ಚಿತ್ರದುರ್ಗ ಅ. 13 :
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸೋಮವಾರ ಚಿತ್ರದುರ್ಗನ್ನಾಳಿದ ನಾಡ ದೊರೆ ಮದಕರಿನಾಯಕರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಪಾರ್ಟಿಯ ಮುಖಂಡರು ವಿವಿಧ ಘಟಕಗಳ ಪದಾಧಿಕಾರಿಗಳು ಅಭಿಮಾನಿಗಳು ನಾಡದೊರೆ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು, ಇದಾದ ನಂತರ ಚಿತ್ರದುರ್ಗದಲ್ಲಿನ ಮದಕರಿ ವೃತ್ತದಲ್ಲಿರುವ ಮದಕರಿ ನಾಯಕರ ಪ್ರತಿಮೆಗೆ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎ.ಮುರಳಿ, ಬಿಜೆಪಿ ಮುಖಂಡರಾದ ರಘುಮೂರ್ತಿ,ಯುವ ಮುಖಂಡರಾದ ಡಾ.ಸಿದ್ಧಾರ್ಥ ಗುಡಾರ್ಪಿ, ಎಸ್.ಟಿ. ಮೋರ್ಚಾದ ಮುಖಂಡರಾದ ಪಾಪೇಶ್ ನಾಯಕ್, ಉಮೇಶ್ ಕಾರಜೋಳ, ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ಶಿವಣ್ಣ, ರಾಜ್ಯ ಎಸ್.ಟಿ. ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಕವನ ರಾಘವೇಂದ್ರ, ಲೋಕೇಶ್, ನಾಗರಾಜ್, ವೆಂಕಟೇಶ್, ಸವೀನ್ ಸುರೇಶ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.
Views: 23