Ranji Trophy: ಮಾರಕ ಬೌಲಿಂಗ್, ಬಲಿಷ್ಠ ಬ್ಯಾಟಿಂಗ್​ಗೆ ತತ್ತರಿಸಿದ ರಾಜಸ್ಥಾನ್; ಕರ್ನಾಟಕಕ್ಕೆ 316 ರನ್​ಗಳ ಬೃಹತ್ ಮುನ್ನಡೆ

Ranji Trophy 2023 Karnataka in strong position against rajastan in Elite Group C match

ಮಂಗಳವಾರ ಆಲೂರಿನಲ್ಲಿ ಆರಂಭವಾದ ರಣಜಿ ಟ್ರೋಫಿಯ (Ranji Trophy) ಎಲೈಟ್ ಗುಂಪಿನ ‘ಸಿ’ ಪಂದ್ಯದಲ್ಲಿ ಅಗ್ರ ಎರಡು ತಂಡಗಳಾದ ಕರ್ನಾಟಕ ಮತ್ತು ರಾಜಸ್ಥಾನ (Karnataka vs Rajasthan) ಮುಖಾಮುಖಿಯಾಗಿದ್ದು, ಪಂದ್ಯದಲ್ಲಿ ಕರ್ನಾಟಕ ಬೃಹತ್ ಮುನ್ನಡೆ ಸಾಧಿಸಿದೆ. ಕರ್ನಾಟಕ ಪರ ಅಬ್ಬರದ ಇನ್ನಿಂಗ್ಸ್ ಆಡಿದ ಮನೀಶ್ ಪಾಂಡೆ (Manish Pandey) ಶತಕ ಸಿಡಿಸಿ ಸಂಭ್ರಮಿಸಿದರೆ, ಆಲ್​ರೌಂಡರ್ ಶ್ರೇಯಾಸ್ ಗೋಪಾಲ್ (Shreyas Gopal) ಕೂಡ 95 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಹೊರತಾಗಿ ನಾಯಕ ಮಯಾಂಕ್ ಅರ್ಗವಾಲ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂವರ ಬಲಿಷ್ಠ ಇನ್ನಿಂಗ್ಸ್​ನಿಂದಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 445 ರನ್​ಗಳಿಗೆ ಆಲೌಟ್ ಆಗುವ ಮೂಲಕ 316 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದೆ.

ರಾಜಸ್ಥಾನದ ಕಳಪೆ ಬ್ಯಾಟಿಂಗ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದಿದ್ದ ಯಶ್ ಕೊಠಾರಿ ಕೇವಲ 2 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್​ಗೆ ಮರಳಿದರು. ಬಳಿಕ ಬಂದ ಮಹಿಪಾಲ್ ಲೋಮ್ರೊರ್ ಕೂಡ ಖಾತೆ ತೆರೆಯಲಿಲ್ಲ. ಹೀಗಾಗಿ ತಂಡದ ಮೊತ್ತ ಎರಡಂಕಿ ದಾಟುವುದಕ್ಕೂ ಮುನ್ನವೇ ರಾಜಸ್ಥಾನ ತಂಡ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಒಂದೆಡೆ ತಾಳ್ಮೆಯ ಆಟ ಪ್ರದರ್ಶಿಸಿದ ಕುನಾಲ್ ಸಿಂಗ್ ರಾಥೋಡ್ 33 ರನ್​ಗಳಿಸಿ ತಂಡದ ಪರ ಅತ್ಯಧಿಕ ರನ್​ ಸ್ಕೋರರ್ ಎನಿಸಿಕೊಂಡರು. ಇನ್ನುಳಿದಂತೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಕರಣ್ ಲಂಬ 31 ರನ್​ಗಳ ಇನ್ನಿಂಗ್ಸ್ ಆಡಿದ್ದು ಬಿಟ್ಟರೆ ಮತ್ತ್ಯಾರು ಹೇಳಿಕೊಳ್ಳುವ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ರಾಜಸ್ಥಾನ ತಂಡ ಕೇವಲ 129 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಕರ್ನಾಟಕ ಪರ ಕೌಶಿಕ್ ಹಾಗೂ ವಿಜಯ್ ಕುಮಾರ್ ತಲಾ 4 ವಿಕೆಟ್ ಪಡೆದು ಮಿಂಚಿದರೆ, ವಿದ್ವತ್ ಕಾವೇರಪ್ಪ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Ranji Trophy 2022: 14 ಬೌಂಡರಿ, 11 ಸಿಕ್ಸರ್; ರಣಜಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮನೀಶ್ ಪಾಂಡೆ..!

ಮನೀಶ್ ಪಾಂಡೆ ಶತಕ

ಇನ್ನು ರಾಜಸ್ಥಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಸಮರ್ಥ್​ 8 ರನ್​ಗಳಿಗೆ ಸುಸ್ತಾದರು. ಬಳಿಕ ನಾಯಕ ಮಯಾಂಕ್ ಹಾಗೂ ದೇವದತ್ ಪಡಿಕಲ್ ಅರ್ಧಶತಕದ ಜೊತೆಯಾಟವಾಡಿದರು. ಈ ವೇಳೆ ಪಡಿಕಲ್ 32 ರನ್​ಗಳಿಸಿ ಔಟಾದರೆ, ನಾಯಕ ಮಯಾಂಕ್ 52 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ನಿಖಿನ್ ಜೊಶ್ ಕೂಡ 39 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ಮನೀಶ್ ಪಾಂಡೆ ಶತಕ ಸಿಡಿಸಿದರೆ, ಶ್ರೇಯಸ್ 95 ರನ್​ಗಳಿಸಿ ಶತಕ ವಂಚಿತರಾದರು. ಅಂತಿಮವಾಗಿ ಕರ್ನಾಟಕ ತಂಡ ಮೂರನೇ ದಿನದಾಟದ ಮೊದಲ ಸೆಷನ್​ನಲ್ಲಿ ತನ್ನೆಲ್ಲ ಕಳೆದುಕೊಂಡು 445 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.​

ಗುಂಪಿನಲ್ಲಿ ಕರ್ನಾಟಕ ನಂ.1

ಹಿಂದಿನ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ಗೆಲುವು ಸಾಧಿಸಿದ್ದ ಕರ್ನಾಟಕ 19 ಅಂಕಗಳೊಂದಿಗೆ ಗುಂಪಿನ ಚುಕ್ಕಾಣಿ ಹಿಡಿದಿದೆ. ಇಲ್ಲಿಯವರೆಗೆ ಒಂದು ಗೆಲುವು ಮತ್ತು ಮೂರು ಡ್ರಾಗಳೊಂದಿಗೆ ರಾಜಸ್ಥಾನ 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯವನ್ನು ಕರ್ನಾಟಕ ಗೆದ್ದರೆ ಗುಂಪಿನಲ್ಲಿ ನಂ.1 ಸ್ಥಾನದಲ್ಲಿ ಹಾಗೆಯೇ ಮುಂದುವರೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ranji-trophy-2023-karnataka-in-strong-position-against-rajastan-in-elite-group-c-match-psr-au14-499774.html

Leave a Reply

Your email address will not be published. Required fields are marked *