ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಮಘಾ, ಯೋಗ : ಧೃತಿ, ಕರಣ : ಬವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:45 – 09:22, ಯಮಘಂಡ ಕಾಲ 10:59 – 12:36, ಗುಳಿಕ ಕಾಲ 14:13 – 15:50.
ಮೇಷ ರಾಶಿ: ಭೂಮಿಯ ಮಾರಾಟದ ವಿಚಾರದಲ್ಲಿ ವಿಳಂಬವಾಗಲಿದೆ. ಕೆಲವು ಸಂಗತಿಗಳ ವಿಚಾರದಲ್ಲಿ ನೀವು ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಇಂದು ನಿಮ್ಮ ಪರೀಕ್ಷೆಯ ಕಾಲ. ಅದಕ್ಕೆ ಯೋಗ್ಯವಾದ ಉತ್ತರವನ್ನು ಕೊಡುವ ಭರದಲ್ಲಿ ಅವಘಡಗಳು ಆಗಬಹುದು. ಇಂದು ನೀವು ಧೈರ್ಯದಿಂದ, ಹೆದರದೇ ಕೆಲಸ ಮಾಡುವಿರಿ. ನಿಮ್ಮ ವಿರುದ್ಧ ಮಾತನಾಡುವವರಿಗೆ ಯೋಗ್ಯವಾದ ಉತ್ತರವನ್ನು ಕೊಡುವಿರಿ. ಉದ್ಯೋಗದಲ್ಲಿ ವಿಶ್ವಾಸಾರ್ಹವಾಗಿ ಕೆಲಸವನ್ನು ನಿರ್ವಹಿಸಿ. ಪರರ ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ಅನುಕರಣೆಗಿಂತ ಅನುಸರಣೆ ಬಹಳ ಮುಖ್ಯವಾದ ಸಂಗತಿ. ಮಕ್ಕಳ ಬೇಡಿಕೆಗಳನ್ನು ಈಡೇರಿಸಲು ಸೋಲುವಿರಿ. ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗಲಿವೆ. ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಜ್ವರದಂಥ ಅನಾರೋಗ್ಯ ಸಮಸ್ಯೆಗಳು ಬರಬಹುದು. ಯಾರ ಬಗ್ಗೆಯೂ ಪೂರ್ವಾಗ್ರಹಬುದ್ಧಿಯನ್ನು ಬಿಡುವುದು ಒಳ್ಳೆಯದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು.
ವೃಷಭ ರಾಶಿ: ಅಲ್ಪ ಕಾಲ ಹಾಗೂ ದೀರ್ಘಕಾಲದ ಆದಾಯದ ಕೆಲಸವನ್ನು ಮತ್ತು ಯೋಜನೆಯನ್ನು ಮಾಡುವಿರಿ. ನಿಮಲ್ಲಿ ಎಲ್ಲವೂ ಇದ್ದರೂ ಕೊರತೆ ಎಂಬಂತೆ ಇರುವಿರಿ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಕ್ಕಳ ವಿಚಾರವಾಗಿ ಬ್ಯಾಂಕ್ ನಲ್ಲಿ ಸಾಲಮಾಡಬೇಕಾಗಿಬರಬಹುದು. ಮಾಡಬೇಕಾಗಬಹುದು. ಇನ್ನೊಬ್ಬರ ವರ್ತನೆಯಿಂದ ನಿಮ್ಮ ಮನಸ್ಸು ಹಗುರಾಗುವುದು. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಆರ್ಥಿಕವಾಗಿ ಸಬಲರಾಗಲು ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಇಂದು ಹೆಚ್ಚಿನ ಕೆಲಸವನ್ನು ಭಯದಲ್ಲಿಯೇ ಮಾಡುವಿರಿ. ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಸರಳತೆಯನ್ನು ರೂಢಿಸಿಕೊಳ್ಳುವಿರಿ. ಎಲ್ಲವನ್ನೂ ಅನುಮಾನ ಕನ್ನಡಕವನ್ನು ಹಾಕೊಕೊಂಡು ನೋಡಬೇಡಿ. ಬರಲಿರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮ ಹೊಣೆಗಾರಿಕೆ ಕಡಿಮೆ ಆದಂತೆ ಅನ್ನಿಸುವುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ಅನ್ಯರ ಜೊತೆ ಸಮಾನಸ್ಥಾನವನ್ನು ಗಳಿಸುವುದು ಕಷ್ಟವಾಗುವುದು.
ಮಿಥುನ ರಾಶಿ: ದುಡಿಯುವ ಮನಸ್ಸಿಲ್ಲ, ಸಾಲವೂ ಏರಿಕೆಯಾಗಿಲಿದೆ. ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ಇಂದು ನಿಮ್ಮ ಸಂಸಾರದ ಬಗ್ಗೆ ಯಾರ ಬಳಿಯಾದರೂ ಹಂಚಿಕೊಳ್ಳಬಯಸುವಿರಿ. ಬದಲಾವಣೆಯನ್ನು ಇಷ್ಟಪಡಲಿದ್ದೀರಿ ನೀವಿಂದು. ನಿಮ್ಮೊಳಗಿನ ಆತಂಕಕ್ಕೆ ಮೌನವೇ ಕೊನೆಯ ದಾರಿ ಎನಿಸುವುದು. ಮನೆಯಲ್ಲಿ ಅಗತ್ಯ ಇರುವ ಕೆಲಸಗಳನ್ನು ಮಾಡಿ ಮುಗಿಸುವಿರಿ. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ಭಾಗವಹಿಸುವಿರಿ. ಪುಣ್ಯಸ್ಥಳಗಳಿಗೆ ಹೋದರೆ ಮನಸ್ಸಿಗೆ ಸಂತೋಷವಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯದ ಸೂಚನೆ ಸಿಗಬಹುದು. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಸಹಾಯಕ್ಕೆ ಕೃತಜ್ಞತೆ ಇರಲಿ. ನೀವು ಪ್ರೇಮಿಗಳಿಗೆ ದೂರವಾಗುವ ಸಾಧ್ಯತೆ ಇದೆ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ. ಏಕಕಾಲಕ್ಕೆ ಎಲ್ಲವೂ ನಿಮ್ಮದಾಗದು.
ಕರ್ಕಾಟಕ ರಾಶಿ: ಪ್ರೇಯಸಿಯ ಭಾವನೆಗೆ ಸ್ಪಂದಿಸುವಿರಿ. ನಿಮಗೆ ಅವಶ್ಯಕ ವಸ್ತುಗಳ ಬಗ್ಗೆ ಅತಿಯಾದ ಇಚ್ಛೆ ಇರಲಿದೆ. ಮೇಲಿನಿಂದ ಬಿದ್ದು ಪೆಟ್ಟುಮಾಡಿಕೊಳ್ಳುವಿರಿ. ನೇರವಾದ ಮಾತುಗಳಿಂದ ಬೇರೆಯವರಿಗೆ ನೋವುಂಟಾಗಬಹುದು. ಹೇಳಬೇಕಾದುದನ್ನು ಹೇಳುವರೀತಿಯಲ್ಲಿಯೇ ಹೇಳಿ ಮೇಲಿನಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹುದು. ಓರ್ವ ಅಪರಿಚಿತನನ್ನು ನೀವಿಂದು ಪ್ರೀತಿಸಲು ಆರಂಭಿಸುವಿರಿ. ನಿಮ್ಮೊಳಗಿನ ಕಲಾವಿದನ ಪರಿಚಯವಾಗುವುದು. ಅನಗತ್ಯ ಚರ್ಚೆಗಳಿಗೆ ಅವಕಾಶವನ್ನು ನೀಡಿ ವೈಮನಸ್ಯವನ್ನು ತಂದುಕೊಳ್ಳಬೇಡಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಅನವಶ್ಯಕ ಸಲಹೆಗಳನ್ನು ಕೊಡಲು ಬರಬಹುದು. ಪ್ರತ್ಯುತ್ತರಗಳನ್ನು ನೀಡುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವ ಮನಸ್ಸು ಮಾಡುವರು. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ಎಲ್ಲ ಸಮಯಕ್ಕೂ ನಿಮಗೆ ಸಹಕಾರ ಸಿಗುತ್ತದೆ ಎಂಬ ಯೋಚನೆ ಬೇಡ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಮನೆಯ ಕೆಲಸವು ಇಂದು ಬಹಳ ಆಯಾಸವನ್ನು ಕೊಡಬಹುದು.
ಸಿಂಹ ರಾಶಿ: ವಾಣಿಜ್ಯ ವಾಹನಗಳ ಸಾಗಾಟಗಾರರಿಗೆ ತೊಂದರೆ. ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ನಿಮ್ಮ ವಿವಾಹದ ಪ್ರಸ್ತಾಪವು ನಿಮಗೆ ಖುಷಿ ಕೊಡುವುದು. ಇಂದು ಏಕಾಗ್ರತೆಯ ಕೊರತೆ ಕಾಣಿಸಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಬೇಸರವಾಗಿ ಮನೆಯಲ್ಲಿ ಕಲಹವು ಆಗಬಹುದು. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಬಹುದು. ನಿಮಗೆ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ನಿಮ್ಮ ವ್ಯವಹಾರಗಳಿರಲಿ. ಸ್ಪರ್ಧಾತ್ಮಕ ಮನೋಭಾವದಿಂದ ಬೇಸರವಾಗಲಿದೆ. ಇಲ್ಲವಾದರೆ ಅಪಮಾನಕ್ಕೆ ಒಳಗಾಗಬೇಕಾದೀತು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಬೇಡಿ. ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಯೋಗ್ಯವಾದ ಮಾತುಗಳಿಂದ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ಆಪತ್ಕಾಲದಲ್ಲಿ ಸಹಕಾರ ಸಿಗಲಿದೆ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು.
ಕನ್ಯಾ ರಾಶಿ: ನಿಮ್ಮ ತರ್ಕಬದ್ದರವಾದ ಊಹೆಯಿಂದ ಎಲ್ಲವನ್ನೂ ಸರಿಯಾಗಿ ಕಂಡುಹಿಡಿಯುವಿರಿ. ನಿಮ್ಮ ಮೇಲೆ ಕಳ್ಳತನದ ಮಾತುಗಳು ಕೇಳಿಬರಬಹುದು. ನಿಮ್ಮ ಮೇಲಧಿಕಾರಿಗಳನ್ನು ನಿಮ್ಮ ಕಡೆಗೆ ಇರುವಂತೆ ನೋಡಿಕೊಳ್ಳುವಿರಿ. ಯಾವುದಕ್ಕೂ ಪ್ರಯಾಣದಲ್ಲಿ ಜಾಗರೂಕರಾಗಿ. ನಡೆದಾಡುವಾಗಲೂ ಸುತ್ತ ನೋಡಿಕೊಂಡು ಹೆಜ್ಜೆ ಇಡಿ. ಪ್ರಭಾವೀ ವ್ಯಕ್ತಿಗಳು ನಿಮ್ಮ ಜೊತೆ ಸಲಹೆಗೆ ಬರಬಹುದು. ನಿರಪರಾಧಿಯಾಗಲು ಸಮಯವನ್ನೂ ತೆಗದೆಕೊಳ್ಳಬೇಕಾದೀತು. ಉನ್ನತ ಹುದ್ದೆಗೆ ಹೋಗುವ ಅವಕಾಶವಿರಬಹುದು. ತಾಳ್ಮೆಯಿಂದ ಕಾರ್ಯದಲ್ಲಿ ತೊಡಗಿದರೆ ಕೆಲಸವು ಮುಕ್ತಾಯವಾದಂತೆ. ಮನೆಯ ನಿರ್ಮಾಣವನ್ನು ಇತರರಿಗೆ ವಹಿಸಿಕೊಡುವಿರಿ. ಇಂದು ನಿಮಗೆ ಜನರಿಂದ ಪ್ರಶಂಸೆ ಸಿಗಬಹುದು. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಯಾರನ್ನೋ ಹೊಗಳಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ.
