ಆ.24ಕ್ಕೆ ವಿಶ್ವ ಹಿಂದೂ ಪರಿಷತ್ ಸಭಾಂಗಣದಲ್ಲಿ ಮಾಸಿಕ ಗಮಕ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಆ, 21: ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ನಡೆಸುತ್ತಿರುವ ’ಮಾಸಿಕ ಗಮಕ ವಾಚನ ವ್ಯಾಖ್ಯಾನ ಸಂಭ್ರಮ ’ದ 14 ನೇ ಕಾರ್ಯಕ್ರಮವು ಆ. 24 ರ ಶನಿವಾರ ಸಂಜೆ 6 ಗಂಟೆಗೆ ನಗರದ ವಿ.ಪಿ.ಬಡಾವಣೆಯ 3ನೇ ಕ್ರಾಸ್‌ನಲ್ಲಿರುವ ’ವಿಶ್ವ ಹಿಂದೂ ಪರಿಷತ್ ಸಭಾಂಗಣ’(ಅಭಿರಾಮ್ ಕೆಫೆ ಹತ್ತಿರ)ದಲ್ಲಿ ನಡೆಯಲಿದೆ ಸಂಘದ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಗಮಕ ವಾಚನವನ್ನು ಶಿಕ್ಷಕಿ ವಿದುಷಿ ಶ್ರೀಮತಿ ಸುಮಾ, ಟಿ.ಜೆ. ಮಾಡಲಿದ್ದು. ವ್ಯಾಖ್ಯಾನವನ್ನು ವಿಜ್ಞಾನಿಗಳಾದ ಗಮಕ ವಿದ್ವಾನ್ ಜಯಸಿಂಹ ನಡೆಸಿಕೊಡಲಿದ್ದಾರೆ. ಕುಮಾರವ್ಯಾಸ ಭಾರತದ, ಉದ್ಯೋಗ ಪರ್ವದಿಂದ, ಶ್ರೀ ವಿಶ್ವರೂಪ ದರ್ಶನ ಮುಖ್ಯ ಕಥಾಭಾಗದ ಆಯ್ದ ಭಾಗದ್ದಾಗಿದೆ.

ಅಂದಿನ ಸಮಾರಂಭದಲ್ಲಿ ವಿಮರ್ಶಕರಾದ ಡಾ.ತಾರಿಣಿ ಶುಭದಾಯಿನಿ ಭಾಗವಹಿಸಲಿದ್ದಾರೆ. ಕಲಾಭಿಮಾನಿ ಗಳು ಕಲಾಪೋಷಕರು ಈ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಕಲೆಯನ್ನೂ, ಕಲಾವಿದರನ್ನೂ ಪ್ರೋತ್ಸಾಹಿಸಿ ಎಂದು ಗಮಕ ಕಲಾಭಿಮಾನಿಗಳ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ಆಡಳಿತ ಮಂಡಳಿಯ ಸದಸ್ಯರು ಕೋರಿದ್ದಾರೆ.

Leave a Reply

Your email address will not be published. Required fields are marked *