ಧೋತಿ-ಕುರ್ತಾ ಧರಿಸಿ ಕ್ರಿಕೆಟ್ ಆಡಿದ ಪ್ಲೇಯರ್ಸ್… ಸಂಸ್ಕೃತದಲ್ಲಿ ಕಾಮೆಂಟರಿ…! ಗೆದ್ದರೆ ‘ಅಯೋಧ್ಯಾ ಪ್ರವಾಸ’

ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ (ಜನವರಿ 12) ಅಂಗವಾಗಿ ಆಯೋಜಿಸಲಾದ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಈ ವರ್ಷ ಅಯೋಧ್ಯೆಗೆ ಹೋಗುವ ಅವಕಾಶವಿದೆ ಎಂದು ವಾರ್ಷಿಕ ಪಂದ್ಯಾವಳಿಯ ಸಂಘಟಕರು ತಿಳಿಸಿದ್ದಾರೆ.

  • ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌’ನಲ್ಲಿ ಸಂಸ್ಕೃತ ವಾರ್ಷಿಕ ಪಂದ್ಯಾವಳಿ
  • ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮ
  • ಮಹರ್ಷಿ ಮೈತ್ರಿ ಪಂದ್ಯ ಸಮಿತಿಯ ಸದಸ್ಯ ಅಂಕುರ್ ಪಾಂಡೆ

Maharishi Maitri Match Tournament : ಪ್ರತಿ ವರ್ಷದಂತೆ ಈ ವರ್ಷವೂ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌’ನಲ್ಲಿ ಸಂಸ್ಕೃತ ವಾರ್ಷಿಕ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮಧ್ಯಪ್ರದೇಶದ ರಾಜಧಾನಿ ಅಂಕುರ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಈ ಪಂದ್ಯಾವಳಿಯಲ್ಲಿ ಆಟಗಾರರು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಿದ್ದರೆ, ಕಾಮೆಂಟರಿ ಕೂಡ ಸಂಸ್ಕೃತದಲ್ಲೇ ಕೇಳಿಬರುತ್ತಿತ್ತು.

ವಿಜೇತರಿಗೆ ‘ಅಯೋಧ್ಯಾ ಪ್ರವಾಸ’ ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ (ಜನವರಿ 12) ಅಂಗವಾಗಿ ಆಯೋಜಿಸಲಾದ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಈ ವರ್ಷ ಅಯೋಧ್ಯೆಗೆ ಹೋಗುವ ಅವಕಾಶವಿದೆ ಎಂದು ವಾರ್ಷಿಕ ಪಂದ್ಯಾವಳಿಯ ಸಂಘಟಕರು ತಿಳಿಸಿದ್ದಾರೆ.

ವಿಜೇತರಿಗೆ ಇಷ್ಟು ಮೊತ್ತದ ಬಹುಮಾನ: ಮಹರ್ಷಿ ಮೈತ್ರಿ ಪಂದ್ಯ ಸಮಿತಿಯ ಸದಸ್ಯ ಅಂಕುರ್ ಪಾಂಡೆ ಪ್ರಕಾರ, ವಿಜೇತರನ್ನು ಜನವರಿ 22 ರ ನಂತರ ಅಯೋಧ್ಯೆಗೆ ಕಳುಹಿಸಲಾಗುವುದು. ಜೊತೆಗೆ 21,000 ರೂಪಾಯಿ ಬಹುಮಾನವನ್ನು ಪಡೆಯುತ್ತಾರೆ. ರನ್ನರ್ ಅಪ್’ಗೆ 11,000 ರೂಪಾಯಿಗಳನ್ನು ನೀಡಲಾಗುತ್ತದೆ. ಭೋಪಾಲ್‌’ನ ನಾಲ್ಕು ತಂಡಗಳು ಸೇರಿದಂತೆ 12 ತಂಡಗಳು ಕ್ರಿಕೆಟ್ ಟೂರ್ನಿಯ ನಾಲ್ಕನೇ ಸೀಸನ್‌’ನಲ್ಲಿ ಭಾಗವಹಿಸುತ್ತಿವೆ ಎಂದು ಪಾಂಡೆ ಹೇಳಿದರು.

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *