ್ನು ನೀವು ಅನಗತ್ಯವಾಗಿ ತೆಗೆದುಕೊಳ್ಳುವಿರಿ. ನೀವು ಮಕ್ಕಳ ಉತ್ಸಾಹವನ್ನು ಕುಗ್ಗಿಸುವುದು ಬೇಡ.

ಕುಂಭ ರಾಶಿ: :ಅಲ್ಪ ಹಣಕ್ಕೂ ಅಂಗಾಲಾಚುವ ಸ್ಥಿತಿ ಬರಬಹುದು. ನಿಮ್ಮ ದುರಭ್ಯಾಸದಿಂದ ಇಂದಿನ‌ ಸಮಯವನ್ನು ನಷ್ಟಮಾಡಿಕೊಳ್ಳುವಿರಿ. ನಿಮ್ಮನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಮನೆಯವರು ಇರುವರು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ಆಲಸ್ಯವು ಒಳ್ಳೆಯದಲ್ಲ‌. ಹೊಸ ವಸ್ತ್ರಗಳಿಂದ ನೀವು ಬಹಳ ಶೋಭಿಸುವಿರಿ. ಬಾಕಿ ಇರುವ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ಓದಿನಲ್ಲಿ ಆಸಕ್ತಿ‌ಯು ಕಡಿಮೆಯಾದೀತು. ಹಾಳಾದ ವಸ್ತುವಿನ ಮೇಲೆ ಮೋಹ‌ ಕಡಿಮೆ ಆಗದು. ತಂದೆಯ ಆರೋಗ್ಯವು ಹದ ತಪ್ಪಬಹುದು. ಹಿತಶತ್ರುಗಳಿಂದ ಭೀತಿಯು ಉಂಟಾಗಬಹುದು. ಕಾನೂನಿನ‌ ಸಮರದಲ್ಲಿ ಜಯದ ನಿರೀಕ್ಷೆಯಲ್ಲಿ ಇರುವಿರಿ. ದೈಹಿಕ ಶ್ರಮವು ಇಂದು ಅಧಿಕವಾಗಬಹುದು. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು.

ಮೀನ ರಾಶಿ: :ಪಶ್ಚಾತ್ತಾಪವು ಮನಸ್ಸನ್ನು ಹಗುರವಾಗಿ ಮಾಡುವುದು. ಇಂದು ನಿಮ್ಮ ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು.‌ ತಪ್ಪುಗಳ ಮಾಡದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯೂ ಇಲ್ಲ. ಜವಾಬ್ದಾರಿಯ ವೈಫಲ್ಯವನ್ನೂ ಯಾರೂ ಹೊರಲಾರರು. ಆರ್ಥಿಕವಾದ ತೊಂದರೆಯಲ್ಲಿ ಇರುವಾಗ ಅಕಸ್ಮಾತ್ ಸಂಪತ್ತು ನಿಮ್ಮ ಕೈ ಸೇರಬಹುದು. ಎಲ್ಲಿಗಾದರೂ ದೂರ ಹೋಗಲು ಮನಸ್ಸು ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ಧಾರ್ಮಿಕ ಕಾರ್ಯದಲ್ಲಿ ನೀವಿಂದು ತೊಡಗಿಕೊಳ್ಳಬಹುದು. ನಿಮಗೆ ಬರಬೇಕಾದ ಆಸ್ತಿಯ ಬಗ್ಗೆ ಮಾತು ನಡೆಯುವುದು. ಆರೋಗ್ಯದ ಮೇಲೆ ಅಲಕ್ಷ್ಯ ಬೇಡ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಮಕ್ಕಳ ವಿದ್ಯಾಭ್ಯಾಸದ ಖರ್ಚು ಅಧಿಕವಾಗಿ ತೋರುವುದು.

Leave a Reply

Your email address will not be published. Required fields are marked *