Skip to content
  • Tuesday, July 8, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • Sanju Samson: ಐ ಡೋಂಟ್ ನೋ: ಪಂದ್ಯದ ಬಳಿಕ ಮಾತನಾಡಲೂ ಕಷ್ಟಪಟ್ಟ ಸಂಜು ಸ್ಯಾಮ್ಸನ್
Sports

Sanju Samson: ಐ ಡೋಂಟ್ ನೋ: ಪಂದ್ಯದ ಬಳಿಕ ಮಾತನಾಡಲೂ ಕಷ್ಟಪಟ್ಟ ಸಂಜು ಸ್ಯಾಮ್ಸನ್

May 8, 2023
samagrasuddi

ಐಪಿಎಲ್ 2023 ರಲ್ಲಿ ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. 20ನೇ ಓವರ್​ನ 6ನೇ ಎಸೆತದ ನೋ ಬಾಲ್ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ ಎಸ್​ಆರ್​ಹೆಚ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.ರಾಜಸ್ಥಾನ್ 20 ಓವರ್​ಗಳಲ್ಲಿ 214 ರನ್ ಕಲೆಹಾಕಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಷ್ಟಪಟ್ಟರು.ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕಾಮೆಂಟೇಟರ್ ಸ್ಯಾಮ್ಸನ್ ಅವರಿಗೆ 'ನೀವು ಇನ್ನೂ ಹೆಚ್ಚು ರನ್ ಕಲೆಹಾಕಬೇಕಿತ್ತಾ?', ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ಸ್ಯಾಮ್ಸನ್ ಅವರು, ಇದು ಅದ್ಭುತ ಪ್ರಶ್ನೆ, ಆದರೆ ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.ಐಪಿಎಲ್ ನಮಗೆ ಈರೀತಿಯ ಪಂದ್ಯಗಳನ್ನು ಕೊಡುತ್ತದೆ. ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಗೆದ್ದೆವು ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಬ್ಯಾಟಿಂಗ್ ಬಲಿಷ್ಠವಾಗಿದ್ದರೆ ಯಾವುದೇ ತಂಡ ಗೆಲುವು ಸಾಧಿಸಬಹುದಿತ್ತು. ಆದರೆ, ನನಗೆ ಕೊನೆಯ ಓವರ್​ನಲ್ಲಿ ಸಂದೀಪ್ ಮೇಲೆ ನಂಬಿಕೆಯಿತ್ತು. ಹಿಂದಿನ ಪಂದ್ಯದಲ್ಲೂ ಸಿಎಸ್​ಕೆ ವಿರುದ್ಧ ಈರೀತಿಯ ಸಂದರ್ಭದಲ್ಲಿ ಅವರು ಗೆಲುವು ತಂದುಕೊಟ್ಟಿದ್ದರು. ಈ ಬಾರಿ ಕೂಡ ನಮಗೆ ಅವರು ಯಶಸ್ಸು ತಂದುಕೊಟ್ಟರು. ಆದರೆ, ಅದು ನೋ ಬಾಲ್ ಆಯಿತು - ಸಂಜು ಸ್ಯಾಮ್ಸನ್.ಇಂತಹ ವಿಕೆಟ್​ನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಮಾಡಿ ಕಠಿಣ ಟಾರ್ಗೆಟ್ ನೀಡಿದೆವು. ಆದರೆ, ಎಸ್​ಆರ್​ಹೆಚ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಅವರಿಗೆ ಕ್ರೆಡಿಟ್ ಸಲ್ಲಬೇಕು. ಟಾರ್ಗೆಟ್ ಎಷ್ಟೇ ಇದ್ದರೂ ಗೆಲುವು ಸಾಧಿಸಿದಾಗ ಮಾತ್ರ ಖುಷಿ ಆಗುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.ನಿಜ ಹೇಳಬೇಕೆಂದರೆ ಈ ಟೂರ್ನಮೆಂಟ್​ನಲ್ಲಿ ಆಡುವುದು ಸುಲಭವಲ್ಲ. ಪ್ರತಿಯೊಂದು ಪಂದ್ಯ ಕೂಡ ಮುಖ್ಯ, ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಬೇಕು. ನಾವು ಇದಕ್ಕಿಂತ ಉತ್ತಮವಾಗಿ ಕಮ್​ಬ್ಯಾಕ್ ಮಾಡಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದು ಸ್ಯಾಮ್ಸನ್ ಮಾತು.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (35) ಮತ್ತು ಜೋಸ್ ಬಟ್ಲರ್ (95) ಬಿರುಸಿನ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ (ಅಜೇಯ 66) ಹಾಗೂ ಬಟ್ಲರ್ ಹೈದರಾಬಾದ್ ಬೌಲರ್​ಗಳ ಬೆಂಡೆತ್ತು ಅರ್ಧಶತಕ ಸಿಡಿಸಿದರು. ಆರ್​ಆರ್​ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಪರ ಅನ್ಮೋಲ್​ಪ್ರೀತ್ ಸಿಂಗ್ (33), ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47), ಹೆನ್ರಿಚ್ ಕ್ಲಾಸೆನ್ (26), ಗ್ಲೆನ್ ಪಿಲಿಪ್ಸ್ (25) ಹಾಗೂ ಅಬ್ದುಲ್ ಸಮದ್ (ಅಜೇಯ 17) ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.

source https://tv9kannada.com/photo-gallery/cricket-photos/sanju-samson-in-post-match-presentation-after-rr-vs-srh-match-he-said-thats-a-great-question-i-dont-know-vb-572754.html

Tags: samagrasuddi, ಸಮಗ್ರ ಸುದ್ದಿ

Post navigation

Abdul Samad: ನೋ ಬಾಲ್ ಡ್ರಾಮ: ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದ ವಿಡಿಯೋ ನೋಡಿ
ಎಸ್ಎಸ್ಎಲ್ಸಿಯಲ್ಲಿ ಈ ಬಾರಿ ಚಿತ್ರದುರ್ಗಕ್ಕೆ ಮೊದಲ ಸ್ಥಾನ

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi

July 8 : ಇತ್ತೀಚೆಗೆ ರಾಜ್ಯದಲ್ಲಿ ಯೌವನದಲ್ಲಿಯೇ ಹೃದಯಾಘಾತದಿಂದ ಅಕಾಲಿಕ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತೀವ್ರ ಗಂಭೀರತೆ ಪ್ರದರ್ಶಿಸಿ 8 ಮಹತ್ವದ ಆರೋಗ್ಯ ಸಂಬಂಧಿತ ನಿರ್ಧಾರಗಳನ್ನು ಪ್ರಕಟಿಸಿದೆ. ಆರೋಗ್ಯ ಸಚಿವ ಡಾ. ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಈ ನಿರ್ಧಾರಗಳನ್ನು…

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi
Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi

You may Missed

Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi
Health

ಕ್ಷೇಮ-ಕುಶಲ: ನೇತ್ರರಕ್ಷಣೆಯ ಕಡೆಗೆ ನಿಮ್ಮ ನೋಟ ಇರಲಿ.

July 8, 2025
samagrasuddi
Health

Protein Rich Food: ಪ್ರೊಟೀನ್ ಆಹಾರಗಳೆಂದರೆ ಯಾವುವು ಗೊತ್ತೇ?

July 7, 2025
samagrasuddi
Health

“Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?

July 6, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • 🛑 ಬುಧವಾರ ಭಾರತ್ ಬಂದ್ : 25 ಕೋಟಿಗೂ ಅಧಿಕ ಕಾರ್ಮಿಕರು ಸಜ್ಜು | ದೇಶವ್ಯಾಪಿ ಪ್ರತಿಭಟನೆಗೆ ಕರೆ 🛑
  • 🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.
  • 📰 ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಕೇವಲ 33 ಅಂಕ ಸಾಕು: ಪ್ರಥಮ ಭಾಷೆ 125ರಿಂದ 100 ಅಂಕಗಳಿಗೆ ಕಡಿತ?
  • RSA vs ZIM Test | ವಿಯಾನ್ ಡಿಕ್ಲೇರ್: ಸುರಕ್ಷಿತವಾಗಿ ಉಳಿದ ಲಾರಾ ದಾಖಲೆ.
  • ಕ್ಷೇಮ-ಕುಶಲ: ನೇತ್ರರಕ್ಷಣೆಯ ಕಡೆಗೆ ನಿಮ್ಮ ನೋಟ ಇರಲಿ.
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress