ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 28 ಜಿಲ್ಲಾ ಜೆ.ಡಿ.ಎಸ್ ಘಟಕದವತಿಯಿಂದ ರಾಜ್ಯದಲ್ಲಿ ಆಡಳಿತರೂಢವಾಗಿರುವ ಕಾಂಗ್ರೆಸ್ ಸರ್ಕಾರದ ಲಂಚಗುಳಿತನ, ಭ್ರಷ್ಟಚಾರ,ಆಡಳಿತ ವೈಪಲ್ಯ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವರಾದ ಜಮೀರ್ ಅಹಮದ್ ರವರ ವಿರುದ್ಧ ಆಪಾದನೆ ಮಾಡಿದ್ದಾರೆ ಭಷ್ಟಚಾರ ಹೊತ್ತಿರುವ ಸಚಿವ ಜಮೀರ್ಅಹಮದ್ಯವರನ್ನು ಸಚಿವ ಸಂಪುಟದಿಂದ ವಜಾ ಕುರಿತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ದಿನಾಂಕ 30-06-2025ರ ಸೋಮವಾರ ಬೆಳ್ಳಿಗ್ಗೆ 11ಗಂಟೆಗೆ ಚಿತ್ರದುರ್ಗ ಪ್ರವಾಸಿ ಮಂದಿರದಿಂದ ಡಿ.ಸಿ.ಕಛೇರಿವರೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜೆ ಡಿ ಎಸ್ ಘಟಕದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ನಾಯಕ ತಿಳಿಸಿದ್ದಾರೆ.
ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಷರಾದ ಎಂ ಜಯಣ್ಣ ವಹಿಸಲಿದ್ದು, ಪ್ರತಿಭಟನೆಯಲ್ಲಿ ಬಿ. ಕಾಂತರಾಜ್, ಡಿ ಯಶೋಧರ್, ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿಗಳಾದ ರವೀಂದ್ರಪ್ಪ, ರವೀಶ್ ತಿಪ್ಪೇಸ್ವಾಮಿ ವೀರಭದ್ರಪ್ಪ ಜಿಲ್ಲಾಕಾರ್ಯಧ್ಯಕ್ಷರಾದ ಜಿ.ಬಿ. ಶೇಖರ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ ಹನುಮಂತ ರಾಯಪ್ಪ, ಪರಮೇಶ್ವರಪ್ಪ , ಗಣೇಶ ಮೂರ್ತಿ , ಕರಿಬಸಪ್ಪ ಪಿ ಟಿ ತಿಪ್ಪೇಸ್ವಾಮಿ, ವಿವಿಧ ಘಟಕಗಳ ಅಧ್ಯಕ್ಷರಾದ ಲಲಿತಾ ಕೃಷ್ಣಮೂರ್ತಿ ಗೀತಮ್ಮ ಪ್ರತಾಪ ಜೋಗಿ ಲಿಂಗರಾಜ್ ಪರಮೇಶ್ ಅಬ್ಬು ಇತರರು ಭಾಗವಹಿಸುವರು
ಪಕ್ಷದ ಎಲ್ಲಾ ಘಟಕ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೂಳಿಸಬೇಕೆಂದು ಮನವಿ ಮಾಡಿದ್ದಾರೆ.