ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಆಗಾಗ ಮಾತಿಗೆ ಮಾತು, ತಿರುಗೇಟು ನಡೆಯುತ್ತಲೇ ಇರುತ್ತವೆ. ಅದರ ಜೊತೆಗೆ ಟ್ವಿಟ್ಟರ್ ಟಾಂಗ್ ಕೂಡ ನಡೆಯುತ್ತಿರುತ್ತೆ. ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಡೆಟಾಲ್ ಹಾಗೂ ಹಾರ್ಪಿಕ್ ಜಟಾಪಟಿ ನಡೆದಿದೆ.
ಇತ್ತೆಚೆಗೆ ನಿರ್ಮಲಾ ಸೀತರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಿದ್ದರು. ಈ ಬಜೆಟ್ ಅನ್ನು ವಿರೋಧ ಪಕ್ಷದ ನಾಯಕರು ಸಾಮಾನ್ಯ ಟೀಕೆ ಮಾಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆಗ ನಿರ್ಮಲಾ ಸೀತರಾಮನ್, ಮೋದಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಕಾಂಗ್ರೆಸ್ ಸಂಸದರು ಡೆಟಾಲ್ ಹಾಕಿಕೊಂಡು ಮುಖ ತೊಳೆದುಕೊಳ್ಳಲಿ ಎಂದು ಗರಂ ಆಗಿದ್ದರು.
ಇದೀಗ ನಿರ್ಮಲಾ ಸೀತರಾಮನ್ ಅವರ ಮಾತಿಗೆ ರಾಷ್ಟ್ರೀಯ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಥೆ ತಿರುಗೇಟು ನೀಡಿದ್ದಾರೆ. ಟ್ವೀಟ್ ಮೂಲಕ, ನಿರ್ಮಲಾ ಸೀತರಾಮನ್ ಅವರೇ ನಾವೂ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಮುನ್ನ ಡೆಟಾಲ್ ಹಾಕಿಕೊಂಡು ಮುಖ ತೊಳೆದುಕೊಳ್ಳಿ ಎಂದಿದ್ದೀರಿ. ನಿಮ್ಮ ಸರ್ಕಾರ ಅದಾನಿ ವಿಚಾರದಲ್ಲಿ ಮಾಡಿದ್ದೇನು..? ಅದಾನಿ ಎಪಿಸೋಡಿನಲ್ಲಿ ನೀವೂ ಹಾರ್ಪಿಕ್ ಹಾಕಿಕೊಂಡೇ ತೊಳೆದುಕೊಳ್ಳಬೇಕೆನೋ ಎಂದಿದ್ದಾರೆ.
The post ನಿರ್ಮಲಾ ಸೀತರಾಮನ್ ಗೆ ಹಾರ್ಪಿಕ್ ಬಳಸಲು ಕಾಂಗ್ರೆಸ್ ಸೂಚನೆ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/j3tYmaM
via IFTTT