ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 20ಗೋವಿನ ಕೆಚ್ಚಲು ಕೊಯ್ದ ನೈಜ ದುರುಳರ ಸೆರೆಗೆ ಒತ್ತಾಯ ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.
![](https://samagrasuddi.co.in/wp-content/uploads/2025/01/IMG_20250120_115349-1024x576.jpg)
ಬೆಂಗಳೂರಿನ ಚಾಮರಾಜನಗರದಲ್ಲಿ ಗೋವುಗಳ ಕೆಚ್ಚಲು ಕೊಯ್ದಿರುವ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು
ಆಗ್ರಹಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿವತಿಯಿಂದ ಸೋಮವಾರ ಆನೆಬಾಗಿಲಿ ಬಳಿಯಿಂದ ಜಿಲ್ಲಾಧಿಕಾರಿಗಳ
ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಪ್ರತಿಭಟನಾಕಾರರು ಈ ಸಮಯದಲ್ಲಿ ಹಸುಗಳಿಗೆ ಪೂಜೆ ಸಲ್ಲಿಸಿ, ಮೇವು ತಿನ್ನಿಸುವ
ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
![](https://samagrasuddi.co.in/wp-content/uploads/2025/01/IMG_20250120_121528-1-1024x576.jpg)
ಈ ಸಂದರ್ಭದಲ್ಲಿ ಮಾತನಾಡಿ ಸುರೇಶ್ ಗೋವಿನ ಕೆಚ್ಚಲನ್ನು ಕೊಯ್ದಿರುವ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಕಾಂಗ್ರೆಸ್
ಸರ್ಕಾರ ಬಿಂಬಿಸಲು ಹೊರಟಿದೆ. ಮಾನಸಿಕ ಆಸ್ವಸ್ತನಾದವನು ಪಶು ಆಸ್ಪತ್ರೆಯ ಆರಂಭದ ದಿನ ಆಗಮಿಸಿದ ಹಸುಗಳನ್ನೇ
ಗುರಿಯಾಗಿಸಿಕೊಂಡು ಕೆಚ್ಚಲುಗೆ ಕೊಯ್ತಾನೆ? ಇದರ ಹಿಂದೆ ದುಷ್ಟ ಶಕ್ತಿಗಳಿವೆ. ಈ ಸರ್ಕಾರ ಮತಾಂಧನನ್ನು ರಕ್ಷಿಸಲು ಹೊರಟಿದೆ
ಎಂದು ಆರೋಪಿಸಿದರು.
![](https://samagrasuddi.co.in/wp-content/uploads/2025/01/IMG_20250120_115104-1024x576.jpg)
ಭಾರತದಲ್ಲಿ ಗೋವನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಸಮುದ್ರ ಮಂಥನದಲ್ಲಿ ಗೋಮಾತೆ. ಬಂದಿತು ಹಾಗಾಗಿ
ನಾವು ಅದರಲ್ಲಿ ಮುಕ್ಕೋಟಿ ದೇವತೆಗಳನ್ನು ನೋಡುತ್ತೇವೆ. ಇಡೀ ವಿಶ್ವಕ್ಕೆ ಒಬ್ಬಳು ತಾಯಿಯಿದೆ ಅದು ಗೋಮಾತೆ. ಇಂಥ
ತಾಯಿಯ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವ ವ್ಯಕ್ತಿಗೆ ಶಿಕ್ಷೆಯಾಗಲೇ ಬೇಕು. ಗೋಮಾತೆಯನ್ನು ತಾಯಿಯಂತೆ ಪೂಜಿಸುವ
ನಮ್ಮ ದೇಶದಲ್ಲಿ ಗೋಮಾತೆಯ ಕೆಚ್ಚಲು ಕೊಯ್ದಿರುವ ಮತಾಂಧ ಕೃತ್ಯ ಅಪರಾಧಿಯು ಮಾನಸಿಕ ಖಿನ್ನತೆಯಿಂದ
ಬಳಲುತ್ತಿರುವುದಾಗಿ ಮತ್ತು ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಬಿಂಬಿಸುತ್ತಿರುವುದು ಜನತೆಯ ದಿಕ್ಕುತಪ್ಪಿಸುವ ಕೆಲಸ.
ಗೋವಿನ ಕೆಚ್ಚಲು ಕತ್ತರಿಸಿದ ಅಸಲಿ ದುರುಳರ ಬಂಧನ ಮಾಡಬೇಕು. ಗೋವಿನ ಮಾಲೀಕನಿಗೆ ಸರ್ಕಾರದ ವತಿಯಿಂದ ಸೂಕ್ತ
ಪರಿಹಾರ ನೀಡಬೇಕು. ಗೋ ರಕ್ಷಣೆ ದೃಷ್ಟಿಯಿಂದ ರೈತರಿಗೆ ಬಂದೂಕು ಪರವಾನಗಿ ನೀಡಬೇಕು. ಗೋವನ್ನು ರಾಷ್ಟ್ರೀಯ ಸಂಪತ್ತು
ಎಂದು ಘೋಷಿಸಬೇಕು. ಗೋಶಾಲೆಗೆ ಅನುದಾನ ನಿಲ್ಲಿಸಿರುವುದನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ
ಗೋಹತ್ಯೆ ವಿರುದ್ಧ ಈ ಹಿಂದೆ ಇದ್ದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಗೋಸಂರಕ್ಷಣಾ ಸಂವರ್ಧನಾ ಸಮಿತಿ
ಈ ಮೂಲಕ ಆಗ್ರಹಿಸಿದೆ.
ಸಿದ್ದರಾಮಯ್ಯ ಸರ್ಕಾರ ಈಗ ಗೋಹತ್ಯೆ ಮಾಡುತ್ತಿದೆ. ಕೂಡಲೇ ಗೋಹತ್ಯೆ ನಿಷೇಧಕ ಕಾಯ್ದೆ ಜಾರಿಗೆ ತರಬೇಕು. ಇಡೀ ಹಿಂದೂ
ಕುಲವನ್ನು ಬೆದರಿಸಲು ಈ ಕೃತ್ಯ ನಡೆಸಲಾಗಿದೆ. ನಾವು ಇದಕ್ಕೆಲ್ಲ ಹೆದರುವುದಿಲ್ಲ ವರ್ಷಗಳ ಆಡಳಿತದ ಅವಧಿಯಲ್ಲಿಯೂ ಸರಣಿ
ಸರ್ಕಾರ ನಿಜವಾದ ಆರೋಪಿಗಳನ್ನು ಬಂಧಿಸಬೇಕು. ಷಡ್ಯಂತ್ರ ಮಾಡಿದವರನ್ನು ಬಂಧಿಸಬೇಕು. ಪೊಲೀಸರು ಅಕ್ರಮ
ಕಸಾಯಿಖಾನೆ ಮುಚ್ಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಸಾಯಿಖಾನೆ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು
ಎಚ್ಚರಿಕೆ ನೀಡಿದೆ.
ಗೋ ಸಂರಕ್ಷಣಾ ಸಂವರ್ಧನಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ
ಜಿಲ್ಲಾಧಿಕಾರಿಗಳ ಮೂಲಕ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್,
ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ,
ರುದ್ರೇಶ್, ಬಸಮ್ಮ, ಜಿತೇಂದ್ರ ಹುಲಿಕುಂಟೆ, ಗುರುರಾಜ್, ಚಂದ್ರಶೇಖರ್, ಶಿವರಾಜ್, ವೇಣು,ರಂಗನಾಥ್, ಲೋಕೇಶ್, ವೀಣಾ,
ಸೇರಿದಂತೆ ಇತರರು ಭಾಗವಹಿಸಿದ್ದರು.