ಕಾಂಗ್ರೆಸ್ ಸಮಿತಿಯಿಂದ ಮೊಂಬತ್ತಿಯನ್ನು ಬೆಳಗುವುದರ ಮೂಲಕ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. ೨೫ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಹಲವಾರು ಜನ ಬಲಿಯಾಗಿದ್ದು ಅವರ ಸ್ಮರಣಾರ್ಥ ಶುಕ್ರವಾರ ಸಂಜೆ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮೊಂಬತ್ತಿಯನ್ನು ಬೆಳಗುವುದರ ಮೂಲಕ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ಅವರ ಕುಟುಂಭಗಳಿಗೆ
ಸಾಂತ್ವಾನವನ್ನು ಹೇಳಲಾಯಿತು.


ನಗರದ ನೀಲಕಂಠೇಶ್ವರ ದೇವಾಲಯದಿಂದ ಸಂತೇಪೇಟೆ ವೃತ್ತದವರೆಗೂ ಕೈಯಲ್ಲಿ ಮೊಂಬತ್ತಿಗಳನ್ನು ಹಿಡಿದು ಮತ್ತೋಂದು ಕೈಯಲ್ಲಿ
ಉಗ್ರರ ಅಟ್ಟಹಾಸವನ್ನು ಕೊನೆಗೊಳಿಸಿ ಎಂಬ ಭಿತ್ತಿ ಪತ್ರವನ್ನು ಹಿಡಿಯುವುದರ ಮೂಲಕ ಮೆರವಣಿಗೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಾಜ್
ಪೀರ್, ಕಾರ್ಯಾದ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಜಿಲ್ಲಾ ಗ್ಯಾರೆಂಟಿ
ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಘು, ಗುರುರಾಜ್ ಶ್ರೇಷ್ಟಿ,
ಖುದ್ದುಸ್, ಲಕ್ಷ್ಮೀಕಾಂತ್, ರವಿಕುಮಾರ್, ಎನ್.ಡಿ.ಕುಮಾರ್, ಮುದಸಿರ್ ಕುಮಾರಗೌಡ, ಮಧುಗೌಡ, ವೆಂಕಟೇಶ್
ನಜ್ಮತಾಜ್, ಜಾಹ್ನವಿ ನಾಗರಾಜ್, ಶಬ್ಬೀರ್, ಸುದರ್ಶನ, ಸಾಧಿಕ್‌ವುಲ್ಲಾ, ಶಶಿಕಿರಣ, ರಘು, ಅಂಜನಪ್ಪ ಸೇರಿದಂತೆ
ಇತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *