ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಮಂಗಳ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಮೃಗಶಿರ, ಯೋಗ : ವೃದ್ಧಿ, ಕರಣ : ಬಾಲವ, ಸೂರ್ಯೋದಯ – 06 – 14 am, ಸೂರ್ಯಾಸ್ತ – 07 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:51 – 17:27 ಗುಳಿಕ ಕಾಲ 12:39 – 14:15, ಯಮಗಂಡ ಕಾಲ 09:27 – 11:03
ಮೇಷ ರಾಶಿ: :ಇಂದು ನೀವು ಒಂದು ವಿಚಾರವನ್ನು ಒಬ್ಬೊಬ್ಬರ ಬಳಿ ಒಂದೊಂದು ರೀತಿಯಲ್ಲಿ ಹೇಳುವಿರಿ. ಸಂಪತ್ತು ಇದ್ದರೂ ಇಲ್ಲವೆಂದು ಕೊರಗುವಿರಿ. ನಿಮ್ಮ ಪಾಲಿನದ್ದು ನೀವು ಇಂದು ಪಡೆದುಕೊಳ್ಳುವಿರಿ. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ನಿಮಗೆ ಇಂದು ಕುಟುಂಬಕ್ಕಿಂತಲೂ ಕಾರ್ಯವೇ ಮುಖ್ಯವಾಗಲಿದೆ. ಬೇಡ ಆಲೋಚನೆಯನ್ನು ಬಿಡುವುದು ಸೂಕ್ತ. ಪ್ರಯತ್ನಕ್ಕೆ ಇಂದೇ ಫಲವು ಸಿಗುತ್ತದೆ ಎಂಬುದು ಬೇಡ. ಮನೆಯವರ ಕಾರಣಕ್ಕೆ ಔತಣಕೂಟವನ್ನು ಸಿದ್ಧಪಡಿಸುವಿರಿ. ನ್ಯಾಯಾಲಯದಲ್ಲಿ ದೂರುಗಳು ಇರಬಹುದು. ಹಣಕಾಸಿನ ವಿಚಾರದಲ್ಲಿ ಬಂಧುಗಳ ಜೊತೆ ಕಲಹವನ್ನು ಮಾಡಿಕೊಳ್ಳಬಹುದು. ಸಂಸಾರಕ್ಕೆ ಸಂಬಂಧಿಸಿದಂತೆ ಕಿವಿಮಾತುಗಳನ್ನು ಹಿರಿಯರು ಹೇಳಿಯಾರು. ನಿಮ್ಮ ಕೈಲಾದರೆ ಸಹಾಯ ಮಾಡಿ. ಸುಮ್ಮನೇ ಬಡಾಯಿ ಕೊಚ್ಚಿಕೊಳ್ಳುವುದು ಬೇಡ. ದಿನಸ ಎಲ್ಲ ಕಾರ್ಯವನ್ನೂ ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಎಲ್ಲದಕ್ಕೂ ನಕಾರಾತ್ಮಕ ಹೇಳಿಕೆಯನ್ನು ಕೊಡುವಿರಿ.
ವೃಷಭ ರಾಶಿ: :ನಿಮಗಾಗುವ ಅಪಮಾನವನ್ನು ತೋರಿಸಿಕೊಳ್ಳಲಾರಿರಿ. ದಿನದ ಆರಂಭದಲ್ಲಿ ಉತ್ಸಾಹವಿರದು. ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ನೂತನ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಪುಣ್ಯಸ್ಥಳದಿಂದ ನೆಮ್ಮದಿ ಸಿಗುವುದು. ನಿಮ್ಮೆದುರು ಸಹೋದ್ಯೋಗಿಗಳನ್ನು ಪ್ರಶಂಸಿಸಿದರೆ ಕೋಪ ಬರುವುದು. ನಿಮ್ಮವರಿಗೆ ಅನಿರೀಕ್ಷಿತವಾಗಿ ಅಮೂಲ್ಯವಾದ ಉಡುಗೊರೆಯೊಂದನ್ನು ಕೊಡುವಿರಿ. ಕುಟುಂಬದ ಕಲಹವನ್ನು ಶಾಂತಗೊಳಿಸಲು ಪ್ರಯತ್ನಿಸುವಿರಿ. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಿಮಗೆ ಕಷ್ಟವಾದೀತು. ರಾಜಕೀಯದಿಂದ ನಿಮ್ಮ ಸ್ಥಾನಕ್ಕೆ ಚ್ಯುತಿ. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು. ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ಪಾಲುದಾರಿಕೆಯಿಂದ ನಷ್ಟವೆನಿಸಬಹುದು. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ. ಉದ್ಯಮಿಗಳಿಗೆ ನೌಕರರ ಸಮಸ್ಯೆಯಾಗಬಹುದು.
ಮಿಥುನ ರಾಶಿ: :ನಿಮಗಿಂತಲೂ ಒಳ್ಳೆಯವರು ಇದ್ದಾರೆ ಎಂಬ ಸಮಾಧಾನದ ಜೊತೆ ಸಣ್ಣ ಅಸೂಯೆಯೂ ಬರಲಿದೆ. ಅಂಧಾಭಿಮಾನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ಅಧಿಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ಯಾರನ್ನೋ ಬೆರಳು ಮಾಡಿ ತೋರಿಸುವ ಬದಲು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಉತ್ತಮ. ನಿಮ್ಮಿಂದ ಅಗುವ ಪ್ರಭಾವವು ನೌಕರರಿಗೆ ಇರಿಸುಮುರಿಸಾದೀತು. ಯಾರಿಗಾದರೂ ಸಲಹೆಯನ್ನು ಕೊಡುವ ಮೊದಲು ಆಲೋಚಿಸಿ. ನಿಮ್ಮ ಸ್ವಭಾವಗಳನ್ನು ಬದಲಿಸಲು ಸಲಹೆಗಳು ಬರಬಹುದು. ಯಾರದರೂ ನಿಮ್ಮ ಬಳಿ ಹಣದ ಸಹಾಯವನ್ನು ಮಾಡಲು ಕೇಳಬಹುದು. ಯೋಚಿಸಿ ಸಹಾಯ ಮಾಡಿ. ಪುನಃ ವಾರದೆಯೂ ಇರಬಹುದು. ನಿಮ್ಮ ಬಗ್ಗೆ ಇರುವ ಭಾವನೆಯು ಬದಲಾಗುವುದು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು . ಹಿಂದೆ ಮಾಡಿದ ಕಾರ್ಯಕ್ಕಾಗಿ ಉತ್ತಮ ಫಲ ಸಿಗುವುದು.
ಕರ್ಕಾಟಕ ರಾಶಿ: :ಸಂಗೀತ ಅಥವಾ ವಾದ್ಯ ಕಲಾವಿದರಿಗೆ ದೊಡ್ಡ ಸಮಾರಂಭಗಳಿಗೆ ಕರೆ ಬರಲಿದೆ. ಇಂದು ರಾಜಕೀಯ ವ್ಯಕ್ತಿಗಳಿಗೆ ಹೆಚ್ಚು ಒತ್ತಡವಿರುವುದು. ಪ್ರಶಂಸೆಯ ಕಾರಣದಿಂದ ಖುಷಿಯಾಗಿ ಕೆಲಸ ಮಾಡುವಿರಿ. ವಾಹನದಿಂದ ನಿಮಗೆ ತೊಂದರೆಗಳು ಆಗಬಹುದು. ಸ್ತ್ರೀಯರಿಗೆ ಹೆಚ್ಚು ಅನುಕೂಲಕರವಾಗಲಿದೆ. ಸಮಾರಂಭಗಳಲ್ಲಿ ಆಪ್ತರ ಭೇಟಿಯಾಗಲಿದೆ. ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇನ್ನೊಬ್ಬರ ವಸ್ತುಗಳನ್ನು ಇಟ್ಟುಕೊಳ್ಳುವ ಹೊಣೆಗಾರಿಕೆ ಬರಲಿದೆ. ಎಲ್ಲ ವಿಷಯವನ್ನು ಆಮೂಲಾಗ್ರವಾಗಿ ತಿಳಿದು ಮಾತನಾಡಿ. ನಿಮ್ಮವರನ್ನು ನೀವು ದೂರಮಾಡಿಕೊಳ್ಳಲಿದ್ದೀರಿ. ಒತ್ತಾಯದಿಂದ ಇರಿಕೊಂಡರೂ ಪ್ರಯೋಜನವಾಗದು. ನಿಮ್ಮ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡುವರು. ಅಧ್ಯಾತ್ಮ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು. ಕೃಷಿಯು ನಿಮ್ಮ ಇಷ್ಟದ ಸಂಗತಿಯಾಗಲಿದೆ.
ಸಿಂಹ ರಾಶಿ: :ಕಲ್ಪನೆಗಳನ್ನು ಪಕ್ಕಕ್ಕಿರಿಸಿದಷ್ಟು ನೀವು ಸಂತೋಷದಲ್ಲಿ ಇರುವಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಸುಮ್ಮನೇ ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ. ಮನಸ್ಸನ್ನು ಯಾವುದೋ ಬೇಡದ ವಿಷಯಗಳ ಆಲೋಚನೆಗೆ ಬಿಡುವಿರಿ. ಸ್ನೇಹಿತರ ನಿಮ್ಮನ್ನು ದೂರವಿಡಲು ಯೋಚಿಸುವರು. ನೀವು ನಿಮ್ಮ ಕೆಲಸದಲ್ಲಿ ಸಕ್ರಿಯರಾಗಿ. ಸರ್ಕಾರದ ಕಾರ್ಯದಲ್ಲಿ ಹಿನ್ನಡೆಯಾಗಲಿದೆ. ನೂತನ ಸಿದ್ಧಾಂತಗಳಿಗೆ ಜೋತು ಬೀಳುವ ಸಾಹಸಕ್ಕೆ ಹೋಗುವುದು ಉತ್ತಮವಲ್ಲ. ಹತ್ತಿರ ಬಂಧುಗಳನ್ನು ಕಳೆದುಕೊಳ್ಳಲಿದ್ದೀರಿ. ಶಿಕ್ಷಣ ವ್ಯವಸ್ಥೆ ನಿಮ್ಮನ್ನು ಬೇರೆಡೆಗೆ ಸ್ಥಳಾಂತರಿಸಬಹುದು. ಸ್ವಾದಿಷ್ಟವಾದ ಭೋಜನವನ್ನು ಮಾಡಲು ಉತ್ಸಾಹದಿಂದ ಇರುವಿರಿ. ಅನಗತ್ಯ ಖರ್ಚಿಗೆ ತಡೆ ಹಾಕಿಕೊಳ್ಳಿ. ಪ್ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದುವರಿಯಿರಿ. ತಂದೆಯ ಆರೋಗ್ಯವು ವ್ಯತ್ಯಾಸವಾಗಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಕಲಾವಿದರಿಗೆ ಪ್ರಶಂಸೆಯು ಸಿಗಲಿದೆ. ಶತ್ರುಗಳು ಪ್ರಜ್ಞಾಪೂರ್ವಕವಾಗಿ ನೀವು ಆರೋಪ ಮಾಡುವರು.
ಕನ್ಯಾ ರಾಶಿ: :ಸಾಲ ತೀರ್ಮಾನಕ್ಕೆ ಹಳೆಯ ವಸ್ತುಗಳನ್ನು ಮಾರಾಟ ಮಾಡಬೇಕಾಗುವುದು. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಬಯಸುವಿರಿ. ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಬೌದ್ಧಿಕ ಸಾಮರ್ಥ್ಯದ ಬಗ್ಗೆ ನಿಮಗೇ ಆಶ್ಚರ್ಯವಾಗಬಹುದು. ಕ್ರೀಡಾ ಮನೋಭಾವವು ಇರಲಿದೆ. ಆಸ್ತಿಗೆ ಸಂಬಂಧಿಸಿದಂತೆ ಸರಿಯಾದ ವ್ಯವಹಾರವನ್ನು ಮಾಡಿ. ಮೋಸ ಆಗುವ ಸಾಧ್ಯತೆ ಇದೆ. ಭವಿಷ್ಯದ ಬಗ್ಗೆ ನೀವು ಅನೂಹ್ಯ ಕಲ್ಪನೆಗಳನ್ನು ಇಟ್ಟುಕೊಂಡಿದ್ದೀರಿ. ವಿದೇಶೀ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಹೇಗಾದರೂ ಬರಬಹುದು. ವಾಸ್ತವದಲ್ಲಿ ಇದ್ದರೆ ನಿಮಗೆ ಒಳ್ಳೆಯದು. ನಿಮಗೆ ತಮ್ಮವರೆನ್ನುವ ಮಮಕಾರ ಅತಿಯಾಗಬಹುದು. ಭವಿಷ್ಯದಲ್ಲಿ ಅತಿಯಾದ ಭರವಸೆ ಬೇಡ. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಯೋಚನೆ ಬರಬಹುದು. ಕಷ್ಟವಾದರೂ ಅಭ್ಯಾಸ ಮಾಡುವುದು ಒಳ್ಳೆಯದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸುವಿರಿ.
ತುಲಾ ರಾಶಿ: :ಇಂದಿನ ಕಾರ್ಯಗಳಿಗೆ ಪರಿಧಿಯನ್ನು ಇಟ್ಟುಕೊಳ್ಳದೇ ಇದ್ದರೆ ವೇಗವಾಗಿ ಕಾರ್ಯವಾಗದು. ಹಳೆಯ ವಸ್ತುಗಳನ್ನೇ ಸರಿ ಮಾಡಿಕೊಳ್ಳುವಿರಿ. ಹೊರಗೆ ಸುತ್ತಟ ಮಾಡಿ ದೇಹ ಹಾಗೂ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಸಂಗಾತಿಯ ಚಿಂತನೆಗಳನ್ನು ನೀವು ಗೌರವಿಸುವಿರಿ. ಜೀವನವನ್ನು ರೂಪಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬಹುದು. ಸುಳ್ಳು ಸುದ್ದಿಗಳನ್ನು ನಂಬಬೇಕಾಗುವುದು. ನಿಮ್ಮ ನಿರಂತರ ಉತ್ಸಾಹವು ನಿಮಗೆ ಧನಾತ್ಮಕ ಅಂಶಗಳನ್ನು ತರುವುದು. ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಮಯವು ಹಿಡಿದೀತು. ತಾಳ್ಮೆ ಬೇಕಷ್ಟೇ. ನಿಮಗೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ಕೊಡಬೇಕಾದ ಸ್ಥಿತಿ ಬರಲಿದೆ. ನಿಮ್ಮ ಕಾರ್ಯದಲ್ಲಿ ನೀವು ತನ್ಮಯರಾಗುವಿರಿ. ಅದೇ ನಿಮಗೆ ಉತ್ಸಾಹವನ್ನು ಕೊಡುತ್ತದೆ. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ನಿಮ್ಮ ಮಾತು ಇತರರಿಗೆ ಇಷ್ಟವಾಗದು. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ಮೋಹವು ಹೆಚ್ಚಾಗುವುದು.
ವೃಶ್ಚಿಕ ರಾಶಿ: :ಮಹಿಳೆಯರಿಗೆ ಮಾತಿನ ಕಾರಣದಿಂದ ಆರೋಪ ಬರುವುದು. ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಹಣವನ್ನು ಸಂಪಾದಿಸುವ ಛಲವಿದ್ದರೂ ಮಾರ್ಗವು ಶುದ್ಧವಾಗಿರಲಿ. ನೀವು ಮಾಡುವ ಕೆಲಸದ ಮೇಲೆ ಪೂರ್ಣ ವಿಶ್ವಾಸವಿರಲಿ. ಅನಾರೋಗ್ಯವು ನಿಮ್ಮನ್ನು ಹಿಮ್ಮೆಟ್ಟಿಸೀತು. ಇಂದು ನೀವಂದುಕೊಂಡ ದೂರವನ್ನು ಕ್ರಮಿಸಲಾಗದಿದ್ದರೂ ಸ್ವಲ್ಪ ಭಾಗವನ್ನು ತಲುಪಿದ್ದೀರಿ ಎಂಬ ಸಂತೋಷ ನಿಮಗಿರುವುದು. ಪತ್ರವ್ಯವಹಾರದ ದಾಖಲೆಗಳನ್ನು ಸರಿಯಾಗಿ ಒಂದೆಡೆ ಕ್ರೋಢಿಕರಿಸಿ ಒಂದೆಡೆ ಇಡಿ. ಸರ್ಕಾರದ ಕಾರ್ಯಗಳು ವೇಗವನ್ನು ಪಡೆದು ಒಂದು ಹಂತಕ್ಕೆ ಬಂದು ನಿಲ್ಲುವುದು. ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಅವರ ಜೊತೆ ಕಾಲ ಕಳೆಯುವಿರಿ. ಉನ್ನತ ವಿದ್ಯಾಭ್ಯಾಸವು ನಿಮಗೆ ಅನುಕೂಲಕರವಾಗಲಿದೆ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು. ಓಡಾಟದ ಸಮಯದಲ್ಲಿ ನಿಮ್ಮ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಕಳೆದುಹೋದ ವಸ್ತುವಿನ ಮೌಲ್ಯವು ನಿಮಗೆ ಇಂದು ಗೊತ್ತಾಗದೇ ಹೋಗುವುದು.
