ಚಿತ್ರದುರ್ಗ| ಶಿವಲಿಂಗಾನಂದ ಶ್ರೀಗಳಿಂದ  2025ರ ಹೊಸ ವರ್ಷದ ದಿನ ದರ್ಶಿಕೆ ಬಿಡುಗಡೆ.                   

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 09: ಚಿತ್ರದುರ್ಗ ನಗರದ ಮದಕರಿಪುರದ ಬಳಿಯಲ್ಲಿನ ಶ್ರೀ ಮಂಜುನಾಥ್ ಸ್ವಾಮಿ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯವತಿಯಿಂದ 2025ರ ಹೊಸ ವರ್ಷದ ದಿನ ದರ್ಶಿಕೆಯನ್ನು ಶ್ರೀ ಗುರು ಕಬೀರಾನಂದಶ್ರಮದ
ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಗುರುವಾರ ಮಧ್ಯಾಹ್ನ ಶಾಲೆಯ ಆವರಣದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಮಂಜುನಾಥ್ ಸ್ವಾಮಿ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‍ನ ಗೌರವ ಅಧ್ಯಕ್ಷರು ಹಾಗು ಶ್ರೀ ಮಾತೃಶ್ರೀ
ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಎನ್.ಶಾಂತ ವೆಂಕಟೇಶ್, ಶ್ರೀ ಮಂಜುನಾಥ್ ಸ್ವಾಮಿ ಎಜುಕೇಷನಲ್ ಮತ್ತು ಚಾರಿಟಬಲ್
ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರು, ಹಾಗೂ ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್,
ಶ್ರೀ ಮಂಜುನಾಥ್ ಸ್ವಾಮಿ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‍ನ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಶ್ರೀ ಮಾತೃಶ್ರೀ
ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿ.ಎಲ್.ಪ್ರವೀಣ್, ಆಡಳಿತ ಮಂಡಳಿ ಸದಸ್ಯರಾದ ಶ್ರೀಗೌರಿ, ಕಾವ್ಯಶ್ರೀ, ವಿ.ಎಸ್.ಭುವನ
ಕರಣ್, ಮಹಾಂತೇಶ್, ಎನ್.ಎಮ್ ಪ್ರಶಾಂತ್, ವಸಿಷ್ಠ ಸೇರಿದಂತೆ ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *