ಪುಣೆ: ಪಾಳುಬಿದ್ದ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ನೇವಸಾ ತಾಲೂಕಿನ ವಾಕಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಾಣಿಕ್ ಕಾಳೆ, ಸಂದೀಪ್ ಕಾಳೆ, ಅನಿಲ್ ಕಾಳೆ, ಬಾಬುಲ್ ಕಾಳೆ, ಬಾಬಾಸಾಹೇಬ್ ಎಂದು ಗುರುತಿಸಲಾಗಿದೆ. ವಾಕಡಿ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿದ್ದ ಬಾವಿ ಹಾಳು ಬಿದ್ದಿತ್ತು. ಆದರೆ ಇತ್ತೀಚೆಗೆ ಅದನ್ನು ಬಯೋಗ್ಯಾಸ್ ಗುಂಡಿಯಾಗಿ ಪರಿವರ್ತಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಗುಂಡಿಯಲ್ಲಿ ಬೆಕ್ಕು ಬಿದ್ದು ನರಳಾಡುತ್ತಿತ್ತು.
ಅದರ ಚೀರಾಟ ನೋಡಿ, ಗ್ರಾಮದ ಯುವಕ ಬಾಬುಲ್ ಕಾಳೆ ಗುಂಡಿಗೆ ಇಳಿದು ಬೆಕ್ಕನ್ನು ರಕ್ಷಿಸಲು ಮುಂದಾದ. ಆದರೆ, ಆತ ಎಷ್ಟೊತ್ತಾದರೂ ಹೊರಬರಲಿಲ್ಲ. ಇದನ್ನು ಗಮನಿಸಿದ ಇನ್ನೂ ಆರು ಜನರು ಒಬ್ಬರ ನಂತರ ಒಬ್ಬರಂತೆ ಬಾವಿಗೆ ಇಳಿದರು. ಆದರೆ, ಬಯೋಗ್ಯಾಸ್ ಗುಂಡಿಯಲ್ಲಿನ ಮಿಥೇನ್ ಅನಿಲ ಸೇವನೆಯಿಂದ ಉಸಿರುಗಟ್ಟಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬರನ್ನು ರಕ್ಷಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1