ಧನು ರಾಶಿ: :ನಿಮ್ಮ ಮನೋ ನಿಯಂತ್ರಣ ತಪ್ಪಿದ್ದು ಅರಿವಿಗೆ ಬಂದೂ ತಪ್ಪು ಮಾಡುವಿರಿ. ಇಂದು ನಿಮ್ಮ ಅತಿಯಾದ ಉತ್ಸಾಹದಿಂದ ಅಸಂಬದ್ಧವನ್ನು ಮಾಡಿಕೊಳ್ಳಬಹುದು. ನಿಮ್ಮ ಕಪಿಮುಷ್ಟಿಯನ್ನು ಬಿಟ್ಟು ಕದಲುವುದು ಬೇಡ. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ಇಂದು ನೀವು ಒತ್ತಡದಲ್ಲಿಯೇ ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ಕಲಹವೂ ಆಗಬಹುದು. ತೊಂದರೆಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ನೂತನ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಮಗೆ ಗೊಂದಲಗಳು ಬರಬಹುದು. ಅನಾರೋಗ್ಯದಿಂದ ನೀವೇ ಚಿಕಿತ್ಸೆ ಮಾಡಿಕೊಳ್ಳುವುದು ಬೇಡ. ಸೂಕ್ತ ವೈದ್ಯರನ್ನು ಸಂಪರ್ಕಿಸಿ. ಸಹೋದರರು ಸಂಪತ್ತಿಗೆ ಪೀಡಿಸಬಹುದು. ಸಂಪತ್ತು ಇದೆ ಎಂದು ದುಂದುವೆಚ್ಚವನ್ನು ಕಡಿಮೆ ಮಾಡಿ. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ನಿಮ್ಮ ಉತ್ಸಾಹವು ಇತರರಿಗೆ ಮಾರ್ಗದರ್ಶನವಾದೀತು. ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಾದೀತು.
ಮಕರ ರಾಶಿ::ಗೃಹ ನಿರ್ಮಾಣಕ್ಕೆ ಸ್ಥಳದ ವೀಕ್ಷಣೆಗೆಂದು ತಿರುಗಾಟ ಮಾಡುವಿರಿ. ಇಂದು ನೀವು ಆಪ್ತರನ್ನು ಅಪಹಾಸ್ಯ ಮಾಡಲು ಹೋಗಿ ನೀವೇ ಹಾಸ್ಯದಲ್ಲಿ ಸಿಕ್ಕಿಬೀಳುವಿರಿ ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಇನ್ನೊಬ್ಬರನ್ನು ಹೋಲಿಸಿಕೊಂಡು ಮನಸ್ಸಿನೊಳಗೇ ನೊಂದುಕೊಳ್ಳುವಿರಿ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಮನಸ್ಸಿಗೆ ಏನೋ ಒಂದು ಹೊಸತು ಬೇಕು ಅನ್ನಿಸಬಹುದು. ವಾಹನ ಖರೀದಿಸುವ ನಿಮ್ಮ ಯೋಚನೆ ಬದಲಾಗಬಹುದು. ನಿಮ್ಮ ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡಬೇಕು ಎಂದು ಅನ್ನಿಸಬಹುದು. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಬಹುದು. ಸಾಮಾಜಿಕ ಜೀವನವು ಬಹಳ ಸುಂದರ ಎನಿಸಬಹುದು. ನಿಮ್ಮ ವಿವೇಕಕ್ಕೆ ಸರಿಯಾದ ತಿಳಿವಳಿಕೆ ಇರದು. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು. ಆರ್ಥಿಕವಾಗಿ ನೀವು ಬಲವಾಗಿದ್ದರೂ ಇನ್ನಷ್ಟು ಸಂಪಾದಿಸುವ ತವಕ ಇರಲಿದೆ. ಖರೀದಿಸಿದ ವಸ್ತುವಿನ ಮೇಲೆ ಅತಿಯಾದ ಮೋಹ ಬೇಡ.
ಕುಂಭ ರಾಶಿ: :ಸ್ನೇಹಿತೆಯರು ಬೇರೆ ಉದ್ಯೋಗದ ಕಾರಣಕ್ಕೆ ದೂರ ಹೋಗುವರು. ಇದರಿಂದ ಬೇಸರಗೊಳ್ಳುವಿರಿ. ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಪ್ರತಿಕೂಲ ಸ್ಥಿತಿಯನ್ನು ದೈವಾನುಗ್ರಹದಿಂದ ಪಾರಾಗಲು ಸಾಧ್ಯ. ನೂತನ ಗೃಹನಿರ್ಮಾಣವನ್ನು ಮಾಡುವಿರಿ. ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಹುಡುಕುವಿರಿ. ನಿಮ್ಮದೇ ಆಲೋಚನೆಯ ಲಹರಿಯಲ್ಲಿ ಆನಂದದಿಂದ ಇರುವಿರಿ. ದ್ವೇಷಿಸುವ ನಿಮ್ಮ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ. ಔಪಚಾರಿಕ ಭೇಟಿಯು ವಿವಾಹಕ್ಕೆ ಬದಲಾಗುವುದು. ಉಚಿತವಾದುದನ್ನು ಪಡೆಯಲು ಪರಿಶ್ರಮಪಡುವಿರಿ. ಕುಂಟುತ್ತಿರುವ ಬದುಕಿಗೆ ವೇಗವು ಬೇಕೆನಿಸಬಹುದು. ಹಳೆಯ ಕೆಲಸಗಳಿಂದ ನಿಮಗೆ ಬೇಸರ ಬರಬಹುದು. ಕುಟುಂಬದ ಜೊತೆ ಸಮಾಧಾನದ ಮನಸ್ಸಿಂದ ಮಾತನಾಡಿ. ವಿದ್ಯಾಭ್ಯಾಸದಲ್ಲಿ ಚುರುಕುತನ ಅಗತ್ಯ. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ಒಂಟಿತನವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ.
ಮೀನ ರಾಶಿ: :ದೇಹ ಸೌಂದರ್ಯ ವರ್ಧನೆಗೆ ಬೇಕಾದ ಕ್ರಮವನ್ನು ರೂಢಿಸಿಕೊಳ್ಳುವ ಆಸಕ್ತಿ ತೋರುವಿರಿ. ಇಂದು ಯಾರದೋ ಮಾತಿನ ಕಾರಣಕ್ಕೆ ಮನಸ್ಸಿನೊಳಗೇ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ನಿಮ್ಮನ್ನು ಅಳೆಯಲು ಆರಂಭಿಸುವರು. ಸುತ್ತಲೂ ನಿಮ್ಮ ಕಣ್ಣಿರಲಿ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಬೇಕೆನಿಸುವುದು. ಹಣಕಾಸಿನ ಸಮಸ್ಯೆಯನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಃಸ್ಥಿತಿ ಉಂಟಾಗಬಹುದು. ಕಂಡಿದ್ದನ್ನು ಕಂಡಂತೆ ಹೇಳಲು ಹೋಗುವುದಿಲ್ಲ. ನಿಮ್ಮದನ್ನೂ ಸ್ವಲ್ಪ ಸೇರಿಸುವಿರಿ. ವಿಷಯದ ಮೇಲೆ ಆಸಕ್ತಿ ಹೆಚ್ಚಾದೀತು. ನಿಮ್ಮ ಬಗ್ಗೆ ಯಾರೇ ನಕಾರಾತ್ಮಕ ಹೇಳಿಕೆ ಕೊಟ್ಟರೂ ಸಹಿಸುವ ತಾಳ್ಮೆ ಇರದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ.