ಗೋಧಿ ಅಲ್ಲ… ಈ ಹಿಟ್ಟಿನ ಚಪಾತಿ ತಿಂದರೆ ಮಧುಮೇಹ ಬುಡಸಮೇತ ಗುಣವಾಗುತ್ತೆ!

Healthy flour for diabetes: ಸಾಮಾನ್ಯವಾಗಿ, ನಮ್ಮಲ್ಲಿ ಹೆಚ್ಚಿನವರು ನಮ್ಮ ದೈನಂದಿನ ಆಹಾರದಲ್ಲಿ ಗೋಧಿ ಹಿಟ್ಟಿನ ಚಪಾತಿ ಅಥವಾ ರೊಟ್ಟಿಯನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. ಕೆಲವೊಂದು ಧಾನ್ಯದ ಹಿಟ್ಟನ್ನು ತಿನ್ನುವ ಮೂಲಕ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು.

Healthy flour for diabetes: ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಚಿಂತಿಸುವುದು ಅವಶ್ಯಕ. ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಆಹಾರ ಉಪಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಒಂದು ವೇಳೆ ಪಥ್ಯ ತಪ್ಪಿದರೆ, ಆರೋಗ್ಯವು ಹದಗೆಡುತ್ತದೆ. ಮೂತ್ರಪಿಂಡದ ಕಾಯಿಲೆ ಮತ್ತು ಹೃದಯಾಘಾತದಂತಹ ರೋಗಗಳ ಅಪಾಯವು ಹೆಚ್ಚಾಗುತ್ತದೆ.

ಸಾಮಾನ್ಯವಾಗಿ, ನಮ್ಮಲ್ಲಿ ಹೆಚ್ಚಿನವರು ನಮ್ಮ ದೈನಂದಿನ ಆಹಾರದಲ್ಲಿ ಗೋಧಿ ಹಿಟ್ಟಿನ ಚಪಾತಿ ಅಥವಾ ರೊಟ್ಟಿಯನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. ಕೆಲವೊಂದು ಧಾನ್ಯದ ಹಿಟ್ಟನ್ನು ತಿನ್ನುವ ಮೂಲಕ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಮಧುಮೇಹ ರೋಗಿಗಳಿಗೆ ಕೆಲವು ಆರೋಗ್ಯಕರ ಹಿಟ್ಟನ್ನು ಶಿಫಾರಸು ಮಾಡಿದ್ದಾರೆ.

ಕಡಲೆ ಬೇಳೆಯ ಚಪಾತಿ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಅದರಲ್ಲೂ ಸಕ್ಕರೆ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ನಮ್ಮ ಹಿರಿಯರು ಹೆಚ್ಚಾಗಿ ಜೋಳದ ಹಿಟ್ಟನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಆಹಾರದ ಫೈಬರ್, ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ, ಇದು ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ರಾಗಿ ಹಿಟ್ಟನ್ನು ಮಧುಮೇಹ ರೋಗಿಗಳು ಸಹ ತಿನ್ನಬೇಕು. ಏಕೆಂದರೆ ಇದು ಆಹಾರದ ಫೈಬರ್‌ ನ ಸಮೃದ್ಧ ಮೂಲವಾಗಿದೆ ಮತ್ತು ಪಾಲಿಫಿನಾಲ್‌ಗಳು, ಅಮೈನೋ ಆಮ್ಲಗಳು ಮತ್ತು ಖನಿಜಗಳು ಇದರಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ವಿಶೇಷವಾಗಿದೆ.

ಭಾರತದಲ್ಲಿ, ಜನರು ಹೆಚ್ಚಾಗಿ ರಾಗಿ ರೊಟ್ಟಿ ತಿನ್ನಲು ಇಷ್ಟಪಡುತ್ತಾರೆ. ಇದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. )

Source : https://zeenews.india.com/kannada/health/kannada-health-tips-eat-these-flours-chapati-to-reduce-the-blood-sugar-level-141228

Views: 0

Leave a Reply

Your email address will not be published. Required fields are marked *