🌾 ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ:

📍 ಚಿತ್ರದುರ್ಗ, ಜುಲೈ 29:

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಅನ್ನದಾತರ ಸಂಕಷ್ಟಗಳಿಗೆ ಸ್ಪಂದನೆ ಇಲ್ಲ.
“ಗೊಬ್ಬರದ ಕೃತಕ ಅಭಾವ”ವನ್ನು ಉಂಟುಮಾಡಿ ರೈತರನ್ನು ಕಷ್ಟಕ್ಕೆ ನೂಕಿದೆ ಎಂದು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ವಿನಯ ಕುಮಾರ್ ಹೇಳಿದರು.

🔥 ಪ್ರತಿಭಟನೆಯಲ್ಲಿ ಸಿಡಿದ ಮಾತುಗಳು:

ಮಂಗಳವಾರ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು:

🗣️ “ಯೂರಿಯ ಗೊಬ್ಬರದ ಕೃತಕ ಅಭಾವವನ್ನು ಉಂಟುಮಾಡಿ ರೈತ ಗಬ್ಬರಕ್ಕಾಗಿ ಅಲೆದಾಡುವ ಸ್ಥಿತಿ ಸಿದ್ದರಾಮಯ್ಯ ಸರ್ಕಾರದ ಪರಿಣಾಮ. ಸದನದ ಒಳಗೂ ಹೊರಗೂ ಬಿಜೆಪಿ ರೈತರ ಪರ ಹೋರಾಡಲಿದೆ.”

🧑‍🌾 “ರೈತರು ಹೆದರುವ ಅಗತ್ಯವಿಲ್ಲ. ಬಿಜೆಪಿಯು ನಿಮ್ಮ ಪರವಿದೆ” ಎಂದು ಹೇಳಿದರು.

🌧️ ಮಳೆ ಬಂದರೂ ಸರ್ಕಾರದ ನಿರ್ಲಕ್ಷ್ಯ:

“ಮಳೆ ಬಂದಾಗ ರೈತರು ಬಿತ್ತನೆ ಮಾಡಿ, ಬೆಳೆ ಬೆಳೆದು ಅನ್ನ ನೀಡುತ್ತಾರೆ. ಆದರೆ ಅವರಿಗೆ ಬೇಕಾದ ಗೊಬ್ಬರ, ಬೀಜ, ಕ್ರಿಮಿನಾಶಕ ನೀಡದೇ ಸರ್ಕಾರ ರೈತ ಶಾಪಕ್ಕೆ ಗುರಿಯಾಗಿದೆ.”

“ತಮಗೆ ಮತ ನೀಡಿದವರೇ ಬೆಲೆ ಇಲ್ಲದಂತೆ ವರ್ತಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

📉 ವಿಳಾಸವಿಲ್ಲದ ವ್ಯವಸ್ಥೆ:

“ಹಲವಾರು ಬಾರಿ ದೆಹಲಿಗೆ ಹೋಗಿದ್ದರೂ ಒಂದು ಸಲ ಕೂಡ ರೈತರ ವಿಷಯವಾಗಿ ಸಂಬಂಧಿತ ಸಚಿವರು ಅಥವಾ ಅಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದರು.

“ಕೇಂದ್ರದಿಂದ ಗೊಬ್ಬರ ಬಂದರೂ ರಾಜ್ಯ ಸರ್ಕಾರ ಕಾಳಸಂತೆಯಲ್ಲಿ ಮಾರಾಟ ಮಾಡುವವರಿಗೆ ನೆರವಾಗಿದೆ,” ಎಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ.

📦 ಗೊಬ್ಬರದ ಲೆಕ್ಕಪತ್ರ:

ರಾಜ್ಯದಿಂದ ಕೇಳಿದ ಗೊಬ್ಬರದ ಬೇಡಿಕೆ: 6.30 ಲಕ್ಷ ಟನ್

ಕೇಂದ್ರ ನೀಡಿದ್ದು: 7.70 ಲಕ್ಷ ಟನ್

➡️ “ಹೀಗಿದ್ದರೂ ರಾಜ್ಯದಲ್ಲಿ ಗೊಬ್ಬರದ ಕೊರತೆ ಹೇಗೆ?” ಎಂಬ ಪ್ರಶ್ನೆ ಎತ್ತಿದರು.

“ಕಳ್ಳ ವ್ಯಾಪಾರಿಗಳು ಗೊಬ್ಬರವನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರುತ್ತಿದ್ದಾರೆ”, ಎಂದರು.

🧾 ಸಭೆಗಳಿಲ್ಲ, ಯೋಜನೆಯಿಲ್ಲ:

“ಮುಂಗಾರು ಬಿತ್ತನೆ ಪ್ರಾರಂಭವಾಗುವ ಮುನ್ನವೇ, ಎಷ್ಟು ಹೆಕ್ಟೇರ್ ಬಿತ್ತನೆ, ಯಾವ ಬೆಳೆಗಳು, ಎಷ್ಟು ಗೊಬ್ಬರ ಬೇಕು ಎಂಬ ಮಾಹಿತಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮೂಲಕ ಪಡೆಯಬೇಕಿತ್ತು, ಆದರೆ ಅದನ್ನೂ ಮಾಡಿಲ್ಲ.”

🧓 ಮುಖಂಡರ ಪ್ರತಿಕ್ರಿಯೆ:

ಜಿ.ಎಚ್. ತಿಪ್ಪಾರೆಡ್ಡಿ: “ಈ ವರ್ಷ ಉತ್ತಮ ಮಳೆಯಿದೆ, ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ಸರ್ಕಾರ ನಿರ್ಲಕ್ಷ್ಯವಿದೆ.”

ಎಸ್.ಕೆ. ಬಸವರಾಜನ್: “ಅಹಾರ ಬೆಳೆಗಳು ಹೆಚ್ಚಿರುವ ಜಿಲ್ಲೆಗೆ ಸಹಾಯವಾಗಬೇಕಿತ್ತು. ರೈತರ ಸಂಕಷ್ಟವನ್ನು ಮಾನವೀಯತೆಯಿಂದ ನೋಡುವ ಅಗತ್ಯ.”

🧑‍🌾 ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರ ಆಕ್ರೋಶ:

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ವೆಂಕಟೇಶ್ ಯಾದವ್, ಮಲ್ಲಿಕಾರ್ಜುನ್, ಮುರಳಿ, ರಾಮ ದಾಸ್, ನಾಗರಾಜ್, ಮಲ್ಲೇಶ್, ಶ್ರೀರಾಮರೆಡ್ಡಿ, ಸುರೇಶ್ ಮಧುರೆ, ಕಲ ಸೀತರಾಮರೆಡ್ಡಿ, ಡಾ. ಸಿದ್ದಾರ್ಥ ಗುಡಾರ್ಪಿ, ಸೂರಮ್ಮನಹಳ್ಳಿ ನಾಗರಾಜ್ ಮತ್ತು ಇತರರು ಭಾಗವಹಿಸಿದರು.

🚶 ಪ್ರತಿಭಟನಾ ಮೆರವಣಿಗೆ:

📍 ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯ ಮೂಲಕ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *