ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ,28 ನಗರದ ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದ ವತಿಯಿಂದಸರ್ವಧರ್ಮೀಯರ ವಧು-ವರರ ರಾಜ್ಯ ಮಟ್ಟದ
ಸಮಾವೇಶವನ್ನು ಡಿ29ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ
ಆಯೋಜಿಸಿಲಾಗಿದೆ ಎಂದು ವ್ಯವಸ್ಥಾಪಕರಾದ ಜೆ.ಎಂ .ಜಂಬಯ್ಯ ನವರು ತಿಳಿಸಿದ್ದಾರೆ.
ಅಂದಿನ ಸಮಾವೇಶದ ಅಧ್ಯಕ್ಷತೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ
ಶಿವಯೋಗಿ. ಸಿ.ಕಳಸದವರು ವಹಿಸಲಿದ್ದು, ಸಾನ್ನಿಧ್ಯವನ್ನು ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ
ಮಹಾಸ್ವಾಮಿಗಳು ವಹಿಸಲಿದ್ದು, ಆಡಳಿತ ಮಂಡಳಿಯ ಮತ್ತೋರ್ವ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಆಗಮಿಸಲಿದ್ದಾರೆ.
ಈ ಸಮಾವೇಶದಲ್ಲಿ ರೈತರು,ಪದವಿಧರ ರೈತರು, ಪದವಿಧರ ವ್ಯಾಪಾರಸ್ಥರು, ಇಂಜಿನಿಯರು, ವೈದ್ಯರು, ವಕೀಲರು,
ಸ್ನಾತಕೊತ್ತರರು, ಎಂಬಿಎ, ಎಂ ಸಿ ಎ ,ಎಂ ಎ ,ಎಂ ಎಸ್ಸಿ ,ಎಂ ಕಾಂ,ಎಂ ಟೆಕ್ ಪದವೀಧರರು ಮತ್ತು ಖಾಸಗಿ ವೃತ್ತಿಪರರು ಹಾಗೂ
ಮರು ವಿವಾಹ ಮತ್ತು ಅಂತರ ಜಾತಿಯ ವಿವಾಹವಾಗಲು ಇಚ್ಛಿಸುವಂತಹ ವಧು-ವರರು ಭಾಗವಹಿಸಬಹುದಾಗಿದೆ.