ಮೂಲಂಗಿಯನ್ನು ನಿತ್ಯವೂ ಬಳಕೆ ಮಾಡಿದರೆ, ಆಗ ಅದರಿಂದ ನಾನಾ ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗಲಿದೆ.

ಸ್ವಲ್ಪ ಘಾಟು ಸುವಾಸನೆ ಹಾಗೂ ಭಿನ್ನ ರುಚಿ ಹೊಂದಿರುವ ಮೂಲಂಗಿಯನ್ನು ಇಷ್ಟಪಡುವವರ ಸಂಖ್ಯೆ ತುಂಬಾ ಕಡಿಮೆ. ಆದರೆ ಈ ಅದ್ಭುತವಾದ ತರಕಾರಿಯಲ್ಲಿ ಮಾತ್ರ ಪೋಷಕಾಂಶಗಳು ತುಂಬಿ ತುಳುಕುತ್ತಿದೆ. ಇದು ಬಿಳಿ ಹಾಗೂ ಗುಲಾಬಿ ಬಣ್ಣದಲ್ಲಿ ಲಭ್ಯವಿದ್ದು, ಇದನ್ನು ಸಲಾಡ್, ಪಲ್ಯ ಹಾಗೂ ಸಾಂಬಾರಿನಲ್ಲಿ ಬಳಕೆ ಮಾಡಬಹುದು.
ಮೂಲಂಗಿಯಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಇದನ್ನು ನಿತ್ಯವೂ ಅರ್ಧ ಕಪ್ ಸೇವನೆ ಮಾಡಿದರೆ ಆಗ ಇದರಲ್ಲಿನ ವಿಟಮಿನ್ ಸಿ ಮಾತ್ರವಲ್ಲದೆ, ಇತರ ಹಲವಾರು ಆರೋಗ್ಯ ಲಾಭಗಳು ಸಿಗುವುದು. ವಿಶೇಷವಾಗಿ ಮಳೆಗಾಲದಲ್ಲಿ ಈ ತರಕಾರಿಯನ್ನು ಸೇವನೆ ಮಾಡುವುದರಿಂದ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ಮಳೆಗಾಲದಲ್ಲಿ ಎದುರಾಗುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ನಮ್ಮಿಂದ ದೂರವಾಗುತ್ತವೆ.
ಪ್ರತಿರೋಧಕ ಶಕ್ತಿ ವೃದ್ಧಿ
ಮೂಲಂಗಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಸಾಮಾನ್ಯ ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡಿ, ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವುದು. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ, ಆಗ ಇದರಿಂದ ಹಾನಿಕಾರಕ ಫ್ರೀರ್ಯಾಡಿಕಲ್ ಬೆಳವಣಿಗೆ, ಉರಿಯೂತ ಕಡಿಮೆ ಆಗುವುದು ಮತ್ತು ವಯಸ್ಸಾಗುವ ಲಕ್ಷಣಗಳನ್ನು ನಿಯಂತ್ರಿ ಸುವುದು.
ತೂಕ ಇಳಿಸುವಲ್ಲಿ ನೆರವಾಗುತ್ತದೆ
ತೂಕ ಇಳಿಸಬೇಕೆಂದು ಬಯಸುವವರು ತಪ್ಪದೆ ಮೂಲಂಗಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಲೇಬೇಕು. ಯಾಕೆಂದರೆ ಇದು ತೂಕ ಇಳಿಕೆಗೆ ಸಹಕಾರಿ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ತೂಕ ಇಳಿಸಲು ಪರೋಕ್ಷವಾಗಿ ನೆರವಾಗಲಿದೆ.
ಜೀರ್ಣಕ್ರಿಯೆಗೆ ಸಹಕಾರಿ
- ಆರೋಗ್ಯ ತಜ್ಞರು ಹೇಳುವ ಪ್ರಕಾರ ಈ ತರಕಾರಿಯಲ್ಲಿ ಕರಗುವ ಮತ್ತು ಕರಗದಿರುವ ನಾರಿನ ಅಂಶ ಕಂಡು ಬರುವುದರಿಂದ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.
- ವಿಶೇಷವಾಗಿ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯನ್ನು ಹೋಗ ಲಾಡಿಸುವಲ್ಲಿ ಈ ತರಕಾರಿ ತುಂಬಾನೇ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆಗೆ ಬೇಕಾಗಿರುವಂತಹ ಪಿತ್ತರಸ ಉತ್ಪತ್ತಿಯನ್ನು ಇದು ವೃದ್ಧಿ ಸುವುದು.
ಬಿಪಿ ಕಾಯಿಲೆಯನ್ನು ನಿಯಂತ್ರಿಸುತ್ತದೆ
- ಮೂಲಂಗಿಯಲ್ಲಿ ದೇಹದ ರಕ್ತ ಸಂಚಾರ ಏರುಪೇರಾಗದಂತೆ ನೋಡಿಕೊಳ್ಳುವ ಮತ್ತು ಹೃದಯದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ರಕ್ತದ ಒತ್ತಡ ಏರುಪೇರಾಗದಂತೆ ನೋಡಿಕೊಳ್ಳುವ ಆರೋಗ್ಯಕಾರಿ ಗುಣಲಕ್ಷಣಗಳು ಕಂಡು ಬರುವುದರಿಂದ, ಈಗಾಗಲೇ ಬಿಪಿ ಕಾಯಿಲೆಯಿಂದ ಬಳಲುತ್ತಿರುವವರು, ಮೂಲಂಗಿಯನ್ನು ತಮ್ಮ ಆಹಾರ ಪದ್ಧತಿಯನ್ನು ಸೇರಿಸಿಕೊಂಡರೆ ತುಂಬಾನೇ ಒಳ್ಳೆಯದು.
- ಇನ್ನು ಈ ತರಕಾರಿಯ ಬಗ್ಗೆ ತಜ್ಞರು ಹೇಳುವ ಪ್ರಕಾರ ಬಾಳೆ ಹಣ್ಣಿನ ಹಾಗೆ ಪೊಟ್ಯಾಶಿಯಂ ಅಂಶ ಮೂಲಂಗಿಯಲ್ಲೂ ಕಂಡು ಬರುವು ದರಿಂದ, ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ಹೃದಯದ ಕಾರ್ಯಚಟುವಟಿಕೆ ಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತದೆ.
ಹೃದಯದ ಆರೋಗ್ಯಕ್ಕೆ
ಮೂಲಂಗಿಯಲ್ಲಿ ಆಂಥೋಸಯಾನಿನ್ ಗಳು ಎನ್ನುವ ಅಂಶವಿದ್ದು, ಇದು ಉರಿಯೂತ ತಗ್ಗಿಸುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಲು ಸಹಕಾರಿ.
ಆರೋಗ್ಯಕಾರಿ ಚರ್ಮಕ್ಕೆ
ವಿಟಮಿನ್ ಸಿ ಯಂತಹ ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಮೂಲಂ ಗಿಯು ಚರ್ಮಕ್ಕೆ ಆಗುವ ಹಾನಿ ತಪ್ಪಿಸುವುದು, ವಯಸ್ಸಾಗುವ ಲಕ್ಷಣ ಗಳನ್ನು ತಡೆಯುವುದು ಮತ್ತು ಆರೋಗ್ಯಕಾರಿ ಚರ್ಮಕ್ಕೆ ಇದು ಲಾಭಕಾರಿ.
ವಿಟಮಿನ್ ಸಿ ಸಮೃದ್ಧ
ವಿಟಮಿನ್ ಸಿ ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಜೀವಕೋಶ ಗಳಿಗೆ ಆಗುವ ಹಾನಿ ತಪ್ಪಿಸುವುದು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿ ಸುವುದು. ಇದು ಆರೋಗ್ಯಕಾರಿ ಚರ್ಮ ಮತ್ತು ಕಣ್ಣಿಗೆ ಒಳ್ಳೆಯದು.