
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 05 : ದೇಶದ ಸಂಸ್ಕøತಿಯಲ್ಲಿ ಹೆಣ್ಣಿಗೆ ಅಪಾರ ಗೌರವವನ್ನು ನೀಡಲಾಗಿದೆ. ಕುಟುಂಬದಲ್ಲಿ ಪತಿಯು ಸಹ ಅನೇಕ ರೀತಿಯ
ಜವಾಬ್ದಾರಿಗಳನ್ನು ನಿರ್ವಹಿಸುತ್ತಾನೆ. ಹಾಗಾಗಿ ಗಂಡ-ಹೆಂಡತಿ ಮಧ್ಯೆ ಸಾಮರಸ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ ಎಂದು ಶ್ರೀ
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ
ಹೇಳಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ 35ನೇ ವರ್ಷದ ಎರಡನೇ ತಿಂಗಳ ಸಾಮೂಹಿಕ
ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ವಿವಾಹ ಎನ್ನುವುದು ಪವಿತ್ರವಾದ ಸಂಬಂಧ. ಇದ್ದುದರಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸಬೇಕು. ಶರಣು ಎಂದವರಿಗೆ ಮರಣವಿಲ್ಲ. ಕೆಟ್ಟ ಶಬ್ದಗಳನ್ನು ಮಾತನಾಡಬಾರದು, ಇಂದಿನ ಸಂಬಂಧಗಳು ದುರಂತದ ಕಡೆಗೆ ಸಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ, ಸಂಸಾರದಲ್ಲಿ ಹೆಂಡತಿ ಅಂದರೆ ಗುಲಾಮಳು ಎಂದುಕೊಳ್ಳಬಾರದು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮಠ ಎಂದರೆ ಮುರುಘಾಮಠವಾಗಿದೆ. ಮನುಷ್ಯ ಸರಳವಾಗಿ ಬದುಕಬೇಕು. ನವದಂಪತಿಗಳು ಇಂದು ಶ್ರೀಮಠದಲ್ಲಿ ಆದರ್ಶ ವಿವಾಹವಾಗಿ ಕುಟುಂಬಕ್ಕೆ ರಾಜ್ಯಕ್ಕೆ ಮಾದರಿಯಾಗಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು.
ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನ ಸ್ವರ್ಗ ಆಗಬೇಕು. ಅತ್ತೆ-ಸೊಸೆ ಪ್ರೀತಿಯಿಂದ ಮಾತನಾಡಬೇಕು.
ಪ್ರತಿಯೊಬ್ಬರು ಒಬ್ಬರಿಗೊಬ್ಬರು ಗೌರವ ಕೊಡಬೇಕು. ಕುಟುಂಬ, ತಂದೆ-ತಾಯಿ ಎಲ್ಲರನ್ನು ಪ್ರೀತಿಯಿಂದ ನೋಡಬೇಕು. ಪರಸ್ಪರರ
ಮಧ್ಯೆ ದುರಹಂಕಾರ ಮೂಡಬಾರದು ಎಂದರು.
ಗುರುಮಠಕಲ್ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮದುವೆ ಮಾಡಿ ನೋಡು, ಮನೆ ಕಟ್ಟಿ
ನೋಡು ಎಂಬಂತೆ ಎರಡೂ ಕಷ್ಟಗಳೇ. ಆದರೆ ನಮ್ಮಲ್ಲಿ ಸಾವಿರಾರು ವಿವಾಹಗಳಾಗಿವೆ. ಇದರ ಪ್ರಯೋಜನವನ್ನು ಜನರು ಸದ್ಬಳಕೆ
ಮಾಡಿಕೊಳ್ಳಬೇಕು. ಶ್ರೀಮಠವು ಜನರು ತೊಂದರೆ ಅನುಭವಿಸಬಾರದು, ಸಾಲಕ್ಕೆ ಒಳಗಾಗಬಾರದು ಎಂಬ ಸದಾಶಯವನ್ನು
ಹೊಂದಿ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಡೆಸುತ್ತಿದೆ. ಇಂತಹ ಬೃಹತ್ ಅನುಭವ ಮಂಟಪದಲ್ಲಿ ವಿವಾಹ ನೆರವೇರುತ್ತಿದೆ.
ಇದಕ್ಕೆ ಶ್ರೀಗಳೆಲ್ಲರು ಸಾಕ್ಷಿಯಾಗಿದ್ದಾರೆ. ಮಾನವ ಸಂಘಜೀವಿ. ಎಲ್ಲ ಪ್ರಾಣಿಗಳೂ ಸಹ ಒಟ್ಟಿಗೆ ಬಾಳುತ್ತವೆ. ಹಾಗೆಯೇ ಮನುಷ್ಯ
ಒಂಟಿಯಾಗಿ ಬದುಕುವುದು ಸಾಧ್ಯವಿಲ್ಲ. ತನ್ನ ನೋವು ನಲಿವುಗಳನ್ನು ಹಂಚಿಕೊಳ್ಳಬೇಕಾದರೆ ಇತರರ ಜೊತೆ ಸಂಘಜೀವಿಯಾಗಿ
ಬದುಕುವುದನ್ನು ಕಲಿಯಬೇಕು. ಮನುಷ್ಯ ಪರಸ್ಪರ ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 5 ಜೋಡಿಗಳ ವಿವಾಹ ನೆರವೇರಿತು. ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ. ಬಸವಪ್ರಭು ಸ್ವಾಮೀಜಿಯವರನ್ನು ಶ್ರೀ ಮಠದಿಂದ ಹಾಗೂ ಲಿಂಗಾಯತ ನೌಕರರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಲಿಂಗಾಯತ ನೌಕರರ ಸಂಘದ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಕೆ.ಆರ್.ನಗರದ ಶರಣೆ ಜಯದೇವಿತಾಯಿ,
ಬಸವಕಲ್ಯಾಣದ ಶರಣೆ ಚಿನ್ಮಯಿತಾಯಿ ಮೊದಲಾದವರು ಭಾಗವಹಿಸಿದ್ದರು. ಬೆಂಗಳೂರಿನ ಎಂ.ಸಿ.ಕೆ.ಎಸ್. ಫೌಂಡೇಶನ್,
ಕಾರ್ಯಕ್ರಮದ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ವಿಜಯದೇವರು ಸ್ವಾಗತಿಸಿದರು. ಟಿ.ಪಿ. ಜ್ಜ್ಞಾನಮೂರ್ತಿ ನಿರೂಪಿಸಿದರು.