ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ ಹಾಗೂ ನನ್ನ ವ್ಯಯುತ್ತಿಕವಾಗಿಯೂ ಸಹಾ ಸಹಾಯ ಮತ್ತು ಸಹಕಾರ: ಸಚಿವ ಡಿ. ಸುಧಾಕರ್ ಭರವಸೆ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ, ಜುಲೈ 13:
ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ ಹಾಗೂ ನನ್ನ ವ್ಯಯುತ್ತಿಕವಾಗಿಯೂ ಸಹಾ ಸಹಾಯ ಮತ್ತು ಸಹಕಾರವನ್ನು ಮಾಡುವುದಾಗಿ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಭರವಸೆಯನ್ನು ನೀಡಿದರು.

ಚಿತ್ರದುರ್ಗ ತಾಲ್ಲೂಕು ಅಖಿಲ ಭಾರತ ಗಾಣಿಗರ ಸಂಘ (ರಿ) ವತಿಯಿಂದ ನಗರದ ಜಿ.ಜಿ. ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, “ಗಾಣಿಗ ಸಮಾಜ ಪುರಾತನವಾದ ಸಮಾಜವಾಗಿದೆ. ನನಗೆ ರಾಜಕಾರಣದಲ್ಲಿ ಚಳ್ಳಕರೆ ಹಾಗೂ ಹಿರಿಯೂರಿನಲ್ಲಿ ಸಹಾಯವನ್ನು ಮಾಡಿದೆ, ನನ್ನ ಕೈಹಿಡಿದಿದೆ, ನನ್ನ ಗೆಲುವಿಗೆ ಸಹಕಾರಿಯಾಗಿದೆ. ನಿಮ್ಮ ಸಮಾಜದ ಋಣ ನನ್ನ ಮೇಲಿದೆ. ನಿಮ್ಮ ಸಮುದಾಯದ ಪ್ರಗತಿಗೆ ಸರ್ಕಾರ ಹಾಗೂ ನನ್ನ ವ್ಯಯುತ್ತಿಕವಾಗಿ ಸಹಾಯ ಮಾಡುವೆನು” ಎಂದು ತಿಳಿಸಿದರು.

ಗಾಣಿಗ ಸಮಾಜಕ್ಕೆ ನಿವೇಶನವನ್ನು ನೀಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಚಿತ್ರದುರ್ಗ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜೊತೆಗೆ ಮಾತನಾಡಿ, ಕಡಿಮೆ ದರದಲ್ಲಿ ನಿವೇಶನ ನೀಡುವ ಕೆಲಸ ಮಾಡುತ್ತೇನೆ. ಸರ್ಕಾರವು ಇಂತಹ ಸಮಾಜಗಳಿಗೆ ಶೇ.10 ರ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕೆಂದು ಸೂಚನೆ ನೀಡಿದೆ. ಅದರಂತೆ ನಿಮ್ಮ ಸಮಾಜಕ್ಕೆ ನಿವೇಶನ ಕೊಡಿಸುವ ಹೊಣೆ ನನ್ನದು ಎಂದರು.

“ಸಮಾಜದಲ್ಲಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹ ಮಾಡುವುದು ಸಮಾಜದ ಕೆಲಸವಾಗಿದೆ. ನಮ್ಮ ಸಮಾಜದ ಮಕ್ಕಳನ್ನು ನಾವೇ ಗುರುತಿಸಿ ಪ್ರೋತ್ಸಾಹ ಮಾಡದಿದ್ದರೆ, ಬೇರೆಯವರು ಹೇಗೆ ಗುರುತಿಸುತ್ತಾರೆ? ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವುದು ಎಲ್ಲಾ ಸಮಾಜಗಳಲ್ಲಿಯೂ ಸಹ ನಡೆಯಬೇಕಿದೆ. ಗಾಣಿಗ ಸಮಾಜ ಬಸವಣ್ಣರ ಕಾಲದಿಂದಲೂ ಇದೆ. ಚಿತ್ರದುರ್ಗದಲ್ಲಿ ನಿಮ್ಮ ಸಮಾಜದವರೇ ಶಾಸಕರಾಗಿರುವುದು ಹೆಮ್ಮೆಯ ವಿಷಯವಾಗಿದೆ” ಎಂದು ಸಚಿವರು ಹೇಳಿದರು.


ಸಂಸದ ಗೋವಿಂದ ಕಾರಜೋಳ ಅವರ ಮಾತುಗಳು:

“ಗಾಣಿಗ ಸಮಾಜ ಭೂಮಿಯ ಮೇಲೆ ನಾಗರಿಕತೆ ಹುಟ್ಟಿದಾಗಿನಿಂದಲೂ ಇದೆ. ಕರ್ನಾಟಕ ರಾಜ್ಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಇದೆ. ಇವರು ಬಹು ಸಂಖ್ಯಾತರಾಗಿದ್ದಾರೆ. ಬೇರೆಯವರಿಗೆ ಉದ್ಯೋಗವನ್ನು ನೀಡುವುದರ ಮೂಲಕ ಶ್ರೀಮಂತರಾಗಿದ್ದಾರೆ. ಆದರೆ ಈಗ ಎಣ್ಣೆಯನ್ನು ತೆಗೆಯಲು ಯಂತ್ರಗಳು ಬಂದಾಗಿನಿಂದ ನಿಮ್ಮ ಕುಲ ಕಸುಬಿಗೆ ಹೊಡೆತ ಬಿದ್ದಂತೆ ಆಗಿದೆ.”

“ಸಮಾಜದಲ್ಲಿ ಗಾಣಿಗರು ಗೌರವಯುತವಾದ ಬದುಕನ್ನು ನಡೆಸುತ್ತಿದ್ದಾರೆ. ತಮ್ಮ ಜೊತೆಗೆ ಬೇರೆ ಸಮಾಜದವರನ್ನು ಸಹ ಕರೆದುಕೊಂಡು ಹೋಗುವ ಗುಣವನ್ನು ಹೊಂದಿದ್ದಾರೆ. ಇದ್ದಲ್ಲದೆ ಬೇರೆ ಸಮಾಜದವರ ಕಷ್ಟಕ್ಕೆ ಮರುಗುವ ಗುಣವನ್ನು ಹೊಂದಿದ್ದಾರೆ” ಎಂದರು.

“ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹ ಮಾಡುವುದು ಉತ್ತಮವಾದ ಕೆಲಸವಾಗಿದೆ. ಇದನ್ನು ಪ್ರತಿಯೊಂದು ಸಮಾಜವೂ ಸಹ ಮಾಡಬೇಕಿದೆ. ಇದರಿಂದ ಮಕ್ಕಳಿಗೆ ಮತ್ತಷ್ಟು ಸಾಧನೆ ಮಾಡಬೇಕೆನ್ನುವ ಉತ್ಸಾಹ ಬರುತ್ತದೆ. ಅಲ್ಲದೆ ಇದನ್ನು ನೋಡಿದ ಬೇರೆ ಮಕ್ಕಳಿಗೂ ಸಹಾ ನಾವು ಇವರಂತೆ ಆಗಬೇಕೆಂಬ ಛಲ ಮೂಡುತ್ತದೆ. ಗಾಣಿಗ ಸಮುದಾಯ ನಮ್ಮ ದೇಶಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದೆ. ನಮ್ಮನ್ನಾಳುವ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ಸಿದ್ಧೇಶ್ವರ ಸ್ವಾಮೀಜಿಯವರೂ ಸಹಾ ಗಾಣಿಗರೇ. ದೇಶದಲ್ಲಿ ಈ ಸಮುದಾಯ ಒಂದೇ ಕುಲಕಸುಬನ್ನು ಹೊಂದಿದ ಸಮುದಾಯವಾಗಿದೆ. ನನ್ನ ಚುನಾವಣೆಯಲ್ಲಿ ಗಾಣಿಗ ಸಮುದಾಯ ಉತ್ತಮವಾದ ಸಹಕಾರ ನೀಡಿ ನನ್ನ ಗೆಲುವಿಗೆ ನೆರವಾಗಿದೆ. ಅವರ ಋಣ ನನ್ನ ಮೇಲಿದೆ. ಇದನ್ನು ತೀರಿಸಲು ಈ ಸಮುದಾಯಕ್ಕೆ ಸಹಾಯ ಮಾಡುವ ಭರವಸೆಯನ್ನು ಸಂಸದರು ನೀಡಿದರು.


ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅಭಿಪ್ರಾಯ:

“ಗಾಣಿಗ ಸಮಾಜ ಕಾಯಕ ಸಮಾಜವಾಗಿದೆ. ಗಾಣಿಗರು ಇಲ್ಲದಿದ್ದರೆ ನಮ್ಮ ಮನೆ, ದೇವಾಲಯ, ಅಡುಗೆ ಮನೆಯಲ್ಲಿ ಎಣ್ಣೆ ಇಲ್ಲವಾಗಿರುತ್ತಿತ್ತು. ಈ ಸಮುದಾಯ ಕರ್ನಾಟಕ ಮಾತ್ರವಲ್ಲದೆ ಭಾರತ ದೇಶದಲ್ಲಿಯೂ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈಗಲೂ ಸಹ ಹಲವಾರು ಜನತೆ ಗಾಣವನ್ನು ಇಟ್ಟುಕೊಂಡು ತಮ್ಮ ಮೂಲ ಕಸುಬನ್ನು ಮುಂದುವರೆಸಿದ್ದಾರೆ. ಆದರೆ ಯಂತ್ರಗಳು ಬಂದ ಮೇಲೆ ನಿಮ್ಮ ವೃತ್ತಿಗೆ ಹೊಡೆತ ಬಿದ್ದಂತಾಗಿದೆ.”

“ನಿಮ್ಮ ಸಮಾಜ ಸಂಘಟನೆಯಾಗಬೇಕು. ನಿಮ್ಮಲ್ಲಿ ಇರುವ ಗೊಂದಲಗಳಿಂದ ಹೊರಬರಬೇಕು. ಒಂದು ಕಾಲದಲ್ಲಿ ಚಳ್ಳಕೆರೆಯನ್ನು ಚೋಟ ಮುಂಬೈ ಎಂದು ಕರೆಯಲಾಗುತ್ತಿತ್ತು. ಅಲ್ಲಿ ಅಷ್ಟೊಂದು ಎಣ್ಣೆ ಮಿಲ್‌ಗಳು ಇದ್ದವು. ನನ್ನ ರಾಜಕೀಯ ಹಾಗೂ ವ್ಯವಹಾರಿಕ ಬೆಳವಣಿಗೆಗೆ ಗಾಣಿಗ ಸಮಾಜ ಕಾರಣವಾಗಿದೆ” ಎಂದರು.


ಧಾರ್ಮಿಕ ಮಠಗಳ ಅಭಿಪ್ರಾಯ:

ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ಮತ್ತು ವಿಜಯಪುರದ ವನಶ್ರೀ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಜಯಬಸವಕುಮಾರ ಸ್ವಾಮೀಜಿ ಮಾತನಾಡಿ:

“ಗಾಣಿಗ ಸಮಾಜ ಸಂಘಟಿತರಾಗಬೇಕಿದೆ. ನಮ್ಮ ಸಮಾಜದಲ್ಲಿಯೂ ಸಹಾ ಪ್ರತಿಭಾವಂತರು ಇದ್ದಾರೆ. 2ಎ ಮೀಸಲಾತಿ ಪಡೆದು ಶಿಕ್ಷಣ ಪಡೆಯಬೇಕು. ಈಗ 15 ವರ್ಷಗಳಿಂದ ಮೀಸಲಾತಿಯ ಪ್ರಭಾವ ಹೆಚ್ಚಾಗಿದೆ. ಈಗ ಮೀಸಲಾತಿ ಅನಿವಾರ್ಯ ಎನ್ನುವ ಸ್ಥಿತಿ ಬಂದಿದೆ. ಜಾತಿ ಗಣತಿಯಲ್ಲಿ ‘ಗಾಣಿಗ’ ಎಂದು ಬರೆಸುವುದರ ಮೂಲಕ ನಮ್ಮ ಸಮುದಾಯದ ಸಂಖ್ಯೆಯನ್ನು ಹೆಚ್ಚಿಸಬೇಕು.”

“ನಮ್ಮ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ನಮ್ಮ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯ ಮಾಡಲಾಗುವುದು. ಅಲ್ಲದೆ ಗಾಣಿಗ ಅಭಿವೃದ್ದಿ ನಿಗಮವನ್ನು ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವೆವು” ಎಂದು ಹೇಳಿದರು.


ಇತರ ಗಣ್ಯರ ಉಪಸ್ಥಿತಿ:

ಎ.ಆರ್. ತಿಪ್ಪೇಸ್ವಾಮಿ – ಪ್ರಾಸ್ತಾವಿಕ ನುಡಿ

ಡಿ.ಎಸ್. ಸುರೇಶ್ ಬಾಬು (ಸೈಟ್ ಬಾಬಣ್ಣ) – ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ

ಶ್ರೀಮತಿ ಕೆ.ಸಿ. ವೀಣಾ – ಮಹಿಳಾ ವಿಭಾಗದ ಗೌರವಾಧ್ಯಕ್ಷೆ

ಶ್ರೀಮತಿ ಪುಷ್ಪ ಸುರೇಶ್ ಬಾಬು – ಮಹಿಳಾ ವಿಭಾಗದ ಅಧ್ಯಕ್ಷೆ

ಡಿ.ಎಸ್. ರುದ್ರಮುನಿ, ಮಲ್ಲಿಕಾರ್ಜನಪ್ಪ (ಭರಮಸಾಗರ ಹೊಸದುರ್ಗ), ವಿನಯಕುಮಾರ್ (ಮೊಳಕಾಲ್ಮೂರು), ಸಿದ್ದಾಮಣ್ಣ (ಹಿರಿಯೂರು), ಸುಮಿತ್ರಮ್ಮ (ಚಳ್ಳಕೆರೆ), ಕುಮಾರಸ್ವಾಮಿ (ಭಾಜಪಾ ಜಿಲ್ಲಾಧ್ಯಕ್ಷ), ರತ್ನಮ್ಮ (ದಾವಣಗೆರೆ), ತಿಪ್ಪೇಸ್ವಾಮಿ, ಶಿವಾನಂದ, ಮುರುಘೇಶ, ಮಂಜುನಾಥ್, ವರದಶಂಕರ್, ಆಶೋಕ್ ವಿರೂಪಾಕ್ಷಿ, ನಂದೀಶ್ ಮತ್ತಿತರರು ಭಾಗವಹಿಸಿದ್ದರು.


ಶೈಕ್ಷಣಿಕ ಉಪನ್ಯಾಸ:

ಡಾ. ಮೇಘನಾ ಜಿ – ಗಾಣಿಗ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಕುರಿತು ಉಪನ್ಯಾಸ ನೀಡಿದರು.

ಉಮೇಶ್ ಪತ್ತದ್ – ಪ್ರಾರ್ಥನೆ

ವಿರೇಂದ್ರ ಕುಮಾರ್ – ಸ್ವಾಗತ

ಜ್ಞಾನಮೂರ್ತಿ – ಕಾರ್ಯಕ್ರಮ ನಿರೂಪಣೆ

Leave a Reply

Your email address will not be published. Required fields are marked *