ಚಿತ್ರದುರ್ಗದಲ್ಲಿ ‘ಹನಿಜೇನು’ ಕವನ ಸಂಕಲನ ಬಿಡುಗಡೆ: ಏ.3ರಂದು ಮುರುಘಾಮಠದಲ್ಲಿ ವಿಶೇಷ ಸಮಾರಂಭ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 01

ವಿದ್ಯಾ ನಗರದ ಆಶೀರ್ವಾದ ಪ್ರಕಾಶನದವತಿಯಿಂದ ಹೆಚ್.ಡಿ.ಪುರದ ಚುಟುಕು ಕವಿ ಎಸ್. ಗಂಗಾಧರಪ್ಪರವರ ‘ಹನಿಜೇನು” ಕವನ ಸಂಕಲನ ಬಿಡುಗಡೆ ಸಮಾರಂಭವೂ ಏ.3ರ ಶುಕ್ರವಾರ ನಗರದ ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಾವಣಗೆರೆಯ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮಿಗಳು ವಹಿಸಲಿದ್ದಾರೆ. ಶ್ರೀ ಮುರುಘಾಮಠದ ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಸಮ್ಮುಖವನ್ನು ವಹಿಸಲಿದ್ದಾರೆ.

ಕವನ ಸಂಕಲನವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಡಾ. ಶ್ರೀ ಬಸವಕುಮಾರ ಸ್ವಾಮಿಗಳು ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ವಹಿಸಲಿದ್ದಾರೆ. ಕವನ ಸಂಕಲನವನ್ನು ಕುರಿತು ಚಿಂತಕರು, ಆರ್ಥಿಕ ತಜ್ಞರಾದ ಡಾ.ಜಿ.ಎನ್.ಮಲ್ಲಿಕಾರ್ಜನಪ್ಪ ಮಾತನಾಡ ಲಿದ್ದಾರೆ. ಹಿರಿಯೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ.ಪ್ರಮೋದ್, ಸಿಸಿಎ, ಕಾನೂನು ಸಲಹೆಗಾರರಾದ ನಾಗರಾಜ್ ಸಂಗಮ್ ಹಾಗೂ ಹೆಚ್.ಡಿ.ಪುರದ ಜಿ.ಎಸ್.ಅಣ್ಣಪ್ಪ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *