ಚಿತ್ರದುರ್ಗದಲ್ಲಿ ಡಿ.7ರಂದು ಟಿಇಟಿ–2025: 12,813 ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ವ್ಯವಸ್ಥೆಗಳು.

ಪರೀಕ್ಷಾ ಪಾವಿತ್ರ್ಯತೆಗಾಗಿ ಕಟ್ಟುನಿಟ್ಟಿನ ಕ್ರಮ – 144 ಸೆಕ್ಷನ್ ಜಾರಿ, ಭದ್ರ ಪೊಲೀಸ್ ಬಂದೋಬಸ್ತ್

ಚಿತ್ರದುರ್ಗ, ಡಿ.04:
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET)–2025 ಡಿ.7 ರಂದು ಚಿತ್ರದುರ್ಗ ಜಿಲ್ಲಾದ್ಯಂತ ನಡೆಯಲಿದ್ದು, ಪತ್ರಿಕೆ–1 ಮತ್ತು ಪತ್ರಿಕೆ–2 ಸೇರಿ ಒಟ್ಟು 12,813 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಕೇಂದ್ರದಲ್ಲಿ ನಿಯಮ ಪಾಲನೆ ಕಡ್ಡಾಯವಾಗಿದ್ದು, ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಮುಖ್ಯ ಅಧೀಕ್ಷಕರು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಪರೀಕ್ಷೆಯ ವೇಳಾಪಟ್ಟಿ

  • ಪತ್ರಿಕೆ – 1: ಬೆಳಿಗ್ಗೆ 9:30 – 12:00
    → 8 ಪರೀಕ್ಷಾ ಕೇಂದ್ರಗಳಲ್ಲಿ 2,623 ಅಭ್ಯರ್ಥಿಗಳು
  • ಪತ್ರಿಕೆ – 2: ಮಧ್ಯಾಹ್ನ 2:00 – 4:30
    → 35 ಕೇಂದ್ರಗಳಲ್ಲಿ 10,190 ಅಭ್ಯರ್ಥಿಗಳು

ಪರೀಕ್ಷೆಗೆ ಮುಂಚಿತವಾಗಿ ಬೆಳಿಗ್ಗೆ 7–9 ಮತ್ತು ಮಧ್ಯಾಹ್ನ 12:15–1:30 ರವರೆಗೆ ಅಭ್ಯರ್ಥಿಗಳ ಸಮಗ್ರ ತಪಾಸಣೆ ಮತ್ತು ಪ್ರವೇಶ ಪತ್ರ ಪರಿಶೀಲನೆ ನಡೆಯಲಿದೆ.

ತಪಾಸಣಾ ಸಿಬ್ಬಂದಿ ಗೈರು ಇದ್ದರೆ, ಮುಖ್ಯಾಧಿಕಾರಿಗಳು ತಕ್ಷಣ ತಮ್ಮ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ನಿರ್ದೇಶಿಸಲಾಯಿತು.

ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್

  • ಪ್ರತಿ ಪರೀಕ್ಷಾ ಕೇಂದ್ರಕ್ಕೆ 2 ಪೊಲೀಸ್ ಸಿಬ್ಬಂದಿ
  • ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ಬಂಡಲ್ ಸಾಗಾಣಿಕೆಗೆ ಸಶಸ್ತ್ರ ಪೊಲೀಸ್ ರಕ್ಷಣೆ
  • ಡಿ.8 ರಂದು ಉತ್ತರಪತ್ರಿಕೆಗಳನ್ನು ಬೆಂಗಳೂರು ಕಳುಹಿಸುವಾಗಲೂ ವಿಶೇಷ ಭದ್ರತಾ ವಲಯ

ಕಾಂಪೌಡ್ ಇಲ್ಲದ ಹಾಗೂ ಹೆಚ್ಚಿನ ಅಭ್ಯರ್ಥಿಗಳಿರುವ ಕೇಂದ್ರಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿ

ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ.

  • Xerox, ಕಂಪ್ಯೂಟರ್ ಸೆಂಟರ್‌ಗಳನ್ನು ತೆರೆಯುವಂತಿಲ್ಲ
  • ಯಾವುದೇ ಎಲೆಕ್ಟ್ರಾನಿಕ್ ಸಾಧನ/ಮೊಬೈಲ್ ತರಲು ನಿಷೇಧ
  • ಎಲ್ಲಾ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಆರೋಗ್ಯ ಸಹಾಯಕರ ನಿಯೋಜನೆ
  • ವಿದ್ಯುತ್ ವ್ಯತ್ಯಯ ತಪ್ಪಿಸಲು BESCOMಗೆ ಸೂಚನೆ

ಪರೀಕ್ಷಾ ಸಿಬ್ಬಂದಿ ಗೈರು ಇದ್ದರೆ ಕಠಿಣ ಕ್ರಮ

ನಿಯೋಜಿಸಿದ ಸರ್ಕಾರ/ಅನುದಾನಿತ ಶಿಕ್ಷಕರು ಅಥವಾ ಉಪನ್ಯಾಸಕರು ಗೈರು ಹಾಜರಾದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಖಾಸಗಿ ಶಾಲೆಗಳಲ್ಲಿ ಅನುದಾನಿತ ಸಿಬ್ಬಂದಿ ಲಭ್ಯವಿಲ್ಲದಿದ್ದರೆ, ಸಮೀಪದ ಸರ್ಕಾರಿ ಶಾಲಾ ಶಿಕ್ಷಕರನ್ನು ನೇಮಿಸಲು ಸೂಚಿಸಲಾಗಿದೆ.

ವೆಬ್ ಕಾಸ್ಟಿಂಗ್ ವ್ಯವಸ್ಥೆ

  • ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಪೂರ್ಣ ವೆಬ್ ಕಾಸ್ಟಿಂಗ್ ನಿಯಂತ್ರಣ ಕೊಠಡಿ ಸಿದ್ಧ
  • CCTV ಇರುವ ಕೊಠಡಿಗಳನ್ನು ಮಾತ್ರ ಪರೀಕ್ಷೆಗೆ ಬಳಸುವ ಕ್ರಮ
  • CCTV ಇಲ್ಲದ ಕೊಠಡಿಗಳಿಗೆ ತಾತ್ಕಾಲಿಕ ಅಳವಡಿಕೆ
  • ಮಾರ್ಗಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಜಾಗೃತ ದಳ ನಿಯೋಜನೆ

ಉಪನಿರ್ದೇಶಕ ಮಂಜುನಾಥ, ಡಯಟ್ ಉಪನಿರ್ದೇಶಕ ಎಂ. ನಾಸಿರುದ್ದೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *