
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಏಪ್ರಿಲ್ 20 ರಂದು ಮೊಳಕಾಲ್ಮೂರು ಮತಕ್ಷೇತ್ರದಲ್ಲಿ 10 ನಾಮಪತ್ರ ಸಲ್ಲಿಕೆಯಾಗಿವೆ. ಬಹುಜನ ಸಮಾಜ ಪಕ್ಷದ ಎಂ.ಒ.ಮಂಜುನಾಥ ಸ್ವಾಮಿ ನಾಯಕ 3 ನಾಮಪತ್ರ ಸೇರಿದಂತೆ ಜ್ಯಾತ್ಯಾತೀತ ಜನತಾ ದಳ ಪಕ್ಷದ ವೀರಭದ್ರಪ್ಪ , ಆಮ್ ಆದ್ಮಿ ಪಕ್ಷದ ಹರೀಶ್ ನಾಯಕ ಎಸ್.ಟಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ ಟಿ, ಪಕ್ಷೇತರ ಅಭ್ಯರ್ಥಿಗಳಾಗಿ ವೈ.ಹೆಚ್.ಸೂರ್ಯ ಕುಮಾರ್, ಟಿ.ಶಶಿಕುಮಾರ್, ತಿಪ್ಪೇಸ್ವಾಮಿ.ಜಿ, ಹರೀಶ್ ಕುಮಾರ್ ಕೆ.ಪಿ ನಾಮಪತ್ರ ಸಲ್ಲಿಸಿದ್ದಾರೆ.
ಇದುವರೆಗೂ ಒಟ್ಟು 12 ಅಭ್ಯರ್ಥಿಗಳು 19 ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಎಸ್.ತಿಪ್ಪೇಸ್ವಾಮಿ 4, ಬಹುಜನ ಸಮಾಜ ಪಕ್ಷದ ಎಂ.ಒ.ಮಂಜುನಾಥ ಸ್ವಾಮಿ ನಾಯಕ 4, ಪಕ್ಷೇತರ ಅಭ್ಯರ್ಥಿ ಎನ್ ಮಲ್ಲಯ್ಯ ಸ್ವಾಮಿ 2 ಸೇರದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ *ಎನ್.ವೈ.ಗೋಪಾಲ ಕೃಷ್ಣ*, ಜ್ಯಾತ್ಯಾತೀತ ಜನತಾ ದಳದ ವೀರಭದ್ರಪ್ಪ , ಆಮ್ ಆದ್ಮಿ ಪಕ್ಷದ ಹರೀಶ್ ನಾಯಕ ಎಸ್.ಟಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ ಟಿ, ಪಕ್ಷೇತರ ಅಭ್ಯರ್ಥಿಗಳಾದ ಓ.ಗೋವಿಂದ, ವೈ.ಹೆಚ್.ಸೂರ್ಯ ಕುಮಾರ್, ಟಿ.ಶಶಿಕುಮಾರ್, ತಿಪ್ಪೇಸ್ವಾಮಿ.ಜಿ ಹಾಗೂ ಹರೀಶ್ ಕುಮಾರ್ ಕೆ.ಪಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
The post ಮೊಳಕಾಲ್ಮೂರು ಏ.20 ರಂದು 10 ನಾಮಪತ್ರ ಸಲ್ಲಿಕೆ: ಒಟ್ಟು 12 ಅಭ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/WYMghz0
via IFTTT