ತುಲಾ ರಾಶಿ: ಆಸ್ತಿಯ ಬಗೆಗಿನ ಭಿನ್ನಾಭಿಪ್ರಾಯಕ್ಕೆ ಮನೆಯಿಂದ ದೂರ ಉಳಿಯುವ ಸನ್ನಿವೇಶ ಬರಲಿದೆ. ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಇರಲಿವೆ. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಹೊಸ ಕೆಲಸದಲ್ಲಿ ಗೊಂದಲಗಳು ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಕಾರ್ಯಗಳನ್ನು ಹಿಂಜರಿಕೆ ಇಲ್ಲದೇ ಮಾಡುವಿರಿ. ಪ್ರದರ್ಶನ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ದೂರದ ಮಿತ್ರರು ನಿಮಗೆ ಅಗತ್ಯವಿರುವ ಸಹಕಾರವನ್ನು ನೀಡುವರು. ಶ್ರಮದ ಕೆಲಸವು ಆಯಾಸವನ್ನು ತರಲಿದೆ. ಸಾಧ್ಯವಾದಷ್ಟು ಶಿಸ್ತನ್ನು ಬೆಳೆಸಿಕೊಳ್ಳಿ. ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗಿ ಬರಬಹುದು. ತಪ್ಪಿಸಿಕೊಳ್ಳಲೂ ಕಷ್ಟವಾದೀತು. ಹೆಚ್ಚಿನ ಆದಾಯವು ಅನಿವಾರ್ಯವಾಗಿದ್ದು, ಆದಾಯದ ಮೂಲವನ್ನು ಹುಡುಕುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ಉದ್ವೇಗದಲ್ಲಿ ಇರುವಂತೆ ಕಾಣಿಸುವುದು.
ವೃಶ್ಚಿಕ ರಾಶಿ: ನಿಮಗೆ ಸಹಾಯ ಮಾಡಲು ಬಂದವರು ನಿಮ್ಮನ್ನು ಬೆಳೆಯಲು ಬಿಡರು. ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ವಾವಲಂಬಿಯಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ನಿಮ್ಮ ಉದ್ದೇಶಗಳನ್ನು ಬಿಟ್ಟುಕೊಡಬೇಡಿ. ಅದಕ್ಕೆ ಅಡ್ಡಗಾಲು ಹಾಕಿಯಾರು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಪ್ರಾಮಾಣಿಕತೆ ಬೆಲೆ ಸಿಗಲಾರದು. ನಿಮ್ಮ ಮೇಲಧಿಕಾರಿಗಳು ನಿಮಗೆ ಏನನ್ನೋ ಹೇಳಲಿದ್ದಾರೆ ಎಂದು ಅನ್ನಿಸಬಹುದು. ಮಕ್ಕಳ ಜೊತೆ ಕಾಲವನ್ನು ಕಳೆದು ಸಂತೋಷಪಡುವಿರಿ. ಸಮಯವನ್ನು ವ್ಯರ್ಥಮಾಡದೇ ಸದುಪಯೋಗದ ಬಗ್ಗೆ ಗಮನಹರಿಸಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ.
ಧನು ರಾಶಿ: ಯಾರ ಮಾತನ್ನೇ ಕೇಳಿದರೂ ಕೊನೆ ನಿರ್ಧಾರ ನಿಮ್ಮದೇ. ಇಂದು ನೀವು ಮನೆಯನ್ನು ಸುಂದರವಾಗಿಡಲು ತೊಡಗುವಿರಿ. ಮಕ್ಕಳಿಂದ ನಿಮಗೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಉದ್ಯೋಗದ ಸ್ಥಾನದಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ನಿಮಗಾಗದವರು ಹರಡುವರು. ಸಾಹೋದರ್ಯ ಅಧಿಕ ಕಾಲ ಉಳಿಯದು. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ಪ್ರಯಾಣದಲ್ಲಿ ಆದ ಪರಿಚಯವು ಮುಂದುವರಿಯುವುದು. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ಕೋಪವನ್ನು ನಿಯಂತ್ರಿಸಿಕೊಂಡು, ನಿಮ್ಮ ಮಾತಿನಲ್ಲಿ ಎಂದಿನ ಮಾರ್ದವವನ್ನು ಇಟ್ಟುಕೊಳ್ಳಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು.
ಮಕರ ರಾಶಿ: ನಾಳೆ ಮಾಡುವುದಕ್ಕಾಗಿ ಯಾವ ಕೆಲಸವನ್ನೂ ಮುಂದೂಡುವುದು ಬೇಡ. ಇಂದೇ ಮುಗಸಿಲು ಪ್ರಯತ್ನಿಸಿ. ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ನೀವು ಇಂದು ಸಾಲವನ್ನು ಪಡೆಯಲು ಮಾಡಿದ ಪ್ರಯತ್ನವು ಯಶಸ್ವಿಯಾಗುವುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಬಹುದು. ಯಾವುದ ಇಷ್ಟವಾಗದೋ ಅದೇ ಪತನಕ್ಕೆ ಕಾರಣವಾಗಲಿದೆ. ಮಾಡಿದ ಕೆಲಸಕ್ಕೆ ಕೂಡಲೆ ಫಲ ಸಿಗಬೇಕು ಎನ್ನುವ ವೇಗದಿಂದ ಹೊರಬರುವುದು ಉತ್ತಮ. ಯಾರಾದರೂ ಚುಚ್ಚಿ ಮಾತನಾಡಬಹುದು. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಬರುವುದು. ಕೊನೆಗೆ ಅನುಭವಿಸುವವರು ತಾವೇ ಆಗಿರುತ್ತೀರಿ. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಉದ್ಯಮಿಗಳ ಜೊತೆ ಇಂದು ಕಾಲ ಕಳೆಯುವಿರಿ.
ಕುಂಭ ರಾಶಿ: ಸ್ವಾಭಿಮಾನಕ್ಕೆ ಸಿಗುವುದನ್ನು ಮಾತ್ರ ಪಡೆಯಿರಿ. ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಆಲಸ್ಯವು ಒಳ್ಳೆಯದಲ್ಲ. ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ಆಲೋಚನೆ ಇರಲಿ. ಕೊಟ್ಟ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಗುರಿಯ ಸಾಧನೆಗೆ ಆಲಸ್ಯ ಅಡ್ಡಿಯಾಗಬಹುದು. ಎಲ್ಲರನ್ನೂ ಬಿಟ್ಟು ದೂರದಲ್ಲಿ ಇರುವುದುವನಿಮಗೆ ಇಷ್ಟವಾಗದು. ಕಚೇರಿಯಲ್ಲಿ ಆಗುವ ಸಣ್ಣ ತಪ್ಪೂ ಬೇರೆಯವರ ಕಿಬಿಗೆ ಬಿದ್ದು ದೊಡ್ಡದಾಗಬಹುದು. ಯಾರ ಮಾರ್ಗದರ್ಶನವನ್ನೂ ಕೇಳಲು ಇಷ್ಟಪಡಲಾರಿರಿ. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳಿಂದ ಬಾಧೆಯ ಆಗುವುದು ಗೊತ್ತಾಗುವುದು.
ಮೀನ ರಾಶಿ: ನಿಮ್ಮನ್ನೇ ನೀವು ಪರೀಕ್ಷಿಸಿಕೊಂಡು ತೀರ್ಮಾನಕ್ಕೆ ಬನ್ನಿ. ಇಂದು ನೀವು ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ. ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆ ಇಲ್ಲ. ನಿಮ್ಮವರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸಲಹೆಗಳು ಬರಬಹುದು. ಹಿರಿಯರ ಬಗ್ಗೆ ಗೌರವದ ಮಾತುಗಳನ್ನಾಡಿ, ಅಪಮಾನವಾಗಲು ಬಿಡಬೇಡಿ. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ಪ್ರತ್ಯುತ್ತರವನ್ನು ಕೊಡುವ ಅವಶ್ಯಕತೆಯಿಲ್ಲ. ನಿಮ್ಮ ನಿತ್ಯದ ಕೆಲಸದ ವಿಧಾನವನ್ನು ಮತ್ತಷ್ಟು ಸರಳಮಾಡಿಕೊಳ್ಳಲು ಬಯಸುವಿರಿ. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಆಪ್ತರ ಭೇಟಿಯಾಗಬಹುದು. ಉದ್ಯಮದಲ್ಲಿ ನಿಮಗೆ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದರಿಂದ ಸಣ್ಣ ಕಿರಿಕಿರಿ ಆರಂಭವಾಗಬಹುದು. ದಾಕ್ಷಿಣ್ಯದಿಂದ ಪಡೆದುಕೊಳ್ಳಬೇಕಾದುದನ್ನು ಪಡೆದುಕೊಳ್ಳಲಾರಿರಿ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ. ಹಣದ ವಿಚಾರದಲ್ಲಿ ನಿಮಗೆ ಲೋಭವು ಇರದು. ನೀವು ಇಂದು ಯಾರ ಮಾತನಲ್ಲಿ ನಂಬಿಕೆ ಇಡಲಾರಿರಿ.