
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ‘ದೀವಟಿಗೆ ಸಲಾಂ’ ‘ಸಲಾಂ ಆರತಿ’ ‘ಸಲಾಂ ಮಂಗಳಾರತಿ’ ಎಂಬ ಪೂಜಾ ಕಾರ್ಯಗಳ ಹೆಸರುಗಳನ್ನು ‘ದೀವಟಿಗೆ ನಮಸ್ಕಾರ’ ‘ಆರತಿ ನಮಸ್ಕಾರ’ ‘ಮಂಗಳಾರತಿ ನಮಸ್ಕಾರ’ ಎಂದು ಬದಲಿಸಲು ನಿರ್ಧರಿಸಲಾಗಿದೆ. ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ಹೆಸರು ಬದಲಾಯಿಸಿ, ಸೇವೆಗಳನ್ನು ಮತ್ತು ಸೇವಾ ಕಾರ್ಯಗಳನ್ನು ಮುಂದುವರಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ದೇವಾಲಯಕ್ಕೆ ಮತ್ತು ದೇವರಿಗೆ ದೀವಟಿಗೆ ಹಿಡಿದು ಆರತಿಯಂತೆ ನಡೆಸುವ ಪೂಜಾ ಕಾರ್ಯಕ್ಕೆ ಕೆಲವು ದೇವಾಲಯಗಳಲ್ಲಿ ‘ದೀವಟಿಗೆ ಸಲಾಂ’ ‘ಸಲಾಂ ಮಂಗಳಾರತಿ’ ‘ಸಲಾಂ ಆರತಿ’ ಎಂದು ಕರೆಯಲಾಗುತ್ತದೆ. ಇದನ್ನು ಬದಲಿಸಬೇಕು ಎಂದು ಭಕ್ತಾದಿಗಳಿಂದ ಒತ್ತಾಯ ಬಂದಿತ್ತು. ಈ ವಿಷಯವನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಸದಸ್ಯರು ಗಮನಕ್ಕೆ ತಂದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಪೂಜಾ ಕಾರ್ಯಗಳ ಹೆಸರನ್ನು ತಮ್ಮ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ನಿರ್ಧಾರ ನಿರ್ಧರಿಸಲಾಯಿತು. ಎಂದಿದ್ದಾರೆ.
‘ಕೇವಲ ಪದಗಳನ್ನು ಬದಲಿಸಿ, ನಮ್ಮ ಭಾಷೆಯ ಪದ ಅಳವಡಿಸಿ, ಈ ಹಿಂದಿನಂತೆ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಪೂಜೆಗಳನ್ನು ಮುಂದುವರಿಸಲಾಗುವುದು ಪೂಜಾ ಕಾರ್ಯಗಳನ್ನು ರದ್ದುಪಡಿಸಲು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಲ್ಲೆಲ್ಲಿ ‘ಸಲಾಂ ಆರತಿ’