Horoscope Today 08 February 2025: ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ.

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಧನಿಷ್ಠಾ ಮಹಾನಕ್ಷತ್ರ ಶನಿವಾರ ಭಯದ ವಾತಾವರಣ, ಆಯೋಗದಲ್ಲಿ ವ್ಯತ್ಯಾಸ, ಬಂಧುಗಳ ವಿಯೋಗ, ಮಂದಗತಿಯ ಕಾರ್ಯಗಳು ಇಂದಿನ ಭವಿಷ್ಯದಲ್ಲಿ.‌ ವಿವೇಚನೆ ಇರಲಿ.‌ ಶುಭವಾಗಲಿ ಈ ದಿನ.

Horoscope Today 08 February 2025: ದುರಭ್ಯಾಸದಿಂದ ಕಾರ್ಯ ಹಾಳು, ನಷ್ಟ

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಐಂದ್ರ, ಕರಣ : ಗರಜ, ಸೂರ್ಯೋದಯ – 07 – 00 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:54 – 11:20, ಯಮಘಂಡ ಕಾಲ 14:14 – 15:40, ಗುಳಿಕ ಕಾಲ 07:00 – 08:27.

ಮೇಷ ರಾಶಿ: ಇಂದು ನೀವು ಅನೇಕ ಒತ್ತಡಗಳಿಂದ ಮುಕ್ತರಾಗಿ ಶಾಂತವಾಗಿ ಕಾಣಿಸುವಿರಿ. ನಿಮ್ಮ ಸುತ್ತಲಿನ ಶುದ್ಧತೆಯ ವಿಚಾರದಲ್ಲಿ ಇನ್ನಷ್ಟು ಕಾಳಜಿ ಅವಶ್ಯಕ. ಪಾಲುದಾರಿಕೆಗೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಲು ಇಂದು ಒಳ್ಳೆಯದು. ಕೂಡಿಟ್ಟ ಹಣದಿಂದ ನಿಮಗೆ ಕೆಲಸಕ್ಕೆ ಬರದಂತೆ ಆಗುವುದು. ಅನಿರೀಕ್ಷಿತ ಸುದ್ದಿಯು ನಿಮ್ಮ‌ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ‌ಇನ್ನೊಬ್ಬರನ್ನು ದೂರುತ್ತ ನಿಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಬಡ್ತಿಯಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು.‌ ಮಕ್ಕಳ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಶುಭಸಮಾರಂಭಗಳಿಗೆ ಭೇಟಿ ಕೊಡುವಿರಿ. ಯಾರದೋ ಒತ್ತಡದಿಂದ ದಿನಚರಿಯನ್ನು ವ್ಯತ್ಯಾಸ‌ ಮಾಡಿಕೊಳ್ಳುವಿರಿ. ಸ್ನೇಹವು ಗೊತ್ತಿಲ್ಲದಂತೆ ಪ್ರೀತಿಯಾಗಿ ಬದಲಾಗಬಹುದು. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷಿಸುವುದು ಬೇಡ. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸ್ತ್ರೀಯರ ಸಹವಾಸವು ಅಧಿಕವಾಗಿರುವುದು.

ವೃಷಭ ರಾಶಿ: ನಿಮ್ಮ ಗುರಿಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಮನಸ್ಸು ಕೆಲವು ವಿಚಾರಗಳಿಗೆ ದುರ್ಬಲವಾಗುವುದು. ವಾಹನ ಚಾಲನೆಯಲ್ಲಿ‌ ಮಿತಿಯಿರಲಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ಮಾತುಕತೆಗಳು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು. ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗದು. ವಿಷಯಾಸಕ್ತಿ ಅಧಿಕವಾಗಿದ್ದರೂ ಅದಕ್ಕೆ ಯೋಗ್ಯ ಜನರನ್ನು ಹುಡುಕುವಿರಿ. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ಅಧಿಕ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು.

ಮಿಥುನ ರಾಶಿ: ಇಂದು ಕೆಲಸವು ಪೂರ್ಣ ಮಾಡಿದ ತೃಪ್ತಿಯನ್ನು ಅನುಭವಿಸುವ ಜೊತೆಗೆ ಮತ್ತೊಂದು ನಿಮ್ಮ ಪಾಲಿಗೆ ಕಾತುತ್ತಿರುವುದು. ಈ ದಿನ ನೀವು ಅದೃಷ್ಟದ ಕಾರಣ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ಮಿತವಾದ ಆಹಾರಸೇವನೆಯನ್ನು ಇಟ್ಟುಕೊಳ್ಳಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಅಸ್ಪಷ್ಟ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಯಾರ‌ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಕಣ್ಣಿನ ತೊಂದರೆ ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ಕಿರಿಕಿರಿ ಎನಿಸಬಹುದು. ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ಹುಣ್ಣನ್ನು ಕೆರದು ಗಾಯ ಮಾಡಿಕೊಳ್ಳುವುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ಪ್ರಯತ್ನ ಮುಂದುವರಿಯಲಿ.

ಕರ್ಕಾಟಕ ರಾಶಿ: ಇಂದು ವಿರೋಧಿಗಳ ಎದರು ಅಹಂಕಾರವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಹಲವಾರು ದಿನದ ಸಂಕಟವನ್ನು ನೀವು ಮನೆಯವರ ಮುಂದೆ ಹೊರಹಾಕುವಿರಿ. ವೃತ್ತಿಪರ ಮತ್ತು ಸಾಮಾಜಿಕ ವಲಯಗಳಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ನಾನಾ ರೀತಿಯ ಸೌಲಭ್ಯಗಳು ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವನ್ನು ಅನ್ಯರು ಆಕ್ರಮಿಸಿಕೊಳ್ಳಬಹುದು. ಚೋರಭೀತಿಯು ನಿಮಗೆ ಆತಂಕಪಡುವಿರಿ. ಭೂಮಿಯ ವ್ಯವಹಾರದಿಂದ ಸಂಬಂಧಗಳು ಹಾಳಾಗುವುದು. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು.

ಸಿಂಹ ರಾಶಿ: ಹತ್ತಿರದವರೇ ಮಾಡಿದ ವಿಶ್ವಾಸಘಾತದಿಂದ ನೀವು ಮೌನವಹಿಸುವಿರಿ. ವಿದೇಶದ ಔದ್ಯೋಗಿಕ ವಲಯದಲ್ಲಿ ಇರುವವರು ಗೊಂದಲದಲ್ಲಿ ಇರಬಹುದು‌. ವ್ಯವಹಾರಗಳ ವಿಷಯದಲ್ಲಿ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಉದ್ವೇಗಕ್ಕೆ ಸಿಕ್ಕಿ ನಿಮ್ಮ ವರ್ತನೆಯಿಂದ ಎಲ್ಲರೂ ನಕ್ಕಾರು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ನೀವು ಜನಪ್ರಿಯತೆಯನ್ನು ಗಳಿಸುವಿರಿ. ಪ್ರೇಮಿಗಳಿಗೆ ಈ ಸಮಯವು ಶುಭವಲ್ಲ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸುವುದು.‌ ಯಾರನ್ನು ವಂಚಿಸಿದರೂ ಸಮಯವನ್ನು ವಂಚಿಸಲಾಗದು. ನಿಮ್ಮನ್ನು ಸ್ಥಾನದಿಂದ‌ ಕೆಳಗೆ ಹಾಕಲು ನೋಡಬಹುದು.

ಕನ್ಯಾ ರಾಶಿ: ನಿಮ್ಮ ಅಪ್ರಬುದ್ಧವಾದ ಮಾತಿನಿಂದ ವ್ಯವಸ್ಥೆ ನಿಮ್ಮನ್ನು ದೂರವಿಡುವುದು. ಮಹಿಳೆಯರ ಮೇಲೆ‌ ಅಪವಾದ ಬರುವ ಸಾಧ್ಯತೆ ಇದೆ. ಇಂದು ನೀವು ಏನೇ ಮಾಡಿದರೂ ಉತ್ಸಾಹದಿಂದ ಮಾಡುವಿರಿ. ಸಾಲದಿಂದ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವಿರಿ. ನಿಶ್ಚಿಂತೆಯಿಂದ ಸದ್ಯ ಇರುವಿರಿ. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನ ಬೇಕು. ಮಕ್ಕಳಿಗೆ ಮಾಡಿದ ಎಲ್ಲವ ಕರ್ತವ್ಯಗಳು ಫಲಿಸಿದ ಸಂತೋಷ ಸಿಗಲಿದೆ. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ವ್ಯಾಯಾಮದ ಮೂಲಕ ನಿಮ್ಮ ದುರ್ಬಲ ದೇಹವನ್ನು ಗಟ್ಟಿ ಮಾಡಿಕೊಳ್ಳುವಿರಿ. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಹೋಲಿಕೆ ಮಾಡಿಕೊಂಡು ಸಂಕಟಪಡುವಿರಿ. ಶ್ರದ್ಧೆಯೂ ನಿಮ್ಮಲ್ಲಿ ಅತಿಮುಖ್ಯವಾಗಿ ಕಾಣಿಸಿಕೊಳ್ಳುವುದು. ಚೆನ್ನಾಗಿ ಯೋಚಿಸಿದ ನಿರ್ಧಾರಗಳು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುವುದು.

ತುಲಾ ರಾಶಿ: ಬಹಳವಾಗಿ ನಂಬಿದವರು ನಿಮ್ಮ ಸಹಾಯಕ್ಕೆ ಬಾರದೇ ಇರಬಹುದು. ಅನ್ಯರ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡುವಿರಿ. ಆದರೆ ನಿಮಗೆ ದಿಕ್ಕೇ ಕಾಣದಂತಹ ಸ್ಥಿತಿಯಲ್ಲಿ ಇರುವಿರಿ. ವಿವಾಹದ ಚಿಂತೆ ಅಲ್ಪ ಕಾಲ ದೂರವಿರುವುದು. ಮಾಡಬೇಕಾದೀತು ಕೆಲಸಗಳನ್ನು ಮರೆತುಬಿಡುವಿರಿ. ನಿಮ್ಮ ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಅನಾರೋಗ್ಯದ ನಿಮಿತ್ತ ಧನಸಹಾಯ ಸಿಗುವುದು. ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಕಲಾವಿದರು ಹೆಚ್ಚಿನ ಆದಾಯವನ್ನು ಮಾಡಿಕೊಳ್ಳುವರು. ಸ್ಥಿಗಿತಗೊಂಡ ಕಾರ್ಯಗಳಿಗೆ ಪುನಃ ಚಾಲನೆ ಸಿಗಲಿದೆ. ಸ್ಪರ್ಧೆಯಲ್ಲಿ ನಿಮ್ಮದೇ ಮೇಲುಗೈ ಆಗಲಿದೆ. ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಭವಿಷ್ಯಕ್ಕಾಗಿ ತಮ್ಮ ಮಾರ್ಗವನ್ನು ಪರಿಶೀಲಿಸಿಕೊಳ್ಳಿ. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು.

ವೃಶ್ಚಿಕ ರಾಶಿ: ಸರ್ಕಾರದಿಂದ ಆಗುವ ಕಾರ್ಯಕ್ಕೆ ಒಬ್ಬರೇ ಹೋಗುವುದಕ್ಕಿಂತ ಗುಂಪಿನಲ್ಲಿ ಹೋಗಿ. ನಿಮಗೆ ಆಗಬೇಕಾದ ಕೆಲಸಕ್ಕೆ ಅಧಿಕಾರಿಗಳ‌ ಜೊತೆ ಮಾತನಾಡಿ.‌ ಆರೋಗ್ಯಕ್ಕಾಗಿ ಸೇವಿಸಿದ ಔಷಧವು ದುಷ್ಪರಿಣಾವನ್ನು ಉಂಟುಮಾಡೀತು. ನಿಮ್ಮ ಬಯಕೆಯು ಪೂರ್ಣವಾಗುವ ಸಾಧ್ಯತೆ ಹೆಚ್ಚು. ಬಹಳ ದಿನಗಳ ಪ್ರಯಾಣದ ಅನಂತರ ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಆರ್ಥಿಕ ಸಮಸ್ಯೆಗಳನ್ನು ನೀವು ಸಂಗಾತಿಯ ಹಂಚಿಕೊಳ್ಳಲು ಹಿಂಜರಿಯುವಿರಿ. ನಿಮ್ಮ ಜೀವನದ ದಿನಚರಿಯನ್ನು ವೈವಿಧ್ಯಮಯವಾಗಿ ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೆ, ಗೊತ್ತಿಲ್ಲದಂತೆ ಇರುವುದು ಉತ್ತಮ. ಅಪರಿಚಿತ ವರ್ತನೆಯು ನಿಮಗೆ ಗೊತ್ತಿಲ್ಲದೇ ಕಷ್ಟವಾದೀತು. ಇಂದು ನೀವು ಹಠಮಾರಿಯಂತೆ ತೋರುವಿರಿ. ನೀವು ಕಷ್ಟಕರ ಸಂದರ್ಭಗಳಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸಿ. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ನಿಮ್ಮ ವೈಯಕ್ತಿಕ ಕಾರಣಗಳು ಎಷ್ಟೇ ಇದ್ದರೂ ಅದನ್ನು ಪರರ ಮೇಲೆ ತೋರುಸವುದು, ಹೇರುವುದು ಬೇಡ.

ಧನು ರಾಶಿ: ಇಂಸು ಸ್ನೇಹಿತರ ಜೊತೆ ಭಾವನಾತ್ಮಕ ಸಣ್ಣ ವಿಚಾರಕ್ಕೆ ಮನಸ್ತಾಪ, ದೂರವೂ ಆಗಬಹುದು. ಯಾರನ್ನೂ ಅತಿಯಾಗಿ ಬಳಸಿಕೊಳ್ಳುವುದು ಇಷ್ಟವಾಗದು. ನಿಮ್ಮ ಬಲವರ್ಧನೆಗೆ ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಇಂದು ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಜಾಣ್ಮೆಯಿಂದ ವ್ಯವಹರಿಸಿ, ಎದುರಿನವರನ್ನು ಇಕ್ಕಟ್ಟಿಗೆ ಸಿಲುಕಿಸುವಿರಿ. ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ವೈದ್ಯ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ನಿಮ್ಮ ಸ್ವಭಾವವು ಇಂದಿನ ವಿಳಂಬದ ಕಾರ್ಯಗಳಿಗೆಲ್ಲ ಕಾರಣವಾಗಲಿದೆ. ಪ್ರಯಾಣದಲ್ಲಿ ವಸ್ತುಗಳನ್ನು ಭದ್ರವಾಗಿಸಿರಿಕೊಳ್ಳಿ. ಬದಲಾಗುವ ಸಾಧ್ಯತೆ ಇದೆ.‌ ದಿನದಲ್ಲಿ ಆಗಬೇಕಾದ ಕಾರ್ಯಗಳನ್ನು ಮೊದಲೇ ಸಿದ್ಧಮಾಡಿಕೊಳ್ಳಿ. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಲು ಹಿಂಜರಿಯು ಅವಶ್ಯಕತೆ ಇರದು. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸದೇ ಯೋಗ್ಯ ಮರ್ಯಾದೆಯನ್ನು ಕೊಟ್ಟು ಕಾರ್ಯವನ್ನು ಮಾಡಿಸಿಕೊಳ್ಳಿ.

ಮಕರ ರಾಶಿ: ನಿಮ್ಮ ತುರ್ತಾದ ವೈಯಕ್ತಿಕ ಕಾರ್ಯಗಳನ್ನು ಮಾಡಲು ಸಮಯ ಸಿಗದು. ಕುಲದೇವರ ದರ್ಶನಕ್ಕೆ ಹೋಗುವ ಆಸೆಯನ್ನು ಪ್ರಕಟಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಕ್ಕಿ ಇನ್ನಷ್ಟು ಕೆಲಸವನ್ನು ಯೋಜಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನೊಬ್ಬರ ಅವಶ್ಯಕತೆಗಳನ್ನು ನೀವು ಪೂರೈಸುವ ಹೊಣೆ ಹೊರುವಿರಿ. ಇಂದು ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಟ್ಟು ಅಲಂಕಾರಕ್ಕಾಗಿ ಸಮಯವಿಡುವಿರಿ. ಆಸ್ತಿಯ ಸಂರಕ್ಷಣೆಗೆ ದಾರಿಯನ್ನು ಹುಡುಕುವಿರಿ. ಇಂದು, ನಿಮ್ಮ ಒಡಹುಟ್ಟಿದವರು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಸಂಪರ್ಕಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಪ್ರಯಾಣ ಹೊರಟಿರುವಿರಿ. ನೀವು ಸಮಚಿತ್ತರಾಗಲು ಕೆಲಾವಾರು ಕರ್ಮಗಳನ್ನು ದಿನವೂ ಮಾಡಬೇಕಾದೀತು. ಆಸ್ತಿಯ ವಿಚಾರದಲ್ಲಿ ದಾಯಾದಿಗಳಿಂದಲೇ ತೊಂದರೆ ಬಂದೀತು. ನೋವುಗಳನ್ನೇ ನೆನಪಿಸಿಕೊಳ್ಳುವುದರಲ್ಲಿ ಅರ್ಥವಿರದು. ನಿಮ್ಮ ಪಾಲಿನ ಸುಖದ ನೆನಪಿರಲಿ.

ಕುಂಭ ರಾಶಿ: ಇಂದು ನೀವು ಪರಮಾಪ್ತರಿಗೆ ಅಮೂಲ್ಯವಾದ ಅಚ್ಚರಿಯ ಉಡುಗೊರೆಯೊಂದನ್ನು ನೀಡುವಿರಿ. ಅಧಿಕಾರಿಗಳ ಮನಸ್ಸನ್ನು ಯಾವುದಾರೂ ರೀತಿಯಲ್ಲಿ ಗೆಲ್ಲುವ ಪ್ರಯತ್ನ ಮಾಡುವಿರಿ. ಆರ್ಥಿಕ ಅಡೆತಡೆಗಳು ಇಂದು ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗುವುದು. ಎಲ್ಲರಿಂದ ದೂರಾಗುವ ಸ್ಥಿತಿಯನ್ನು ತಂದುಕೊಳ್ಳಬಹುದು. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ, ಹಿರಿಯರಿಂದ ಉಪದೇಶ ಪ್ರಾಪ್ತಿ. ನಾಯಕರಿಗೆ ಬೆಂಬಲಕ್ಕಿಂತ ವಿರೋಧಿಗಳ ಧ್ವನಿಯೇ ಹೆಚ್ಚು ಕೇಳಿಸುವುದು. ಕೃಷಿಗಾಗಿ ಮಾಡಿದ ಬಾಕಿ ಸಾಲವನ್ನು ತೀರಿಸುವಿರಿ. ದುರಭ್ಯಾಸವು ನಿಮ್ಮ ಗುರಿಯನ್ನೇ ತಪ್ಪಿಸಿಹಾಕುವುದು. ಹಣಕ್ಕಾಗಿ ಸ್ನೇಹಿತರು ನಿಮ್ಮನ್ನು ಅತಿಯಾಗಿ ಪೀಡಿಸಯಾರು. ಅನಾರೋಗ್ಯ ಅತಿಯಾದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ಮಾತ್ರ ನೀವು ಸಂತೋಷವಾಗಿ ಇರುವಿರಿ.

ಮೀನ ರಾಶಿ: ಇಂದು ಸೋಲು ಗೆಲುವಿನ ಲೆಕ್ಕಾಚಾರವನ್ನು ಮಾಡಿಕೊಂಡು ಮುನ್ನಡೆಯುವಿರಿ. ಎಲ್ಲ ವಿಷಯಕ್ಕೂ ಇದು ಬೇಕಾಗದು. ಮನೋರಂಜನೆಗೆ ಇದು ಅಡ್ಡಿಯಾಗಬಾರದು. ಕುಟುಂಬದಲ್ಲಿ ಆದ ಮನಸ್ತಾಪ ಇಂದಿನ ದಿನವನ್ನೇ ತಿಂದುಹಾಕುವುದು. ಆಕಸ್ಮಿಕವಾಗಿ ಹಣದ ವ್ಯಯವೂ ಆಗಲಿದ್ದು ಮನಸ್ಸಿಗೆ ಮತ್ತಷ್ಟು ನೋವು. ನಿಮ್ಮ ಮನಸ್ಸಿನ ಹಾಗೂ ದೈಹಿಕ ಚೈತನ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಮಯವನ್ನು ಕ್ರೀಡೆಗೆ ಮೀಸಲಿಡುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿ ಬಂದರೆ ಕಷ್ಟವಾಗುವುದು. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಆರೋಗ್ಯವನ್ನು ಜಾಗರೂಕತೆಯಿಂದ ಕಾಪಾಡಿಕೊಂಡರೂ ನಿಮ್ಮ ಕ್ರಮದಲ್ಲಿ ವ್ಯತ್ಯಾಸ ಕಾಣಿಸಬಹುದು. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಮಾನಸಿಕವಾಗಿ ಕುಗ್ಗುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸುವಲ್ಲಿ ಹಿನ್ನಡೆ. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ.

Source: https://tv9kannada.com/horoscope/horoscope-today-february-8-2025-deficiency-loss-due-to-abuse-astrology-in-kannada-ggs-975501.html

Leave a Reply

Your email address will not be published. Required fields are marked *