
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 07 :ಚಿತ್ರದುರ್ಗ ನಗರದ ಬೃಹನಠದ ಅನುಭವ ಮಂಟಪದಲ್ಲಿ ಜ. 18 ಮತ್ತು 19 ರಂದು ನಡೆಯಲಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಶ್ರೀ ಸಿದ್ದರಾಮ ಬೆಲ್ದಾಳ ಶರಣರನ್ನು ಇಂದು ಬೆಂಗಳೂರಿನ
ಕೇಂದ್ರ ಕಚೇರಿಯಲ್ಲಿ ಸ್ವಾಗತಿಸಿ ಸಮ್ಮೇಳನಕ್ಕೆ ಆಮಂತ್ರಣವನ್ನು ಅ.ಭಾ.ಶ.ಸಾ.ಪರಿಷತ್ತಿನ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್
ಅಧಿಕೃತ ಆಮಂತ್ರಣ ಪತ್ರ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಂ ವಿ ಶಿವಮೂರ್ತಿ, ಯೋಗಗುರು ಚನ್ನಬಸವಣ್ಣ,
ಎಸ್ ಷಣ್ಮುಖಪ್ಪ, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.