ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ, ಬುಧವಾರದಂದು ಶ್ರಮಕ್ಕೆ ಪ್ರತಿಫಲ, ಅಸಮಾಧಾನ ಹಾಗೂ ಅದಕ್ಕೆ ಸಮಾಧಾನ, ಸಹವಾಸದಿಂದ ನಿಮಗಾಗುವ ಲಾಭ ನಷ್ಟಗಳನ್ನು ಈ ದಿನದ ಭವಿಷ್ಯದ ವಿಷಯ. ನಿಮ್ಮ ಸತ್ಕಾಮನೆಗಳನ್ನು ಈ ದಿನ ಪೂರ್ಣಗೊಳಿಸಲಿ.
![](https://samagrasuddi.co.in/wp-content/uploads/2024/09/image-12-1024x576.png)
ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶುಭ, ಕರಣ : ವಣಿಜ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:47 – 14:13, ಯಮಘಂಡ ಕಾಲ 08:28 – 09:54, ಗುಳಿಕ ಕಾಲ 11:20-12:47
ಮೇಷ ರಾಶಿ: ಒಂದು ಊರಿಗೆ ಒಂದೇ ದಾರಿಯಲ್ಲ, ಒಂದು ಕೆಲಸಕ್ಕೆ ಒಂದೇ ಮಾರ್ಗವೂ ಅಲ್ಲ ಎನ್ನುವುದು ಮನದಟ್ಟಾಗುವುದು. ಯಾರನ್ನೋ ಮೆಚ್ಚಿಸಲು ಯಾರನ್ನೋ ಅವಮಾನಿಸಬೇಕಾಗುವುದು. ನಿಮ್ಮ ಯೋಜನೆಯನ್ನು ಬಲವಂತವಾಗಿ ಕಾರ್ಯರೂಪಕ್ಕೆ ತರುವಿರಿ. ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ನಿಮ್ಮ ಪರೀಕ್ಷೆಯ ಕಾಲವೂ ಇದಾಗಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಒಂದನ್ನೇ ಸಾಧಿಸುವ ಗುಣವನ್ನು ಬಿಟ್ಟುಬಿಡುವುದು ಉತ್ತಮ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ಇನ್ನೊಬ್ಬರ ಯೋಚನೆಯನ್ನು ಕದಿಯಬಹುದು. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಕೆಲವನ್ನು ನೀವು ಜಾಡ್ಯದಿಂದಲೇ ಕಳೆದುಕೊಳ್ಳುವಿರಿ. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ. ಹತ್ತಿರದವರ ಬಗ್ಗೆ ನಿಮಗೆ ಸಭ್ಯಭಾವವು ಇರದು. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ.
ವೃಷಭ ರಾಶಿ: ಹೂಡಿಕೆಗೆ ನಿಮ್ಮ ಹಣವನ್ನು ಹಾಕುವುದು ತಪ್ಪಾಗುವುದು. ತಾರತಮ್ಯ ಭಾವವು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುವುದು. ಯಾರಿಗಾದರೂ ದಾನವನ್ನು ಮಾಡುವಿರಿ. ವಾಹನ ಚಾಲನೆಯಲ್ಲಿ ಹಿಂಜರಿಯುವಿರಿ. ಮನಶ್ಚಾಂಚಲ್ಯದಿಂದ ಕೆಲಸದಲ್ಲಿ ತೊಂದರೆ ಆಗುವುದು. ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಕ್ಕಳಿಗೆ ತಂದೆಯಿಂದ ಸಹಾಯವು ಸಿಗಬಹುದು. ಕಾರ್ಯಗಳು ಸಮಯಮಿತಿಯನ್ನು ಮೀರಿ ವಿಳಂಬವು ನಿಮಗೆ ಇಷ್ಟವಾಗದು. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಕ್ಕಳಿಂದ ಶುಭ ಸಮಾಚಾರವು ನಿಮಗೆ ಬರಲಿದೆ. ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಮಯವನ್ನು ಕೊಡುವಿರಿ. ದಿನದ ಕಾರ್ಯಕ್ಕೆ ಸಮಯ ಸಾಲದೇ ಇರಬಹುದು. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ.
ಮಿಥುನ ರಾಶಿ: ಬೇಡದ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ನಿಮಗೆ ಆಗದವರನ್ನು ದೂರ ಮಾಡಿಕೊಳ್ಳಲು ಇಷ್ಟಪಡುವಿರಿ. ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಕಾಡಡಬಹುದು. ಸೌಂದರ್ಯದ ಬಗ್ಗೆ ಅತಿಯಾದ ಕಳಜಿ ಕಾಣಿಸುವುದು. ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ಇರುವುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ. ಇನ್ನೊಬ್ಬರ ನಂಬಿಕೆಯನ್ನು ಘಾಸಿಮಾಡುವಿರಿ. ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವುದು ತಪ್ಪಾದೀತು.
ಕರ್ಕಾಟಕ ರಾಶಿ: ಯಾರ ಸ್ವಭಾವವನ್ನೂ ನೀವು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಮೇಲಧಿಕಾರಿಗಳ ಮಾತಿಗೆ ನೀವು ಅನಾದರ ತೋರಿಸುವಿರಿ. ಸ್ವಂತ ಉದ್ಯೋಗದಿಂದ ಒತ್ತಡವು ಅಧಿಕವಾಗಿ ಬರಬಹುದು. ಮನೆಯ ಕೆಲಸವನ್ನು ಮಾಡಿಕೊಳ್ಳಲು ನಿಮಗೆ ಸಮಯ ಸಾಕಾಗದು. ನಿಮ್ಮ ಮಾತುಗಳಿಂದ ಅನರ್ಥವಾಗಬಹುದು. ಇಂದು ನಿಮಗೆ ಮಾತನಾಡುವ ಅವಕಾಶ ಸಿಕ್ಕರೆ ಮಿತವಾಗಿ ಆಡಬೇಕಾದೀತು. ಅವಶ್ಯಕವಿರುವಷ್ಟೇ ಆಹಾರವನ್ನು ಪಡೆಯುವಿರಿ. ಯಾರ ಸಹವಾಸವೂ ಬೇಡವೆನಿಸಬಹುದು. ಮೋಹದಲ್ಲಿ ನೀವು ಬೀಳುವಿರಿ. ಯಾರನ್ನೂ ನಂಬುವ ಸ್ವಭಾವವು ನಿಮ್ಮದಲ್ಲ. ಖರ್ಚಿನಿಂದ ನೀವು ಆತಂಕಗೊಳ್ಳುವಿರಿ. ನಿಮ್ಮ ಸಮಯವನ್ನು ಸಹೋದ್ಯೋಗಿಗಳು ಹಾಳು ಮಾಡುವರು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ.
ಸಿಂಹ ರಾಶಿ: ನಿಮ್ಮ ವಸ್ತುವೇ ಆದರೂ ಅದನ್ನು ಯೋಗ್ಯ ರೀತಿಯಲ್ಲಿ ಬಳಸಿ. ಮಿತಿ ಮೀರಿದ ಅನಾರೋಗ್ಯದಿಂದ ನಿಮಗೆ ಕಷ್ಟವಾಗಲು ಶುರುವಾದೀತು. ವೈದ್ಯ ವೃತ್ತಿಯಲ್ಲಿ ಒತ್ತಡವು ಅಧಿಕವಾಗಿ ಇರುವುದು. ನಿಮ್ಮನ್ನು ಅನಾದರ ಮಾಡಿದಂತೆ ಅತ್ತ ಕಡೆ ಹೋಗುವುದಿಲ್ಲ. ಸುಮ್ಮನೇ ಮೊಂಡು ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ಹೊಸ ಮನೆಯ ಖರೀದಿಯ ಯೋಚನೆ ಮಾಡುವಿರಿ. ನಿಮ್ಮದಲ್ಲದ ವಿಷಯವೂ ನಿಮ್ಮನ್ನು ಕಾಡಬಹುದು. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಸಂಗಾತಿಯು ದೂರ ಪ್ರಯಾಣ ಹೋಗಲು ಆಹ್ವಾನಿಸಬಹುದು. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ದಿನದಂತೆ ಇರುವುದಿಲ್ಲ. ನಿಮ್ಮದಾದ ಕಾರ್ಯದಲ್ಲಿ ನೀವು ಮಗ್ನರಾಗುವುದು ಉತ್ತಮ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವುದು ಬೇಡ. ವಿವಾಹ ಜೀವನಕ್ಕೆ ಒಗ್ಗಿಕೊಳ್ಳುವಿರಿ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು. ನಿಮಗೆ ಹೂಡಿಕೆಯ ಬಗ್ಗೆ ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು.
ಕನ್ಯಾ ರಾಶಿ: ಆಸಕ್ತಿಯಿಂದ ಮಾಡುತ್ತಿರುವ ಕೆಲಸಕ್ಕೆ ಮಧ್ಯದಲ್ಲಿ ವಿಘ್ನವು ಬರುವುದು. ಸರಳತೆಯನ್ನು ನೀವು ರೂಢಿಸಿಕೊಳ್ಳುವುದು ಉತ್ತಮ. ವಿವಾಹದ ವಿಚಾರಕ್ಕೆ ಮನೆಯಲ್ಲಿ ಶಾಂತಿಯು ಹಾಳಾಗಲಿದೆ. ಪ್ರಭಾವೀ ವ್ಯಕ್ತಿಗಳ ಸಹಕಾರದಿಂದ ನಿಮಗೆ ಜೀವನದ ಉತ್ತಮ ಮಾರ್ಗವು ಕಾಣಿಸುವುದು. ಇಂದು ಯಾರನ್ನೂ ನೋಯಿಸಲು ಮನಸ್ಸಾಗದು. ಸ್ತ್ರೀಯರಿಗೆ ಹೆಚ್ಚು ಅಭದ್ರತೆಯು ಕಾಣಿಸಿಕೊಳ್ಳಬಹುದು. ಇಂದು ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ಕಪಟಿಯ ಪಟ್ಟವೂ ನಿಮಗೆ ಸಿಗಬಹುದು. ನಿಮ್ಮ ಆದಾಯವನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಸರ್ಕಾರಿ ಕಾರ್ಯವು ವಿಳಂಬವಾಗಬಹುದು. ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು. ತಾಯಿಯ ಪ್ರೀತಿಯು ನಿಮಗೆ ಉತ್ಸಾಹವನ್ನು ಕೊಡುವುದು.
ತುಲಾ ರಾಶಿ: ನಿಮ್ಮವರ ಅಹಂಕಾರ ಹೆಚ್ಚಲು ನೀವೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರು. ಆಗಬೇಕಾದ ಕಾರ್ಯಕ್ಕೆ ಜನರ ವಿಶ್ವಾಸವನ್ನು ಪಡೆಯಬೇಕಾಗುವುದು. ನಿಮ್ಮ ಮಾತು ವಿಶ್ವಾಸಕ್ಕೆ ಯೋಗ್ಯವಾದಂತೆ ಕಾಣಿಸುವುದು. ಉದ್ಯೋಗದಲ್ಲಿ ನಿಮಗೆ ಕೈಬಿಡುವರೆಂಬ ಭಯ ಕಾಡುವುದು. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಪೂರ್ಣ ವಿಶ್ವಾಸ ಬರುವವರೆಗೆ ಆರ್ಥಿಕ ವ್ಯವಹಾರದಲ್ಲಿ ಮುಂದುವರಿಯುವುದು ಬೇಡ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸ್ನೇಹಿತರು ನಿಮ್ಮ ಪ್ರೇಮಪ್ರಾರ್ಥನೆಯನ್ನು ಸ್ವೀಕರಿಸುವರು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ವೃತ್ತಿಯಲ್ಲಿ ಇಂದು ಆಡಿದ ಮಾತು ನಿಮ್ಮನ್ನು ವಿಚಲಿತಗೊಳಿಸಬಹುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ.
ವೃಶ್ಚಿಕ ರಾಶಿ: ನ್ಯಾಯವನ್ನು ಪಡೆಯಲು ನ್ಯಾಯಲಯದ ಮೆಟ್ಟಿಲೇರಬೇಕಿಲ್ಲ, ಎರಡೂ ಪಕ್ಷದವರಿಗೂ ಸರಿಕಾಣುವ ವ್ಯಕ್ತಿಗಳ ಜೊತೆ ಕುಳಿತು ಸರಿ ಮಾಡಿಕೊಳ್ಳಬಹುದು. ಕೋಪವನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಕಷ್ಟವಾದೀತು. ವಿವಾಹಕ್ಕೆ ಉಂಟಾದ ದೋಷಗಳನ್ನು ದೈವಜ್ಞರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಬಗ್ಗೆ ಮಾಹಿತಿಯನ್ನು ಅನ್ಯರಿಂದ ಪಡೆದುಕೊಳ್ಳುವರು. ನಿಮಗೆ ಅಭದ್ರತೆಯು ಅತಿಯಾಗಿ ಕಾಡಬಹುದು. ವ್ಯಾಪಾರದಲ್ಲಿ ಮನೆಯವರ ತೊಡಗುವಿಕೆಯಿಂದ ಒತ್ತಡ ನಿವಾರಣೆಯಾಗುವುದು. ಆಧ್ಯಾತ್ಮಿಕ ಕ್ರಿಯೆಯನ್ನು ಮನೋಬಲಕ್ಕಾಗಿ ಮಾಡುವಿರಿ. ನಿಮಗೆ ಇಂದಿನ ಸಮಯವು ವ್ಯರ್ಥವಾದಂತೆ ತೋರುವುದು. ಧನದ ಒಳಹರಿವಿನಿಂದ ಅಹಂಕಾರವೂ ಬಂದೀತು. ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕಾಗಬಹುದು. ಫಲಾಪೇಕ್ಷೆ ಇಲ್ಲದೇ ಕಾರ್ಯದಲ್ಲಿ ತೊಡಗುವಿರಿ. ಔಷಧೋಪಚಾರದಲ್ಲಿ ಪೂರ್ಣವಾದ ನಂಬಿಕೆ ಇರಲಿ. ಹಿಂದೆ ಮುಂದೆ ಆಲೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ.
ಧನು ರಾಶಿ: ಇಂದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ವ್ಯವಹಾರವನ್ನು ಕೆಡಿಸಿಕೊಳ್ಳುವಿರಿ. ಭೋಗ ವಸ್ತುಗಳ ಬಗ್ಗೆ ಅಧಿಕ ಆಸಕ್ತಿ ಇರುವುದು. ಸಾಮಾಜಿಕ ಕಾರ್ಯಗಳಲ್ಲಿ ಮಹತ್ತರವಾದ ಗುರಿಯನ್ನು ಹೊಂದಿರುವಿರಿ. ನಿಮ್ಮ ಕೆಲಸಗಳೇ ಮಾತಾಡಿದರೆ ಶ್ರೇಯಸ್ಸು ಹೆಚ್ಚು. ಕುಟುಂಬದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳಬೇಕಾದೀತು. ನೀವು ಸಾಧಿಸಲು ಶ್ರಮಿಸುತ್ತಿದ್ದಕ್ಕೆ ಫಲಿತಾಂಶವು ಯೋಗ್ಯವಾಗಿ ಲಭಿಸಲಿದೆ. ಅಹಿತಕರ ಸುದ್ದಿಯಿಂದ ವಿಚಲಿತರಾಗಬೇಕಿಲ್ಲ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯದ ನಿರೀಕ್ಷೆ ಮಾಡಬಹುದು. ಪೂರ್ವಜನ್ಮದ ಪುಣ್ಯವು ನಿಮ್ಮನ್ನು ಅಸಪತ್ತಿನಿಂದ ರಕ್ಷಿಸುವುದು. ಅತಿಯಾದ ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವಾದೀತು. ಸಂಪತ್ತಿನ ವಿಚಾರಕ್ಕೆ ಕುಟುಂಬ ಸಮರಾಂಗಣವಾದೀತು. ಸಹೋದರನ ಬೆಂಬಲವಿದ್ದರೂ ನಿಮಗೆ ಸ್ವಾಭಿಮಾನದಿಂದ ಹೊರಬರಲು ಆಗದು.
ಮಕರ ರಾಶಿ: ಇಂದು ಮಹಿಳೆಯರು ಹಣದ ವಿಷಯಕ್ಕೆ ವಂಚಿತರಾಗಬಹುದು. ಉನ್ನತ ಸ್ಥಾನದತ್ತ ನಿಮ್ಮ ದೃಷ್ಟಿ ಇರುವುದು. ನಿಮ್ಮ ಕೆಲಸಗಳಲ್ಲಿ ಬರುವ ಅಪಯಶಸ್ಸನ್ನು ಸಹಿಸಲಾರಿರಿ. ನಾಯಕರಾದ ನಿಮ್ಮಿಂದ ಜನರು ಹೊಸತನವನ್ನು ನಿರೀಕ್ಷಿಸುವರು. ಇದರಿಂದ ನಿಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ಸಮಾಧಾನವನ್ನು ಸ್ವತಃ ಪಡೆಯಲು ಸಾಧ್ಯ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ಪರಧನ ಅಪಹರಣದ ಅಪಖ್ಯಾತಿಯು ನಿಮಗೆ ಅಂಟಿಕೊಳ್ಳಬಹುದು. ನಿಮ್ಮಅಲ್ಪ ಜ್ಞಾನವನ್ನು ಎಲ್ಲರೆದುರು ತೋರಿಸುವುದು ಬೇಡ. ಮಾಡುವ ಕೆಲಸವನ್ನೇ ಹೊಸರೀತಿಯಲ್ಲಿ ಮಾಡುವಿರಿ. ನಿಕಟವರ್ತಿಗಳ ಸಂಕಟಕ್ಕೆ ಸ್ಪಂದಿಸುವ ಹೊಣೆಗಾರಿಕೆಯೂ ನಿಮ್ಮದೇ ಆಗಲಿದೆ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ.
ಕುಂಭ ರಾಶಿ: ಸಂತೋಷದಲ್ಲಿ ಇಂದಿನ ಕಾರ್ಯಯೋಜನೆಗಳನ್ನು ಮರೆತುಬಿಡುವಿರಿ. ನಿಮ್ಮ ಪ್ರತಿಭೆಗೆ ಯೋಗ್ಯ ಸ್ಥಾನವನ್ನು ಅನ್ವೇಷಿಸುವಿರಿ. ನಿಮ್ಮ ಕಲಿಕೆ ಸರಿಯಾದ ಮಾರ್ಗದಲ್ಲಿ ಇದೆಯೇ ಎಂಬುದನ್ನು ಅನ್ಯರಿಂದಲಾದರೂ ಪರೀಕ್ಷಿಸಿಕೊಳ್ಳಿ. ನಿರುದ್ಯೋಗಿಗಳು ಉದ್ಯಮದ ಕಡೆಯಿಂದ ಉತ್ತರಕ್ಕಾಗಿ ಕಾಯುವಿರಿ. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು. ಹೊಗಳಿಕೆಯ ಮಾತಿಗೆ ಮರುಳಾಗುವಿರಿ. ಸಮಯಕ್ಕೆ ಆಗದೇ ಇರುವ ಯಾವುದನ್ನೂ ನೀವು ಗಣನೆಗೆ ತೆಗೆದುಕೊಳ್ಳಲಾರಿರಿ. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ.
ಮೀನ ರಾಶಿ: ಇಂದು ನೀವು ಬಹಳ ಆತುರದಲ್ಲಿ ಎಲ್ಲ ಕಾರ್ಯಗಳಲ್ಲಿ ತೊಡಗುವಿರಿ. ವಿದ್ಯಾರ್ಥಿಗಳು ಬಂದಷ್ಟೇ ಅಂಕಗಳಿಗೆ ತೃಪ್ತಿಪಡಬೇಕಾಗುತ್ತದೆ. ಇಂದು ನಿಮ್ಮ ಪರೀಕ್ಷೆಯ ಸಮಯ. ನಿಮ್ಮ ನಿಯಮಗಳನ್ನು ಒಂದೊಂದಾಗಿಯೇ ಜಾರಿಗೆ ತರಲು ಪ್ರಯತ್ನಿಸಿದರೂ ಸಫಲತೆ ಕಾಣಬಹುದು. ಕೆಲವು ಕೆಟ್ಟ ಸುದ್ದಿಗಳು ಮನಸ್ಸಿನಲ್ಲಿ ಹತಾಶೆಯ ಸ್ಥಿತಿಯನ್ನು ಬಿಡಬಹುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ಯಂತ್ರೋಪಕರಣಗಳ ಮಾರಾಟದಿಂದ ತೃಪ್ತಿ ಇರವುದು. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ. ಬಂಧುಗಳ ಜೊತೆ ಕಲಹವಾಗುವುದು. ಕೆಲವು ಸಂಗತಿಗಳನ್ನು ಆಲೋಚಿಸಿದಷ್ಟೂ ಕ್ಲಿಷ್ಟವೆನಿಸಬಹುದು. ಅದರ ಬಗ್ಗೆ ಏನನ್ನೂ ಯೋಚಿಸುವುದು ಬೇಡ. ತಾನಾಗಿಯೇ ಉತ್ತರ ದೊರೆಯುವುದು. ಸಂಗಾತಿಯ ನೆರವನ್ನು ನೀವು ನಿರೀಕ್ಷಿಸುವಿರಿ. ಆದ್ಯತೆಯ ಮೇಲೆ ನಿಮ್ಮ ಕಾರ್ಯಗಳು ಇರಬಹುದು.