ವಿದ್ಯಾ ವಿಕಾಸ ಐಸಿಎಸ್‌ಇ ವಿದ್ಯಾರ್ಥಿಗಳು ರಿಜಿನಲ್ ವಿಭಾಗಕ್ಕೆ ಆಯ್ಕೆ.

ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಐಸಿಎಸ್‌ಇ ವಿಭಾಗದ ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ನಡೆದ ಝೋನಲ್ ಚೆಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಮೂವರು ವಿಜೇತರಾಗಿ ಬೆಂಗಳೂರಿನಲ್ಲಿ ನಡೆಯಲಿರುವ ರಿಜಿನಲ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತರ ವಿವರಗಳು ಹೀಗಿವೆ:

ಕ್ರಮವಿದ್ಯಾರ್ಥಿ ಹೆಸರುತರಗತಿಸ್ಪರ್ಧೆಸ್ಥಾನ
01ಸಿಂಚನಾ ಎಸ್7ನೇ ತರಗತಿಚೆಸ್ಐದನೇ ಸ್ಥಾನ
02ಅನಿರುದ್ ವಿ ಸಜ್ಜನ್10ನೇ ತರಗತಿಚೆಸ್ತೃತೀಯ ಸ್ಥಾನ
03ಶೋಭಿತ್ ಹೆಚ್10ನೇ ತರಗತಿಚೆಸ್ನಾಲ್ಕನೇ ಸ್ಥಾನ

ಈ ಯಶಸ್ಸು ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ಸಕಾರಾತ್ಮಕ ವಾತಾವರಣದ ಫಲವಾಗಿದ್ದು, ಸಂಸ್ಥೆಗೆ ಇನ್ನಷ್ಟು ಹೆಮ್ಮೆ ತಂದಿದೆ.

ಅಭಿನಂದನೆಗಳು:

ಈ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ. ವಿಜಯ್ ಕುಮಾರ್, ಐಸಿಎಸ್‌ಇ ವಿಭಾಗದ ಪ್ರಾಚಾರ್ಯ ಬಸವರಾಜಯ್ಯ ಪಿ., ಮುಖ್ಯ ಶಿಕ್ಷಕರು ತಿಪ್ಪೇಸ್ವಾಮಿ ಎನ್.ಜಿ, ನಿರ್ದೇಶಕರಾದ ಶ್ರೀ ಎಸ್.ಎಂ. ಪೃಥ್ವೀಶ್, ಶ್ರೀಮತಿ ಸುನಿತಾ ಪಿ.ಸಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವರ್ಗದವರು ವಿದ್ಯಾರ್ಥಿಗಳನ್ನು ಶ್ಲಾಘಿಸಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *