ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 10 ನಗರದ ಹೊಳಲ್ಕೆರೆ ರಸ್ತೆಯ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿನ ವೀರಶೈವ ಸಮಾಜ (ರಿ.) ದವತಿಯಿಂದ ಏ.12ನೇ ಶನಿವಾರ ಬೆಳಗ್ಗೆ 6.30 ರಿಂದ ಹರಪನಹಳ್ಳಿ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗುಳ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಇವರಿಂದ
ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.

ಬೆಳಗ್ಗೆ 7.00 ಗಂಟೆಗೆ ಗಂಗಾಪೂಜೆಯ ನಂತರ ಗುಗ್ಗುಳದ ಮೆರವಣಿಗೆಯು ಉಜ್ಜಯಿನಿ ಮಠದಿಂದ ಹೊರಟು ರಂಗಯ್ಯನಬಾಗಿಲು,
ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತದ ಮುಖಾಂತರವಾಗಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ
ಮುಂಭಾಗದ ಅಗ್ನಿಕುಂಡ ಹಾಯುವುದರ ಮೂಲಕ ಬಿಜಯಂಗೈ ಯುವುದು. ಮಹಾಮಂಗಳಾರತಿ ನಂತರ ದಾಸೋಹ
ಏರ್ಪಡಿಸಲಾಗಿದೆ.

ಗುಗ್ಗುಳ ಮೆರವಣಿಗೆ ಬರುವ ದಾರಿಯಲ್ಲಿ ಬರುವಾಗ ಭಕ್ತರು ಮನೆಗಳ ಮುಂದೆ ನೀರನ್ನು ಹಾಕಿ ಸಹಕರಿಸಿ ಶ್ರೀ ವೀರಭದ್ರಸ್ವಾಮಿ
ಮನೆ ದೇವರ ಮನೆತನದವರು, ಕಡ್ಡಾಯವಾಗಿ ಗುಗ್ಗುಳದಲ್ಲಿ ಭಾಗವಹಿಸಿ ಎಂದು ಸಮಾಜದವತಿಯಿಂದ ಮನವಿ ಮಾಡಲಾಗಿದ್ದು,
ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ
ವಿನಂತಿಸಲಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *