ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಮಹಾನಾಯಕ ದಲಿತ ಸೇನೆ (ರಿ) ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಹರಿಶ್ಚಂದ್ರಫಾಟ್ ಹತ್ತಿರ ಇರುವ ಮಾರುತಜ್ಜನ ಕಾಲೋನಿಯಲ್ಲಿ ತಿಳ್ಳೆಕ್ಯಾತರ ಸುಮಾರು 50 ಕುಟುಂಬಗಳಿವೆ. ಸುಮಾರು ನೂರಾರು ವರ್ಷಗಳಿಂದ ಇಲ್ಲಿ ಜೀವನ ನಡೆಸಲಾ ಗುತ್ತಿದೆ. ಇಲ್ಲಿನ ಯಾರೊಬ್ಬರಿಗೂ ಸ್ವಂತ ಹೆಸರಿನಲ್ಲಿ ನಿವೇಶನಗಳಿರುವುದಿಲ್ಲ. ಇಲ್ಲಿ ತಿಳ್ಳೇಕ್ಯಾತರ ಹಿರಿಯ ಮುಖ್ಯವಾಗಿ ಕಾಲವಶವಾಗಿರುವ ಮಾರುತಜ್ಜನ ಹೆಸರಿನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಭೂ-ದಾಖದಲ್ಲಿ 2 ಎಕರ ಮಾರುತಜ್ಜ ಬಡಾವಣೆ ಎಂದು ಈಗಲೂ ತೋರಿಸುತ್ತದೆ.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77ವರ್ಷಗಳಾದರೂ ಸ್ಥಳೀಯ ತಾಲ್ಲೂಕು ಆಡಳಿತದ ನಗರಸಭೆಯವರಾಗಲೀ, ತಾಲ್ಲೂಕಿನ ದಂಡಾಧಿಕಾರಿಗಳಾಗಲಿ ಇಲ್ಲಿಯವರೆಗೆ ಈ ಅಲೆಮಾರಿಗಳಿಗೆ ನಿವೇಶನಗಳನ್ನು ಹಂಚಿಕೆಮಾಡಿ ಹಕ್ಕುಪತ್ರ ನೀಡುವ ಪ್ರಯತ್ನಕ್ಕೆ ಕೈಹಾಕಿಲ್ಲ. ಇಲ್ಲಿ ಸ್ವಂತ ಆರ್ಥಿಕ ದುಡಿಮೆಯಿಂದ ಸುಭದ್ರವಾದ ಮನೆ ನಿರ್ಮಾಣ ಮಾಡಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ, ಇದರಿಂದ ಕಾಲೋನಿಗೆ ಅಗತ್ಯವಾಗಿ ಬೇಕಾದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯ, ಬಾಲವಾಡಿ, ಪ್ರಾಥಮಿಕ ಶಾಲೆ, ಬ್ಯಾಂಕ್ ಸಾಲ, ವೇತನ, ಕಲಾವಿದರ ಪಿಂಚಣೆ ಹೀಗೆ ಸಲ್ಲಬೇಕಾದ ಸವಲತ್ತು ಮತ್ತು ಇನ್ನಿತರೆ ಸೌಕರ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ.

ಮಾರುತಜ್ಜನ ಕಾಲೋನಿಯಲ್ಲಿ ನೆಲೆಸಿರುವ ತಿಳ್ಳೇಕ್ಯಾತರ ಏಳೆಂಟು ಹುಡುಗರು 10ನೇ ತರಗತಿಯವರೆಗೆ, ಮೂವರು ಪಿಯುಸಿವರೆಗೆ ವ್ಯಾಸಂಗಮಾಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಹತ್ತನ್ನೆರಡು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ಜಗನ್ನಾಥ್ ಎಂಬುವವರು ಮಾತ್ರ ಎರಡನೇ ವರ್ಷದ ಪದವಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ಜೀವನೋಪಾಯಕ್ಕಾಗಿ ಆಟೋ ಚಾಲಕ ವೃತ್ತಿಯಲ್ಲಿ ತೊಡಗಿದ್ದಾರೆ. ಒಬ್ಬರು ಬಿ.ಪಿ.ಎಡ್. ವ್ಯಾಸಂಗಮಾಡಿ ಅನುದಾನರಹಿತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕರಾಗಿದ್ದಾರೆ. ಇಲ್ಲಿ ಯಾರೊಬ್ಬರೂ ಪದವಿ ಹಂತದ ಶಿಕ್ಷಣ ಪಡೆದವರಿಲ್ಲ. ಹದಿನೈದಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರ ನೌಕರಿಯಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಾರೂ ಇರುವುದಿಲ್ಲ ಜಗನ್ನಾಥ್ ಅವರ ಹೆಂಡತಿಯಾದ ವಿಜಯಮ್ಮ (51) ಧರ್ಮಸ್ಥಳ ಮಂಜುನಾಥೇಶ್ವರ  ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿ ಹಾಗೂ ಹರಿಶ್ಚಂದ್ರಘಾಟಿನ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರಸ್ವತಿ (28) ಎಂಬುವವರು ಚಿಕ್ಕದೊಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಇನ್ನೂ ಕೆಲವರು ವ್ಯಾಪಾರ, ಕೆಲಸವನ್ನು ಗಾರೆ ಕೆಲಸ, ಕೃಷಿ ಕೂಲಿಯಾಳುಗಳ ಕೆಲಸ, ಸಣ್ಣಪುಟ್ಟ ಆಲಂಕಾರಿಕ ವಸ್ತುಗಳ ಮಾರಾಟ ಇನ್ನೂ ಮುಂತಾದ ಕೆಲಸಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಯಾರೊಬ್ಬರಿಗೂ ನಿಯತವಾಗಿ ಆರ್ಥಿಕ ಆದಾಯ ತಂದುಕೊಡುವ ನಿರ್ದಿಷ್ಟವಾದ ಉತ್ಪಾದನಾ ನೆಲೆಗಳಿಲ್ಲ.

ಅಲೆಮಾರಿ ಭಿಕ್ಷುಕರಾಗಿದ್ದ ಶಿಳ್ಳೇಕ್ಯಾತರು ಈಗ ಸ್ಥಿರ ಸಮುದಾಯವಾಗಿ ನೆಲೆಕಂಡುಕೊಳ್ಳುತ್ತಿದ್ದಾರೆ. ಭಿಕ್ಷಾಟನೆಯನ್ನು ಕೈಬಿಟ್ಟಿದಾರೆ. ಹಿರಿಯೂರಿನ ಶಿಳ್ಳೇಕ್ಯಾತರು ತೊಗಲುಗೊಂಬೆ ಕುಣಿಸುವ ತಮ್ಮ ಕುಲವೃತ್ತಿಯನ್ನು ಕೂಡಾ ಕೈಬಿಟ್ಟಿದ್ದಾರೆ. ಕುಲವೃತ್ತಿಯ ಪರಿಕರಗಳನ್ನು ಮಾತ್ರ ತಮ್ಮ ಮನೆಗಳಲ್ಲಿ ಪವಿತ್ರವೆಂದು ದೇವರ ಪಟಗಳ ಬಳಿಯಿಟ್ಟು ಪೂಜಿಸುತ್ತಾರೆ. ಇವರ ಮನೆಭಾಷೆ ಮರಾಠಿ, ಇವರು ಭಾರತ ದೇಶದಲ್ಲಿ ಎಲ್ಲಿಯೇ ನೆಲೆಯೇ ನೆಲಸಿರಲಿ ಬೆಡಗು, ಆಚರಣೆ ಮತ್ತು ಸಂಪ್ರದಾಯಗಳು ಹೆಚ್ಚಕಮ್ಮಿ ಒಂದೇ ಆಗಿರುತ್ತವೆ. ತಿಳ್ಳೇಕ್ಯಾತ ಸಮುದಾಯವನ್ನು ಕಿಳ್ಳೇಕ್ಯಾತ, ಬುಂಡೆಬೆಸ್ತ, ಕಟುಬು, ಕಟಬರ ಮುಂತಾದ ಬದಲಿ ಹೆಸರುಗಳಿಂದ ಕರೆಯಲಾಗುತ್ತಿದೆ.

ತಿಳ್ಳೇಕ್ಯಾತ ಮತ್ತು ಕಿಳ್ಳೇಕ್ಯಾತ ಎಂಬ ಪದಗಳು ಹಲವಾರು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ’ಶಿ’ ಮತ್ತು ’ ಕಿ’ ಅಕ್ಷರಗಳ ಗೊಂದಲದಿಂದಾಗಿ ಎರಡು ಪದಗಳನ್ನು ಎರಡು ಪ್ರತ್ಯೇಕವಾದ ಜಾತಿಗಳೆಂದು ತಪ್ಪಾಗಿ ಗ್ರಹಿಸಿದ ಪರಿಣಾಮವಾಗಿ ಶಿಳ್ಳೇಕ್ಯಾತ ಎಂಬ ಹೆಸರನ್ನು ಎಸ್ಪಿ ಪಟ್ಟಿಯಲ್ಲಿ ಸೇರಸಿದ್ದಾರೆ ಕಿಳ್ಳೇಕ್ಯಾತ ಎಂಬ ಹೆಸರನ್ನು ಪ್ರವರ್ಗ-1’ ಪಟ್ಟಿಯಲ್ಲಿ ಸೇರಿಸಲಾಗಿದೆ ಹಾಗಾಗಿ ಸೂಕ್ತವಾದ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಗೊಂದಲ ಮತ್ತು ಜಟಿಲತೆಯನ್ನು ನಿವಾರಿಸಬೇಕೆಂದು ಶಿಳ್ಳೇಕ್ಯಾತರು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ವಾಸಮಾಡುತ್ತಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಹರಿಶ್ಚಂದ್ರಘಾಟ್ ಹತ್ತಿರದ ಮಾರುತಜ್ಜನ ಕಾಲೋನಿಯ ಅಲೆಮಾರಿ ಶಿಳ್ಳೇಕ್ಯಾತರ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆಮಾಡಿ ಹಕ್ಕುಪತ್ರಗಳನ್ನು ನೀಡಬೇಕೆಂದು ಮನವಿ ಮಾಡಲಾಯಿತು.

ರಾಜ್ಯಾಧ್ಯಕ್ಷರು ಮಹಾನಾಯಕ ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ತಾಳಿಕೇರೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ರಾಜ್ಯ ಕಾರ್ಯಾಧ್ಯಕ್ಷರಾದ ಕೆ.ಪಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಪಾಳ್ಯ, ರಾಜ್ಯ ಕಾರ್ಯದರ್ಶಿ ರವಿಕುಮಾರ್, ಕುಮಾರಸ್ವಾಮಿ, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವೀಣಂ ರಾಮದಾಸ್, ಉಮಾದೇವಿ, ಸಗ್ಮಾ, ರಾಕೇಶ್, ಶಾರದಮ್ಮ, ಆನಂತರಾವ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *