ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವದ ಅಂಗವಾಗಿ ಸ್ವಾಮಿಯ ಮುಕ್ತಿ ಬಾವುಟದ ಹರಾಜು ಮಾಡಲಾಗುತ್ತದೆ ಮುಕ್ತಿ ಬಾವುಟದ ಹರಾಜಿನಲ್ಲಿ ಭಾಗವಹಿಸುವವರು ರಥೋತ್ಸವದ ಚಾಲನೆ ಸಮಯ 3 ಗಂಟೆಗೆ ಖುದ್ದು ಹಾಜರಿರಬೇಕೆಂದು ಆಡಳಿತ ಅಧಿಕಾರಿಗಳು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಶಸ್ವಿ ಹರಾಜುದಾರರು ಮೊದಲು ಪಾರ್ಟಿಯಾಗಿ ,ಎರಡನೇ ಪಾರ್ಟಿಯಾಗಿ ಕಾರ್ಯ ನಿರ್ವಹಣೆ ಅಧಿಕಾರಿಯಾಗಿಯೂ ಇರುತ್ತಾರೆ .
ಹರಾಜಿನ ಮೊತ್ತವನ್ನು ಪಾವತಿಸುವ ಬಗ್ಗೆ 100 ರೂಪಾಯಿ ಬೆಲೆಯ ಛಾಪ ಕಾಗದದ ಒಪ್ಪಂದ ಪತ್ರದಲ್ಲಿ ಒಪ್ಪಿ ಒಂದು ಮುಂಗಡ ದಿನಾಂಕದ ಚೆಕ್ ನೀಡಲು ಬದ್ಧರಾಗಿರಬೇಕು. ಹಿಂದಿನ ವರ್ಷ ಮುಕ್ತಿ ಭಾವುಟದ ಹರಾಜಿನಲ್ಲಿ ಭಾಗವಹಿಸಿ ಹರಾಜು ಮೊತ್ತವನ್ನು ಪಾವತಿಸಲು ವಿಳಂಬ ಮಾಡಿರುವ ಭಕ್ತರು, ಹಾಗೂ ವ್ಯಕ್ತಿಗಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1