ಸೂರ್ಯನ ಸಮತಾವಾದದ ಗುಣ ನಮ್ಮಲ್ಲಿಯೂ ಬರಬೇಕು: ಕೆ.ಎಸ್. ನವೀನ್.

ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಂಯುಕ್ತಾಶ್ರಯದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಶಾಲಾ ಆವರಣದಲ್ಲಿಂದು ರಥಸಪ್ತಮಿಯ ಪ್ರಯುಕ್ತ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಜ,25:

108 ಸೂರ್ಯ ನಮಸ್ಕಾರವೂ ನಮ್ಮ ನಿತ್ಯದಲ್ಲಿ ನಾವು ಚೈತನ್ಯದಾಯಕ, ಅಂದಿನ ಕೆಲಸಗಳನ್ನು ಕ್ರಿಯಾಶೀಲವಾಗಿ ಮಾಡಲು ಉತ್ತೇಜನ ಅಥವಾ ಪ್ರೇರಣೆ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಅವರು ಅಭಿಪ್ರಾಯಪಟ್ಟರು.

ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಂಯುಕ್ತಾಶ್ರಯದಲ್ಲಿ ರಥಸಪ್ತಮಿಯ ಪ್ರಯುಕ್ತ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮದ ಅಂಗವಾಗಿ ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಶಾಲಾ ಆವರಣದಲ್ಲಿಂದು ಮುಂಜಾನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಅಂಧಕಾರದಲ್ಲಿ ಇರತಕ್ಕಂತಹ ಬಹುಭಾಗದ ಭೂಮಿಯನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗುವಂತಹ ಪ್ರಾರಂಭದ ದಿನ. ಇದಕ್ಕೆ ಸೂರ್ಯ ಜಯಂತಿ ಅಥವಾ ಸೂರ್ಯ ಹುಟ್ಟಿದ ದಿನ ಅಂತಲೂ ಕರೆಯುತ್ತಾರೆ.

ಈ ಒಂದು ಅಪರೂಪದ ದಿನವನ್ನು ದೇಶಾದಾದ್ಯಂತ ಅರ್ಥಪೂರ್ಣವಾಗಿ ವಿಶೇಷತೆಯಿಂದ ೧೦೮ ಸೂರ್ಯ ನಮಸ್ಕಾರವನ್ನು ಸಾಮೂಹಿಕವಾಗಿ ರಥಸಪ್ತಮಿಯ ಮೂಲಕ ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಇದೊಂದು ಸೂರ್ಯನಿಗೆ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಿದರೂ ನಾವು ಮಾಡುತ್ತಿರುವುದು ನಮ್ಮ ದೇಹಕ್ಕೆ .ಈ ಶಶೀರದ ಎಲ್ಲ ಅಂಗಾಂಗ ಸಂರಕ್ಷಣೆಯ ಮೂಲಕ ಸದೃಢ ಆರೋಗ್ಯಕ್ಕೆ ಕ್ಷೇಮಕ್ಕಾಗಿಯೇ ಆಗಿದೆ ಎಂದರು. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ವಿಶೇಷ ಗುಣಗಳು ಇರುತ್ತವೆ. ಅಂತಹವರು ಬೇರೆಯವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ತಮ್ಮಲ್ಲಿನ ಗುಣಗಳನ್ನು ದಾನ ಮಾಡಿದಾಗ ಅದು ಸೂರ್ಯನ ಗುಣ ವಿಶೇಷಕ್ಕೆ ಸಮವಾಗಿದೆ. ಪ್ರಪಂಚದ ಸಕಲ ಜೀವರಾಶಿಗಳಿಗೆ ಸೂರ್ಯನ ಉದಯ ಹೇಗೆ ಪ್ರೇರಣೆ, ಚೈತನ್ಯದಾಯಕವಾಗಬಲ್ಲದೋ ಹಾಗೆ ನಾವು ಸದ್ಗುಣಗಳನ್ನು ಬಚ್ಚಿಟ್ಟುಕೊಳ್ಳದೆ ಅವನ್ನು ಬೇರೆಯವರಿಗೆ ಸಹಾಯ ರೂಪದಲ್ಲಿ ಧಾರೆ ಎರೆದಾಗ ನಿಮ್ಮ ವ್ಯಕ್ತಿತ್ವಕ್ಕೆ ಒಳಪು ಬರುತ್ತದೆ ಎಂದ ಅವರು. ಯೋಗಾಚಾರ್ಯ ಚಿನ್ಮಯಾನಂದ ಅವರು ತಾವು ಕಲಿತ ವಿದ್ಯೆಯನ್ನು ತಾವೊಬ್ಬರೇ ಮಾಡುತ್ತಾ ಇರಬಹುದಿತ್ತು. ಆದರೆ ಅವರು ಹಾಗೆ ಮಾಡದೆ, ಅದನ್ನು ಸಾವಿರಾರು ಜನರಿಗೆ ಕಲಿಸುವ ಮೂಲಕ ಸಮಾಜಕ್ಕೆ ಒಂದು ರೀತಿಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವುದು ಆರೋಗ್ಯಕರ ಸಮಾಜಕ್ಕೆ ಪರೋಕ್ಷವಾಗಿ ಯೋಗಗುಣ ಧರ್ಮವನ್ನು ದಾನ ಮಾಡುತ್ತಿದ್ದಾ ರೆಂದು ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆ ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಮಾತನಾಡುತ್ತಾ ಸೂರ್ಯ ಅವರಿವ ರೆಂದು ಭೇದ ಭಾವ ಮಾಡದೆ , ಸಕಲರಿಗೂ ನಿಗಧಿತ ವೇಳೆಗೆ ಸರಿಯಗಿ ಭೂಮಿ ಮೇಲೆ ತನ್ನ ಕಿರಣಗಳನ್ನ ಸೂಸಿ ಎಲ್ಲ ಜೀವರಾಶಿಗೆ ಹೇಗೆ ಚೇತನ ಶಕ್ತಿಯಾಗಬಲ್ಲುದೋ ಹಾಗೆ ನಾವು ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದರೆ ಆಗ ದೊರಕುವ ಆನಂದದ ಅರಿವು ಬೇರೆ ಯಾವುದಕ್ಕೂ ಸಮ ಅಲ್ಲ. ಹಾಗೆ ನಮ್ಮ ಚಿತ್ರದುರ್ಗ ನಗರದಲ್ಲಿ ಈಗಾಗಲೇ ಅನೇಕ ಯೋಗ ಶಾಖೆಗಳಿವೆ. ಅದರ ಮುಖ್ಯಸ್ಥರು, ಪದಾಧಿಕಾರಿಗಳು ಆಗಾಗ ಒಂದೆಡೆ ಸೇರುವ, ಸಂಘಟನೆ ಇನ್ನಷ್ಟು ಬಲಗೊಳಿಸುವ ಮತ್ತು ಇದರಿಂದ ಸಾರ್ವಜನಿಕರಿಗೆ ಮತ್ತೆ ಯಾವ ರೀತಿ ಸೇವೆ ಸಲ್ಲಿಸಬಹುದೆಂಬ ತೀರ್ಮಾನ ಮಾಡುತ್ತಾ ಮುಂದೆ ಸಾಗಿದಾಗ ಇನ್ನಷ್ಟು -ಮತ್ತಷ್ಟು ಕೊಡುಗೆ ಯೋಗ ಸಂಘಟನೆಗಳಿಂದ ಸಾಧ್ಯವಾಗಬಹುದು ಎಂದು ಸಲಹೆ ನೀಡಿದರು.

ಶೃಂಗೇರಿಮಠದ ಯೋಗ ಶಾಖೆಯ ಹಿರಿಯರಾದ ರಾಜಣ್ಣ ಮಾತನಾಡುತ್ತಾ ಯೋಗಕ್ಕೆ ಚಿತ್ರದುರ್ಗ ಜಿಲ್ಲೆ ಒಂದು ಭದ್ರ ಬುನಾಧಿಯಂತಿದೆ. ಕಾರಣ ಮಲ್ಲಾಡಿಹಳ್ಳಿ ರಾಘವೇಂದ್ರ ಮಹಾಸ್ವಾಮಿಗಳು ಇದರ ಮುಖ್ಯಸ್ಥರಾಗಿ ಬಹಳ ಕೊಡುಗೆಯನ್ನು ನೀಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಚಿನ್ಮಯಾನಂದರವರು ಯೋಗದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಅದನ್ನು ನಾವು ನೀವು ಎಲ್ಲರೂ ಮುಂದುವರೆಸಿಕೊಂಡು ಹೋಗಬೇಕೆಂದು ವಿನಂತಿಸಿದರು.

ವೇದಿಕೆಯಲ್ಲಿ ವಿದ್ಯಾ ವಿಕಾಸ ಶಾಖೆಯ ತರಬೇತಿದಾರ ವೆಂಕಟೇಶ್ ಸಂಘಟಿಸಿ. ಉಪಸ್ಥಿತಿತರಿದ್ದರು. ಸಮಾರಂಭದಲ್ಲಿ ಕೋಕಿಲ ಎಂ.ಜೆ ಪ್ರಾರ್ಥಿಸಿದರೆ ಯೋಗ ಸಂಘಟಕ ಪರುಷರಾಮ್ ಸ್ವಾಗತಿಸಿದರು. ಶಿಕ್ಷಕಿ ಹಾಗೂ ಯೋಗ ತರಭೇತುದಾರರೂ ಆದ ವಿಮಲಾಕ್ಷಿ ಕಾರ್ಯಕ್ರಮವನ್ನು ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.

ನಗರದ ವಿವಿಧ ಬಡಾವಣೆಯ ಯೋಗ ಶಾಖೆಯ ಶಿಕ್ಷಕರು ,ತರಬೇತಿದಾರರು ಹಾಗೂ ಯೋಗ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ ೧೦೮ ಸೂರ್ಯ ನಮಸ್ಕಾರ ಮಾಡುವುದರ ಮೂಲಕ ವಿಶೇಷ ಕಳೆ ತಂದರು.

Views: 13

Leave a Reply

Your email address will not be published. Required fields are marked *